ಬಾಬುಸಪಾಳ್ಯ ಮುಖ್ಯ ರಸ್ತೆಯಲ್ಲಿ ತ್ಯಾಜ್ಯ Photo | Allen Egenuse J
ರಾಜ್ಯ

ನಗರವನ್ನು ಸ್ವಚ್ಛವಾಗಿಡಲು ನಾಗರಿಕರ ಸಹಾಯ ಕೋರಿದ ಬಿಬಿಎಂಪಿ!

ತ್ಯಾಜ್ಯ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಬಿಡಬ್ಲ್ಯೂಎಸ್‌ಎಂಎಲ್‌ನ ದೊಡ್ಡ ಸವಾಲು ಜನರ ವರ್ತನೆ ಎಂದು ಅವರು ಹೇಳಿದರು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಘನತ್ಯಾಜ್ಯ ನಿರ್ವಹಣಾ (ಎಸ್‌ಡಬ್ಲ್ಯೂಎಂ) ವಿಭಾಗವಾದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್), ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 2,080 ಕಸದ ಬ್ಲ್ಯಾಕ್ ಸ್ಪಾಟ್ ಗಳನ್ನು 400 ಕ್ಕೆ ಇಳಿಸುವ ಮೂಲಕ 'ಹೌದಿನಿ ಕಾಯ್ದೆ'ಯನ್ನು ಜಾರಿಗೆ ತಂದಿದೆ.

ಜೂನ್ 14 ರಿಂದ ಪ್ರತಿ ಬಿಬಿಎಂಪಿ ವಾರ್ಡ್‌ನಲ್ಲಿ ಶನಿವಾರದಂದು ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆ, ತ್ಯಾಜ್ಯವನ್ನು ತೆರವುಗೊಳಿಸುವ ಮತ್ತು ಗೋಡೆಗಳ ಮೇಲೆ ಕಲೆ, ಸಸಿಗಳು ಮತ್ತು ಪಾಟ್ ಗಳನ್ನು ಇಡುವ ಮೂಲಕ ಪ್ರದೇಶವನ್ನು ಸುಂದರಗೊಳಿಸುವ ಗುರಿಯನ್ನು ಹೊಂದಿದೆ.

ಕಳೆದ ಎರಡು ವಾರಗಳಲ್ಲಿ, 396 ಕಸ ಹಾಕುವ ಸ್ಥಳಗಳನ್ನು ತೆರವುಗೊಳಿಸಿದ್ದಾರೆ. ಆದರೂ ಕೆಲವರು ಇನ್ನೂ ರಾತ್ರಿ ಅಥವಾ ಮುಂಜಾನೆ ಬಂದು ಪ್ರಾಣಿಗಳ ತ್ಯಾಜ್ಯ ಮತ್ತು ಕಸವನ್ನು ಸುರಿಯುತ್ತಿರುವುದರಿಂದ ನಾಗರಿಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧಿಕಾರಿಗಳು ನಿರಾಶೆ ವ್ಯಕ್ತಪಡಿಸಿದರು.

ಈ ಸಮಸ್ಯೆ ಮತ್ತು ಯೋಜನೆ ಕುರಿತು ಮಾತನಾಡಿದ ಮುಖ್ಯ ಮಾರ್ಷಲ್ ಅಧಿಕಾರಿ ಕರ್ನಲ್ ರಾಜ್‌ಬೀರ್ ಸಿಂಗ್ (ನಿವೃತ್ತ), “ಜೂನ್ 14 ಮತ್ತು ಜೂನ್ 21 ರಂದು, ಬಿಎಸ್‌ಡಬ್ಲ್ಯೂಎಂಎಲ್‌ನ ಬಿಬಿಎಂಪಿ ಅಧಿಕಾರಿಗಳು, ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಸ್ವಯಂಸೇವಕರು 198 ಬಿಬಿಎಂಪಿ ವಾರ್ಡ್‌ಗಳ ತ್ಯಾಜ್ಯವನ್ನು ತೆರವುಗೊಳಿಸಿದರು.

ಗೋಡೆಗಳಿಗೆ ಬಣ್ಣ ಬಳಿದರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು. ಈ ಶುಚಿಗೊಳಿಸುವ ಕಾರ್ಯಕ್ರಮವು ‘ಸ್ವಚ್ಛ ಬೆಂಗಳೂರು’ ಯೋಜನೆ ಭಾಗವಾಗಿದೆ. ವಾರಾಂತ್ಯದಲ್ಲಿ ಈ ಅಭಿಯಾನ ಮುಂದುವರಿಯುತ್ತದೆ ಮತ್ತು ಅಂತಹ ಬ್ಲ್ಯಾಕ್ ಸ್ಪಾಟ್ ಗಳನ್ನು ಸರಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ತ್ಯಾಜ್ಯ ನಿರ್ವಹಣೆಯನ್ನು ನಿಭಾಯಿಸುವಲ್ಲಿ ಬಿಡಬ್ಲ್ಯೂಎಸ್‌ಎಂಎಲ್‌ನ ದೊಡ್ಡ ಸವಾಲು ಜನರ ವರ್ತನೆ ಎಂದು ಅವರು ಹೇಳಿದರು. ಜನಸಂಖ್ಯೆಯಿಂದಾಗಿ ತ್ಯಾಜ್ಯವು ಕಸದ ರಾಶಿಯಾಗಿ ಹರಡುತ್ತದೆ ಎಂದು ಹೇಳಿದರು.

“ಪ್ರಾಣಿಗಳ ತ್ಯಾಜ್ಯವನ್ನು ಕೆಲವೊಮ್ಮೆ ಪ್ರತಿದಿನ ಎತ್ತುವುದಿಲ್ಲ, ಜನರು ತಮ್ಮ ಮನೆ ಬಾಗಿಲಿಗೆ ಬರುವ ಪೌರಕಾರ್ಮಿಕರಿಗೆ ತ್ಯಾಜ್ಯವನ್ನು ಹಸ್ತಾಂತರಿಸಲು ವಿಫಲರಾಗುತ್ತಾರೆ ಮತ್ತು ಅನೇಕ ವಾಣಿಜ್ಯ ಸಂಸ್ಥೆಗಳು ಬೀದಿ ಮೂಲೆಗಳಲ್ಲಿ ಅಥವಾ ಜಂಕ್ಷನ್‌ಗಳಲ್ಲಿ ಕಸ ಹಾಕುತ್ತವೆ ಎಂದು ಸಿಂಗ್ ಹೇಳಿದರು.

ಕಸ ಎಸೆದು ಸ್ಥಳಗಳನ್ನು ಕೊಳಕು ಮಾಡಿ ನಿಯಮ ಉಲ್ಲಂಘಿಸುವವರನ್ನು ಹಿಡಿಯಲು ಬಿಬಿಎಂಪಿ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಮಾರ್ಷಲ್‌ಗಳು ಮತ್ತು ಬಿಎಸ್‌ಡಬ್ಲ್ಯೂಎಂಎಲ್ ತಂಡಗಳನ್ನು ನಿಯೋಜಿಸುತ್ತದೆ. ಕಸ ಹಾಕುವವರಿಗೆ ದಂಡ ವಿಧಿಸುತ್ತದೆ ಎಂದು ಹೇಳಿದ್ದಾರೆ.

ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಮತ್ತು ಬಿಎಸ್‌ಡಬ್ಲ್ಯೂಎಂಎಲ್‌ನ ಮಾಜಿ ಮುಖ್ಯಸ್ಥ ಬಸವರಾಜ ಕಬಾಡೆ ಅವರು ತಮ್ಮ ವಲಯದಲ್ಲಿ ಇಂತಹ 42 black spot, ಇದ್ದು ಜೂನ್ 21 ರಂದು 8 ಕ್ಕೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು. 3 ನೇ ಹಂತದ, 11 ನೇ ಮುಖ್ಯ ರಸ್ತೆ ಪೀಣ್ಯ ಕೈಗಾರಿಕಾ ಲೇಔಟ್ ನಲ್ಲಿ ಅತಿದೊಡ್ಡ ಕಸದ ಸುರಿಯುವ ಸ್ಥಳವಾಗಿದೆ. ತ್ಯಾಜ್ಯವನ್ನು ತೆರವುಗೊಳಿಸಿದ ನಂತರ, ಗೋಡೆಗಳ ಮೇಲೆ ವರ್ಲಿ ಕಲಾಕೃತಿಯನ್ನು ತಯಾರಿಸಲಾಯಿತು ಮತ್ತು ಸಸಿಗಳನ್ನು ನೆಡಲಾಯಿತು ಎಂದು ಹೇಳಿದರು. ತಂಡಗಳಿಗೆ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಗಸ್ತು ತಿರುಗಲು ಮತ್ತು ದಂಡ ವಿಧಿಸಲು ನಿರ್ದೇಶಿಸಲಾಗಿದೆ" ಎಂದು ಕಬಾಡೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT