ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮದುವೆ ಮಂಟಪದಿಂದ ವರ ಪರಾರಿ; ಪೋಷಕರ ವಿರುದ್ಧ ವರದಕ್ಷಿಣೆ ಬೇಡಿಕೆ ಕೇಸ್!

ಮದುವೆ ಸಮಾರಂಭದ ಹಿಂದಿನ ರಾತ್ರಿ ವರನ ಪೋಷಕರು ವರದಕ್ಷಿಣೆ ಕೇಳಿದ್ದರು, ಆದರೆ ವಧುವಿನ ತಂದೆ ನಿರಾಕರಿಸಿದ ನಂತರ ಮದ್ಯರಾತ್ರಿ ಹೊರಟುಹೋದರು ಎಂದು ವರದಿಯಾಗಿದೆ.

ಬೆಂಗಳೂರು: ವಧುವಿನ ಪೋಷಕರು ವರದಕ್ಷಿಣೆ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡ ವರ ಮತ್ತು ಆತನ ಪೋಷಕರು ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದು, ಅವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದುವೆ ಸಮಾರಂಭದ ಹಿಂದಿನ ರಾತ್ರಿ ವರನ ಪೋಷಕರು ವರದಕ್ಷಿಣೆ ಕೇಳಿದ್ದರು, ಆದರೆ ವಧುವಿನ ತಂದೆ ನಿರಾಕರಿಸಿದ ನಂತರ ಮದ್ಯರಾತ್ರಿ ಹೊರಟುಹೋದರು ಎಂದು ವರದಿಯಾಗಿದೆ.

ಜುಲೈ 13,2024 ರಂದು ಗಾಂಧಿನಗರದ ಕ್ಲಬ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಭಾನುವಾರ ಅದೇ ಕ್ಲಬ್ ನಲ್ಲಿ ಮದುವೆ ನಡೆಯಬೇಕಿತ್ತು. ಯಲಹಂಕ ಬಳಿ ವಾಸಿಸುವ ವಧುವಿನ 61 ವರ್ಷದ ತಂದೆ ಶನಿವಾರ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ವರ ಮತ್ತು ವಧು ಇಬ್ಬರೂ ತಮ್ಮ ಶಾಲಾ ದಿನಗಳಿಂದಲೂ ಪರಸ್ಪರ ಪರಿಚಿತರು. ವರನ ಕುಟುಂಬ ಆನೇಕಲ್ ಬಳಿ ವಾಸಿಸುತ್ತಿದೆ.

ಯುರೋಪ್‌ನಲ್ಲಿ ಕೆಲಸ ಮಾಡುವ ದೂರುದಾರರ ಹಿರಿಯ ಮಗಳು ಫ್ರಾನ್ಸ್ ನಲ್ಲಿ ಕೆಲಸ ಮಾಡುವ ತನ್ನ ಗೆಳೆಯನೊಂದಿಗೆ ಮದುವೆಯಾಗಬೇಕಿತ್ತು. ದೂರುದಾರರು ಫೆಬ್ರವರಿ 28 ರಿಂದ ಮೂರು ದಿನಗಳವರೆಗೆ ಸ್ಥಳವನ್ನು ಕಾಯ್ದಿರಿಸಿದ್ದರು. ಉತ್ತರ ಭಾರತೀಯ ಸಂಪ್ರದಾಯದಂತೆ ಫೆಬ್ರವರಿ 28 ರಂದು ಸಂಗೀತ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 1 ರಂದು ಹಳದಿ ಶಾಸ್ತ್ರ ಮತ್ತು ಮೆಹೆಂದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ, ಸೆ.22ರಿಂದ ಸರ್ವೇ ಆರಂಭ: ಸಿಎಂ ಸಿದ್ದರಾಮಯ್ಯ

15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಪ್ರಮಾಣ ವಚನ: ರಾಜೀನಾಮೆ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಧನಕರ್

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಕೇಸ್: ಸ್ಥಳ ಮಹಜರು ಸಮಯದಲ್ಲಿ ಹಲವು ಅಸ್ಥಿಪಂಜರಗಳ ನೋಡಿದ್ದೇನೆಂದ ಸೌಜನ್ಯಾ ಮಾವ..!

ಪ್ರಧಾನಿ ಮೋದಿ ಮಣಿಪುರ ಭೇಟಿ: ಕೀ, ಪೆನ್ನು, ಲೈಟರ್, ಛತ್ರಿ ನಿಷೇಧ

BRS ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷ; ನಾಲ್ಕನೇ ಸ್ಥಾನದಲ್ಲಿ TDP

SCROLL FOR NEXT