ಡಿಸಿಎಂ ಡಿಕೆ ಶಿವಕುಮಾರ್ 
ರಾಜ್ಯ

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಬೆಂಗಳೂರು ಇಮೇಜ್ ಗೆ ಹಾನಿ; ಹೆಣಗಳ ಮುಂದೆ ವಿಪಕ್ಷಗಳ ರಾಜಕೀಯ- ಡಿ.ಕೆ ಶಿವಕುಮಾರ್; Video

ಬಿಜೆಪಿ ಮತ್ತು ಜೆಡಿಎಸ್ ಹೆಣಗಳ ಮುಂದೆ ರಾಜಕೀಯ ಮಾಡುತ್ತಿವೆ. ಘಟನೆಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತುಕೊಳ್ಳಲಿದೆ

ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಉಂಟಾದ ಕಾಲ್ತುಳಿತ ದುರಂತದಿಂದ ಬೆಂಗಳೂರಿನ ಇಮೇಜ್ ಹಾಳಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಈ ಕುರಿತ ಸುದ್ದಿಗಾರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಬೆಂಗಳೂರು ಅಭಿವೃದ್ದಿ ಸಚಿವರು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸಲು ಬಯಸಲ್ಲಾ. ರಾಜ್ಯ ಮತ್ತು ದೇಶದ ಜನರಿಗೆ ಮಾತ್ರ ಉತ್ತರಿಸುತ್ತೇನೆ. ಎಲ್ಲಾ ಬಿಜೆಪಿ ನಾಯಕರು ನಾನ್ ಸೆನ್ಸ್ ಗಳು. ಇದೆಲ್ಲದರ ಮಾಸ್ಟರ್ ಮೈಂಡ್ ಕೂಡಾ ಆಗಿದ್ದಾರೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಹೆಣಗಳ ಮುಂದೆ ರಾಜಕೀಯ ಮಾಡುತ್ತಿವೆ. ಘಟನೆಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತುಕೊಳ್ಳಲಿದೆ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಿಜೆಪಿಯವರು ಹೆಣಗಳ ಮುಂದೆ ರಾಜಕೀಯ ಮಾಡುವುದಾದರೆ ಅವರು ಎಷ್ಟು ಹೆಣಗಳ ಮುಂದೆ ರಾಜಕೀಯ ಮಾಡಿದ್ದಾರೆ ಎಂಬುದರ ಪಟ್ಟಿ ನೀಡುತ್ತೇನೆ. ದುರಂತಕ್ಕೂ ಮುನ್ನಾ ವಿಜಯಯಾತ್ರೆಗೆ ಒತ್ತಾಯಿಸಿದ ಬಿಜೆಪಿ, ಅದು ನಡೆದಿದ್ದರೆ ಏನಾಗುತಿತ್ತು ಎಂದು ಪ್ರಶ್ನಿಸಿತ್ತು. ಈಗ ವಿಜಯ ಯಾತ್ರೆ ನಡೆಸದೆ ಕಾಲ್ತುಳಿತ ಉಂಟಾಗಿದೆ. ಒಂದು ವೇಳೆ ವಿಜಯ ಯಾತ್ರೆ ನಡೆದಿದ್ದರೆ ಪರಿಸ್ಥಿತಿ ಏನಾಗುತಿತ್ತೋ ? ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಇಡೀ ರಾಜ್ಯವೇ ಆಘಾತಗೊಂಡಿದೆ ಎಂದರು.

ತನ್ನ ಮಗನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದಂತೆ ಮಹಿಳೆಯೊಬ್ಬರ ಮನವಿ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಗನನ್ನು ಕಳೆದುಕೊಂಡ ಮಹಿಳೆ ಆ ರೀತಿ ಮನವಿ ಮಾಡಿದ್ದಾರೆ, ಆದರೆ, ಅದನ್ನು ನಾವು ಹೇಗೆ ಮಾಡಲು ಸಾಧ್ಯ? ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಏಕೆಂದರೆ ನಾಳೆ ಏನಾದರೂ ಪ್ರಶ್ನೆಗಳು ಬರಬಹುದು.ಮರಣೋತ್ತರ ಪರೀಕ್ಷೆ ನಡೆದರೆ ಮಾತ್ರ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

ಘಟನೆ ನಂತರ ಸ್ಟೇಡಿಯಂ ಬಳಿಗೆ ತೆರಳಿ, ಗೇಟ್ ಗಳನ್ನು ಪರಿಶೀಲಿಸಿದಾಗ ಅನೇಕ ಸಮಸ್ಯೆಗಳು ಕಂಡುಬಂದಿತು. ಮ್ಯಾಜಿಸ್ಟ್ರೇಟ್ ಈ ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸಲಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ: RSS ಕಾರ್ಯಕ್ರಮಕ್ಕೆ ಹೋಗಲ್ಲ- CJI ಗವಾಯಿ ತಾಯಿ

1st Test: ಮೊದಲ ದಿನದಾಟ ಅಂತ್ಯ, ವಿಂಡೀಸ್ ವಿರುದ್ಧ ಭಾರತ ಮೇಲುಗೈ, 41 ರನ್ ಹಿನ್ನಡೆ!

Allahabad high court: ಮತ್ತೊಂದು ಮಹತ್ವದ ಆದೇಶ ಪ್ರಕಟ, 43 ವರ್ಷಗಳ ಹಿಂದೆ ಪತ್ನಿಯನ್ನು ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ! ಏನಿದು ಪ್ರಕರಣ?

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

SCROLL FOR NEXT