ಡಿಕೆ ಶಿವಕುಮಾರ್ 
ರಾಜ್ಯ

ನಾವು ಕಸ ಮಾಫಿಯಾಗೆ ಹೆದರಲ್ಲ, ನಮ್ಮ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ನಾವು ಯಾವುದೇ ಕೆಲಸವನ್ನು ಕೈಗೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಕೆಲವು ಗುಂಪುಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (PIL) ಸಲ್ಲಿಸುವುದು ಮತ್ತು ತಡೆಯಾಜ್ಞೆ ತರುವುದು ಮುಂತಾದ ಬೆದರಿಕೆ ತಂತ್ರಗಳನ್ನು ಆಶ್ರಯಿಸುತ್ತವೆ.

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಯ ಮರು-ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ತಡೆಯಾಜ್ಞೆಯ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ನಾವು ಕಸ ಮಾಫಿಯಾಕ್ಕೆ ಹೆದರುವುದಿಲ್ಲ. ನಮ್ಮ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹೈಕೋರ್ಟ್‌ನ ಮಧ್ಯಂತರ ತಡೆಯಾಜ್ಞೆಯ ಬಗ್ಗೆ ಕೇಳಿದಕ್ಕೆ ಉತ್ತರಿಸಿದ, ನಗರವನ್ನು ಯಾಕೆ ಸ್ವಚ್ಛಗೊಳಿಸಬಾರದು? ನಾನು ಈ ತೀರ್ಪನ್ನು ಪರಿಶೀಲಿಸುತ್ತೇನೆ. ಹಿಂದೆ 89 ಟೆಂಡರ್‌ಗಳು ಇದ್ದವು, ಅವೆಲ್ಲವೂ ತಮ್ಮದೇ ಆದ ಗುಂಪನ್ನು ರಚಿಸಿಕೊಂಡಿವೆ. ಇದು ಒಂದು ಮಾಫಿಯಾ. ಅವರು ನಮ್ಮನ್ನು ದಾರಿ ತಪ್ಪಿಸಬಹುದು ಎಂದು ಅವರು ಭಾವಿಸುತ್ತಾರೆ. ಇದನ್ನು ನಾವು ನ್ಯಾಯಾಲಯಕ್ಕೆ ಅರ್ಥಮಾಡಿಸುತ್ತೇವೆ ಎಂದರು.

ನಾವು ಯಾವುದೇ ಕೆಲಸವನ್ನು ಕೈಗೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಕೆಲವು ಗುಂಪುಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (PIL) ಸಲ್ಲಿಸುವುದು ಮತ್ತು ತಡೆಯಾಜ್ಞೆ ತರುವುದು ಮುಂತಾದ ಬೆದರಿಕೆ ತಂತ್ರಗಳನ್ನು ಆಶ್ರಯಿಸುತ್ತವೆ. ಇದೆಲ್ಲವೂ ನಮ್ಮ ಸರ್ಕಾರದ ಅಡಿಯಲ್ಲಿ ನಡೆಯುವುದಿಲ್ಲ. ಹಳೆಯ ಆಟಗಾರರನ್ನು ತೆಗೆಯುತ್ತೇವೆ. ಹೊಸಬರಿಗೆ ಅವಕಾಶ ನೀಡುತ್ತೇವೆ ಎಂದರು.

ಈ ವಿಷಯದಲ್ಲಿ ಹೈಕೋರ್ಟ್‌ನ ಆದೇಶವನ್ನು ನಾನು ಪರಿಶೀಲಿಸುತ್ತೇನೆ. ಕೋರ್ಟ್ ಆದೇಶ ಕುರಿತು ಯಾವುದೇ ಕಾಮೆಂಟ್‌ ಮಾಡುವುದಿಲ್ಲ. ಇದಕ್ಕೂ ಮೊದಲು, ಒಂದು ಗುಂಪು ಒಟ್ಟಾಗಿ ಸೇರಿ ಒಂದು ಕಾರ್ಟೆಲ್ ಅನ್ನು ರಚಿಸಿತು. ಅವರು ಸರ್ಕಾರವನ್ನು ನಿಯಂತ್ರಿಸಬಹುದು ಎಂದು ಭಾವಿಸುತ್ತಾರೆ. ಇದು ದೊಡ್ಡ ಮಾಫಿಯಾ, ಮತ್ತು ನಾವು ಈ ವಿಷಯದಲ್ಲಿ ನ್ಯಾಯಾಲಯವನ್ನು ಮನವೊಲಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಮೂಲಗಳ ಪ್ರಕಾರ, ಬೆಂಗಳೂರು ಗಮನಾರ್ಹವಾದ ಕಸದ ಸಮಸ್ಯೆಯನ್ನು ಎದುರಿಸುತ್ತಿದೆ. ಇದು ಪ್ರತಿದಿನ ಸುಮಾರು 5,000 ರಿಂದ 5,757 ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ತ್ವರಿತ ಜನಸಂಖ್ಯೆ ಬೆಳವಣಿಗೆ ಮತ್ತು ಅಸಮರ್ಪಕ ಮೂಲಸೌಕರ್ಯದಿಂದಾಗಿ ನಗರವು ತ್ಯಾಜ್ಯ ನಿರ್ವಹಣೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶ ಮತ್ತು ಆರೋಗ್ಯ ಕಾಳಜಿಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಂದೆ ಕಂಪನಿಯ ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ CM, DCM?; Cartier ವಾಚಿನ ಬೆಲೆ ಎಷ್ಟು ಗೊತ್ತಾ?

PMO ಕಚೇರಿಗೆ 'ಸೇವಾ ತೀರ್ಥ': ದೇಶದಲ್ಲಿರುವ ಎಲ್ಲಾ ರಾಜಭವನಗಳಿಗೆ 'ಲೋಕಭವನ' ಎಂದು ಮರುನಾಮಕರಣ!

ಗೌತಮ್ ಗಂಭೀರ್ ಗೆ ಮೂಗುದಾರ..? ಮೆಂಟರ್ ಆಗಿ MS Dhoni ಎಂಟ್ರಿ.. 2026 ಟಿ20 ವಿಶ್ವಕಪ್ ಗೆ ಸಿದ್ಧತೆ!

ಯುಪಿಯಲ್ಲಿ ಮತ್ತೊಬ್ಬ BLO ಸಾವು; SIR ಕೆಲಸದ ಒತ್ತಡಕ್ಕೆ ಒಂದೇ ವಾರದಲ್ಲಿ ಐವರು ಬಲಿ

SIR ಚರ್ಚೆಗೆ ಕೇಂದ್ರ ಸಿದ್ಧ, 'ಯಾವುದೇ ಷರತ್ತು ಹಾಕಬೇಡಿ' ಎಂದ ಸಚಿವ ರಿಜಿಜು; ಪ್ರತಿಪಕ್ಷಗಳ ಸಭಾತ್ಯಾಗ!

SCROLL FOR NEXT