ಬಿಡಿಎ 
ರಾಜ್ಯ

ಎರಡು ಕ್ಲಬ್ ಹೌಸ್ ಗಳ ಸುಗಮ ನಿರ್ವಹಣೆ: ಬೌರಿಂಗ್ ಕ್ಲಬ್ ಗೆ ವಹಿಸಲು BDA ಮುಂದು

ಬೌರಿಂಗ್ ಕ್ಲಬ್ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಕ್ಲಬ್‌ನ ಉನ್ನತ ಆಡಳಿತ ಮಂಡಳಿಯು ಭೇಟಿ ನೀಡಿ ಅದರ ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದೆ ಎಂದು ಬಿಡಿಎಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಎರಡು ವಸತಿ ಸಂಕೀರ್ಣಗಳಲ್ಲಿರುವ ಕ್ಲಬ್‌ಹೌಸ್‌ಗಳು ಸುಗಮವಾಗಿ ಕಾರ್ಯನಿರ್ವಹಿಸಲು ಮತ್ತು ಸಾರ್ವಜನಿಕ ವಲಯದಲ್ಲಿ ಅವುಗಳ ಪ್ರತಿಷ್ಠೆ ಹೆಚ್ಚಿಸಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬೌರಿಂಗ್ ಕ್ಲಬ್ ಗೆ ನಿರ್ವಹಣೆಗೆ ಒಪ್ಪಿಸಲು ಮುಂದಾಗಿದೆ.

ಬೌರಿಂಗ್ ಕ್ಲಬ್ ಆಡಳಿತ ಮಂಡಳಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಕ್ಲಬ್‌ನ ಉನ್ನತ ಆಡಳಿತ ಮಂಡಳಿಯು ಭೇಟಿ ನೀಡಿ ಅದರ ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದೆ ಎಂದು ಬಿಡಿಎಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಹುಣ್ಣಿಗೆರೆ ಮತ್ತು ಕಣ್ಮಿಣಿಕೆ ವಸತಿ ಯೋಜನೆಗಳು ಜಿಮ್, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಇತರ ಹೊರಾಂಗಣ ಆಟಗಳನ್ನು ಹೊಂದಿರುವ ಕ್ಲಬ್ ಹೌಸ್ ನ್ನು ಹೊಂದಿವೆ. ಒಳಾಂಗಣ ಆಟಗಳಿಗೆ ಪ್ರತ್ಯೇಕ ಸ್ಥಳಗಳನ್ನು ಹೊಂದಿವೆ.

ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವಿನ ದಾಸನಪುರ ಹೋಬಳಿಯಲ್ಲಿರುವ ಹುಣ್ಣಿಗೆರೆ ವಸತಿ ಸಂಕೀರ್ಣವು ಬಿಡಿಎಯ ಅತ್ಯಂತ ದುಬಾರಿ ಉದ್ಯಮವಾಗಿದ್ದು, 322 ವಿಲ್ಲಾಗಳನ್ನು ಹೊಂದಿದೆ, ಅವುಗಳಲ್ಲಿ 172 4 ಬಿಎಚ್‌ಕೆಗಳು ಮತ್ತು 150 3 ಬಿಎಚ್‌ಕೆ ವಸತಿ ಗೃಹಗಳಾಗಿವೆ.

ಬೌರಿಂಗ್ ಕ್ಲಬ್ ಹುಣ್ಣಿಗೆರೆಗೆ ಒಪ್ಪಿಗೆ ಸಿಕ್ಕ ನಂತರವೇ ನಾವು ಹುನ್ನಿಗೆರೆಯಲ್ಲಿ ಮನೆಗಳ ಮಾರಾಟವನ್ನು ಮುಂದುವರಿಸಲು ಯೋಜಿಸಿದ್ದೇವೆ. ಮನೆಮಾಲೀಕರಿಗೆ ಈ ಬೌರಿಂಗ್ ಕ್ಲಬ್ ಮತ್ತು ಅದರ ಶಾಖೆಗಳಲ್ಲಿ ಸದಸ್ಯತ್ವ ಪಡೆಯುವ ಅವಕಾಶವಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಒಂದು ಪ್ರಾಯೋಗಿಕ ಹಂತದಲ್ಲಿ, ಬಿಡಿಎ ತನ್ನ ಮೊದಲ ಒಂದು ಕೋಟಿಗೂ ಹೆಚ್ಚಿನ ಮನೆಗಳಿಗೆ ಸಾರ್ವಜನಿಕ ಪ್ರತಿಕ್ರಿಯೆ ತಿಳಿಯಲು ಮೂರು ತಿಂಗಳ ಹಿಂದೆ ಹುನ್ನಿಗೆರೆಯಲ್ಲಿ 25 ಮನೆಗಳನ್ನು ಹರಾಜು ಹಾಕಿತು.

ಕನ್ಮನಿಕೆಯಲ್ಲಿ, 700 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಬಿಡಿಎ ಮಾರಾಟ ಮಾಡುತ್ತಿದೆ. ಇಲ್ಲಿನ ಕ್ಲಬ್ ಹೌಸ್ ನ್ನು ಬೌರಿಂಗ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ಕ್ಲಬ್ ನಡೆಸುವ ಅನುಭವ ಇರುವುದರಿಂದ ಎಲ್ಲಾ ನಿವಾಸಿಗಳಿಗೆ ಸಹಾಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT