ಸಾಂದರ್ಭಿಕ ಚಿತ್ರ 
ರಾಜ್ಯ

ಕಾಫಿ ಪುಡಿ ಬೆಲೆ ಗಗನಕ್ಕೆ: ಕಳ್ಳರಿಂದ ರಕ್ಷಿಸಲು ಬೆಳೆಗಾರರ ಹರಸಾಹಸ

ಹಲವಾರು ಬೆಳೆಗಾರರು ಕಾಫಿ ತೆಗೆಯುವ ಕೆಲಸವನ್ನು ಪೂರ್ಣಗೊಳಿಸಿದ್ದಾರೆ, ಆದರೆ ಉತ್ಪನ್ನಗಳನ್ನು ಕಳ್ಳರಿಂದ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಮಡಿಕೇರಿ: ಪ್ರಪಂಚದಾದ್ಯಂತ ಕಾಫಿ ಉತ್ಪಾದನೆ ಕಡಿಮೆಯಾದ ನಂತರ, ಕಾಫಿ ಬೀಜಗಳ ಬೆಲೆ ಗಗನಕ್ಕೇರಿದೆ. ಆದಾಗ್ಯೂ, ಅನೇಕ ಬೆಳೆಗಾರರು ಕಾಫಿ ಇಳುವರಿಯನ್ನು ಕಳ್ಳರಿಂದ ರಕ್ಷಿಸಲು ಹೆಚ್ಚುವರಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.

ಸಿದ್ದಾಪುರದಲ್ಲಿ ಕಾಫಿ ಬೆಳೆಗಾರ ಹುಸೇನ್ ಅವರು ಎಸ್ಟೇಟ್ ಆವರಣದಲ್ಲಿರುವ ಶೇಖರಣಾ ಕೊಠಡಿಯೊಳಗೆ ಇಟ್ಟಿದ್ದ 800 ಕೆ.ಜಿ.ಗೂ ಅಧಿಕ ರೊಬಸ್ಟಾ ಕಾಫಿ ಉತ್ಪನ್ನಗಳನ್ನು ಕಳ್ಳರಿಂದ ಕಳೆದುಕೊಂಡಿದ್ದಾರೆ. ಜನವರಿ 26 ರಂದು ಕಳ್ಳತನ ವರದಿಯಾಗಿದೆ.

ಸಂಪೂರ್ಣ ತನಿಖೆಯ ನಂತರ, ಸಿದ್ದಾಪುರ ಪೊಲೀಸರು ಒಂದು ತಿಂಗಳ ನಂತರ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ನಿವಾಸಿಗಳಾದ ಕೆಬಿ ಶಫೀಕ್ (36), ಟಿಜೆ ಫ್ರಾನ್ಸಿಸ್ (29), ಎಂಜಿ ಅನೀಸ್ (24) ಮತ್ತು ಎಂಬಿ ಯಾಸಿನ್ (28) ಎಂಬುವರನ್ನು ಬಂಧಿಸಲಾಗಿದೆ.

ವಿರಾಜಪೇಟೆ ವ್ಯಾಪ್ತಿಯಲ್ಲಿ ವರದಿಯಾದ ಕಾಫಿ ಕಳ್ಳತನ ಪ್ರಕರಣಗಳ ಆರೋಪಿಗಳೊಂದಿಗೆ ಸಂಪರ್ಕ ಇರುವುದು ಪೊಲೀಸರಿಗೆ ತಿಳಿದು ಬಂದಿದೆ. ಬಂಧಿತ ಆರೋಪಿಯಿಂದ ಸುಮಾರು 2,550 ಕೆಜಿ ತೂಕದ 51 ಕಾಫಿ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಲವಾರು ಬೆಳೆಗಾರರು ಕಾಫಿ ತೆಗೆಯುವ ಕೆಲಸವನ್ನು ಪೂರ್ಣಗೊಳಿಸಿದ್ದಾರೆ, ಆದರೆ ಉತ್ಪನ್ನಗಳನ್ನು ಕಳ್ಳರಿಂದ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ವನ್ಯಜೀವಿಗಳ ಓಡಾಟದಿಂದಾಗಿ, ಬೆಳೆಗಾರರು ರಾತ್ರಿ ಸಮಯದಲ್ಲಿ ಎಸ್ಟೇಟ್ ಮಿತಿಯಲ್ಲಿ ಉಳಿಯಲು ಕಷ್ಟವಾಗುತ್ತದೆ.

ಆದರೆ, ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್ಟೇಟ್ ಆವರಣದಾದ್ಯಂತ ಅದರಲ್ಲೂ ಕಾಫಿ ಡ್ರೈಯಿಂಗ್ ಮತ್ತು ಸ್ಟೋರೇಜ್ ಯಾರ್ಡ್ ಎದುರು ಸೋಲಾರ್ ಚಾಲಿತ ಸಿಸಿಟಿವಿಗಳನ್ನು ಅಳವಡಿಸಿದ್ದೇನೆ ಎಂದು ಬಿಳಿಗೇರಿ ಮಿತಿಯ ಕಾಫಿ ಬೆಳೆಗಾರ ವೆಥನ್ ತಿಳಿಸಿದ್ದಾರೆ..

ಇದೇ ವೇಳೆ, ಕಾಫಿ ಬೀಜ ಮಾರಾಟಗಾರರಿಂದ ಬೀನ್ಸ್ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಜಿಲ್ಲೆಯಾದ್ಯಂತ ಕಾಫಿ ವ್ಯಾಪಾರ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಕಾಫಿ ಕಳ್ಳತನವನ್ನು ತಡೆಯಲು ಸಿಸಿಟಿವಿಗಳನ್ನು ಅಳವಡಿಸುವಂತೆ ಎಸ್ಪಿ ಕೆ ರಾಮರಾಜನ್ ಬೆಳೆಗಾರರಿಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

SCROLL FOR NEXT