ರಾಜ್ಯ

ದೇಶಕ್ಕೆ ಹೆಮ್ಮೆ ತಂದ ತಿಪಟೂರು IAS ಅಧಿಕಾರಿ ಯಶೋಗಾಥೆ: ಮಧ್ಯಪ್ರದೇಶದಲ್ಲಿ 'ಮಣ್ಣಿನ ಮಗ'ನ ಜಲಕ್ರಾಂತಿ!

ಅರೆ-ಬಂಜರು ಪ್ರದೇಶವನ್ನು ರಾಷ್ಟ್ರೀಯ ಉದಾಹರಣೆಯನ್ನಾಗಿ ಪರಿವರ್ತಿಸಿ ನೀರಿನ ಸಂರಕ್ಷಣೆಯ ಮಾದರಿಗಾಗಿ ಡಾ. ನಾಗಾರ್ಜುನ್ ಗೌಡ ಮತ್ತು ಖಾಂಡ್ವಾ ಕಲೆಕ್ಟರ್ ರಿಷವ್ ಗುಪ್ತಾ ಅವರು ಪ್ರಶಸ್ತಿಯನ್ನು ಒಟ್ಟಿಗೆ ಪಡೆದರು.

ಬೆಂಗಳೂರು/ ನವದೆಹಲಿ: ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ, ಏಕೆಂದರೆ ತುಮಕೂರು ಜಿಲ್ಲೆಯ ತಿಪಟೂರಿನವರಾದ ಐಎಎಸ್ ಅಧಿಕಾರಿ ಡಾ. ನಾಗಾರ್ಜುನ್ ಬಿ. ಗೌಡ ಸದ್ಯ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲಾ ಪಂಚಾಯತ್‌ನ ಸಿಇಒ ಆಗಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವಾಲಯದ ಮಳೆನೀರು ಕೊಯ್ಲು ಕಾರ್ಯಕ್ರಮದಡಿಯಲ್ಲಿ ಖಾಂಡ್ವಾ ಜಿಲ್ಲೆಯನ್ನು ದೇಶದಲ್ಲಿ 'ಅತ್ಯುತ್ತಮ ಪ್ರದರ್ಶನ ನೀಡುವ ಜಿಲ್ಲೆ' ಎಂದು ಘೋಷಿಸಲಾಗಿದ್ದು, 2 ಕೋಟಿ ರೂ. ನಗದು ಪ್ರಶಸ್ತಿಯನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ವಿಜ್ಞಾನ ಭವನದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಸನ್ಮಾನಿಸಿದರು.

ಅರೆ-ಬಂಜರು ಪ್ರದೇಶವನ್ನು ರಾಷ್ಟ್ರೀಯ ಉದಾಹರಣೆಯನ್ನಾಗಿ ಪರಿವರ್ತಿಸಿ ನೀರಿನ ಸಂರಕ್ಷಣೆಯ ಮಾದರಿಗಾಗಿ ಡಾ. ನಾಗಾರ್ಜುನ್ ಗೌಡ ಮತ್ತು ಖಾಂಡ್ವಾ ಕಲೆಕ್ಟರ್ ರಿಷವ್ ಗುಪ್ತಾ ಅವರು ಪ್ರಶಸ್ತಿಯನ್ನು ಒಟ್ಟಿಗೆ ಪಡೆದರು.

ಸಮಾರಂಭದ ನಂತರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಡಾ. ಗೌಡ, ಬರಪೀಡಿತ ತಿಪಟೂರಿನಲ್ಲಿ ತಮ್ಮ ಬಾಲ್ಯದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ನೆನಪು ಮಾಡಿಕೊಂಡರು, ಖಂಡ್ವಾ ನನ್ನ ಊರನ್ನು ಹೋಲುತ್ತದೆ. ನನ್ನ ಪೋಷಕರು ಬೆಟ್ಟೆಗೌಡ ಮತ್ತು ಪ್ರಭಾ ಗೌಡ ಇಬ್ಬರೂ ಶಿಕ್ಷಕರು. ಆದರೆ ಕೃಷಿ ಕುಟುಂಬದಿಂದ ಬಂದವರು, ನೆರೆಹೊರೆಯವರು ನೀರಿಗಾಗಿ ಹೆಣಗಾಡುತ್ತಿರುವುದನ್ನು ನಾನು ನೋಡುತ್ತಾ ಬೆಳೆದೆ. ಸ್ವಲ್ಪವೂ ಫಲ ನೀಡದ ಬೋರ್‌ವೆಲ್‌ಗಳಿಂದ ಕೆಲವು ಬಕೆಟ್‌ಗಳಿಗೆ ನೀರನ್ನು ತುಂಬಿಸಲು ಸೈಕಲ್ ತುಳಿಯುತ್ತಾ ಮೈಲಿಗಟ್ಟಲೇ ಹೋಗುತ್ತಿದ್ದೆ" ಎಂದು ಅವರು ನೆನಪಿಸಿಕೊಂಡರು.

"ಕೆಲವೊಮ್ಮೆ ನಾನು ಆ ಬೋರ್‌ವೆಲ್ ಲಿವರ್ ಅನ್ನು 10 ನಿಮಿಷಗಳವರೆಗೆ ಒತ್ತುತ್ತಿದ್ದೆ, ನಂತರ ಅದು ಅಮೂಲ್ಯವಾದ ಬಕೆಟ್ ನೀರನ್ನು ನೀಡುತ್ತಿತ್ತು ಎಂದು ಅವರು ಹೇಳಿದರು.

ತುಮಕೂರಿನ ಉತ್ತರಕ್ಕೆ ಚಿತ್ರದುರ್ಗವಿದೆ, ಇದು ಕರ್ನಾಟಕದ ಅತ್ಯಂತ ಶುಷ್ಕ ಪ್ರದೇಶಗಳಲ್ಲಿ ಒಂದಾಗಿದೆ, ಇದು ದಶಕಗಳಿಂದ ಬರಗಾಲಕ್ಕೆ ತುತ್ತಾಗಿತ್ತು. ಆ ನೆನಪುಗಳು ಮಂಡ್ಯದ ವೈದ್ಯಕೀಯ ಶಾಲೆಯಲ್ಲಿ ಪುನರಾವರ್ತನೆಯಾದವು . ಅಲ್ಲಿ ನೀರಿನ ಕೊರತೆ ಮತ್ತು ಕಾವೇರಿ ಬಿಕ್ಕಟ್ಟು ನನ್ನ ಮೇಲೆ ಆಳವಾದ ಪರಿಣಾಮವನ್ನು ಬೀರಿತು.

"ಆದ್ದರಿಂದ 'ಜಲ್ ಸಂಚಯ್, ಜನ್ ಭಾಗೀದಾರಿ' ಯೋಜನೆಯನ್ನು ಪ್ರಾರಂಭಿಸಿದಾಗ, ಅದು ವೈಯಕ್ತಿಕವಾಗಿ ನನಗೆ ಖುಷಿ ನೀಡಿತು ಎಂದು ಅವರು ಹೇಳಿದರು. ಡಿಸಿ ರಿಷವ್ ಗುಪ್ತಾ ಅವರ ನೇತೃತ್ವದಲ್ಲಿ ಮತ್ತು ಡಾ. ನಾಗಾರ್ಜುನ ಗೌಡ ಅವಿರತ ಪ್ರಯತ್ನದ ಫಲವಾಗಿ ಖಾಂಡ್ವಾ ಜಿಲ್ಲಾದ್ಯಂತ ನೀರಿನ ಸೌಲಭ್ಯ ದೊರೆತಿದೆ. ಈ ಜಲಕ್ರಾಂತಿ ಚಳುವಳಿಗೆ ಗೌಡ ಮುಂದಾಳತ್ವ ವಹಿಸಿದ್ದರು.

ಗ್ರಾಮ ಲೆಕ್ಕಿಗರಿಂದ ಜಿಲ್ಲಾಧಿಕಾರಿಯವರೆಗೆ ಅಧಿಕಾರಿಗಳು ಹಳ್ಳಿಯಿಂದ ಹಳ್ಳಿಗೆ ತೆರಳಿ ನಿವಾಸಿಗಳು, ರೈತರು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. ಅದರ ಫಲಿತಾಂಶವಾಗಿ 40,00 ನೀರು ಕೊಯ್ಲು ವ್ಯವಸ್ಥೆಗಳು, ಕೆರೆ ಪುನರ್ಭರ್ತಿ ಸೇರಿದಂತೆ 1,29,000 ಕ್ಕೂ ಹೆಚ್ಚು ಸ್ಥಾಪನೆಗಳು ಖಾಂಡ್ವಾವನ್ನು ಮಳೆನೀರು-ಸಕಾರಾತ್ಮಕ ಜಿಲ್ಲೆಯನ್ನಾಗಿ ಪರಿವರ್ತಿಸಿದವು .

"ಮುಂದಿನ ವರ್ಷ, ನಾವು ಅಂತಹ ಹೆಚ್ಚಿನ ನಿರ್ಮಾಣದ ಗುರಿ ಹೊಂದಿದ್ದೇವೆ, ಈ ಪ್ರಶಸ್ತಿ ಖಾಂಡ್ವಾ ಜನರಿಗೆ ಸೇರಿದ್ದು ಎಂದು ಡಾ. ನಾಗಾರ್ಜುನ್ ಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ.ೇ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)

ಬಿಹಾರ ಸೋಲಿನಿಂದ ಕಂಗೆಟ್ಟ ಕೈ ಪಡೆ: ಒಡೆದು ಛಿದ್ರವಾಯ್ತಾ INDIA ಒಕ್ಕೂಟ- ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ?

ಬಿಜೆಪಿ ಉತ್ತಮವೆಂದು ಭಾವಿಸುವುದಾದರೆ ನೀವು ಕಾಂಗ್ರೆಸ್‌ನಲ್ಲಿ ಏಕೆ ಇದ್ದೀರಿ: ಮೋದಿ ಹೊಗಳಿದ ತರೂರ್ ಗೆ ಕಾಂಗ್ರೆಸ್ ತರಾಟೆ

'ಮುಂದಿನ ವರ್ಷ 17ನೇ ಬಜೆಟ್ ಮಂಡಿಸುತ್ತೇನೆ': ನಾಯಕತ್ವ ಬದಲಾವಣೆಯ ವದಂತಿಗೆ ತೆರೆ ಎಳೆದರೇ ಸಿದ್ದರಾಮಯ್ಯ?

SCROLL FOR NEXT