ಆಲಮಟ್ಟಿ ಜಲಾಶಯ 
ರಾಜ್ಯ

ಆಲಮಟ್ಟಿ ಜಲಾಶಯದಲ್ಲಿ 7.556 ಟಿಎಂಸಿ ಅಡಿ ಹೂಳು: ನೀರು ಸಂಗ್ರಹ ಸಾಮರ್ಥ್ಯ ಕುಸಿತ!

2023ರಲ್ಲಿ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‌ಎಸ್‌) ನಡೆಸಿದ ಆಲಮಟ್ಟಿ ಜಲಾಶಯ ಸೇರಿ ರಾಜ್ಯದ ವಿವಿಧ ಜಲಾಶಯಗಳ ಹಿನ್ನೀರಿನ ಹೂಳು ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಅಂಶ ಬಹಿರಂಗವಾಗಿದೆ.

ವಿಜಯಪುರ: ಕರ್ನಾಟಕದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿ ಜಲಾಶಯವು 123.081 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ, ಆದರೆ ಕಳೆದ ಎರಡು ದಶಕಗಳಲ್ಲಿ ಹೂಳು ಶೇಖರಣೆಯಿಂದಾಗಿ 7.556 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ.

2023ರಲ್ಲಿ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‌ಎಸ್‌) ನಡೆಸಿದ ಆಲಮಟ್ಟಿ ಜಲಾಶಯ ಸೇರಿ ರಾಜ್ಯದ ವಿವಿಧ ಜಲಾಶಯಗಳ ಹಿನ್ನೀರಿನ ಹೂಳು ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಅಂಶ ಬಹಿರಂಗವಾಗಿದೆ.

ಅಧ್ಯಯನದ ಸಂಪೂರ್ಣ ವರದಿಯನ್ನು ಆಯಾ ಜಲಾಶಯದ ಮುಖ್ಯ ಎಂಜಿನಿಯರ್‌ಗಳಿಗೂ ಸಲ್ಲಿಸಲಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಶೆ.6.1ನೀರಿನ ಕುಸಿತವಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಹಿಪ್ಪರಗಿ ಜಲಾಶಯದವರೆಗೆ 487 ಚದರ ಕಿ.ಮೀವರೆಗೆ ಮೂರು ತಿಂಗಳ ಅಧ್ಯಯನ ನಡೆಸಲಾಗಿತ್ತು ಎಂದು ಕೆಇಆರ್‌ಎಸ್ ನಿರ್ದೇಶಕ ಕೆ ಜಿ ಮಹೇಶ ತಿಳಿಸಿದರು.

ಬೋಟ್‌ನಲ್ಲಿ ಅಳವಡಿಸಲಾಗಿರುವ ಎಕೋ ಸೌಂಡ್ ಸಿಸ್ಟಂ ಮೂಲಕ ಹೊರಬರುವ ಧ್ವನಿ ತರಂಗಗಳನ್ನು ನೀರಿನ ಆಳದೊಳಗೆ ಬಿಟ್ಟು, ಅದರಿಂದ ಬರುವ ಪ್ರತಿಧ್ವನಿಯ ಆಧಾರದ ಮೇಲೆ ಉಪಕಾರಣದಲ್ಲಿ ಅಳವಡಿಸಿರುವ ನೂತನ ಸಾಫ್ಟ್‌ವೇರ್ ಮೂಲಕ ಎಷ್ಟು ಪ್ರಮಾಣದಲ್ಲಿ ನೀರಿದೆ, ಎಷ್ಟು ಪ್ರಮಾಣದಲ್ಲಿ ಹೂಳಿನ ಅಂಶವಿದೆ ಎಂಬುದನ್ನು ಅಧ್ಯಯನ ನಡೆಸಲಾಗಿತ್ತು. ಅಧ್ಯಯನ ಅಂಕಿ ಅಂಶಗಳ ಸಂಪೂರ್ಣ ವೈಜ್ಞಾನಿಕವಾಗಿ ವಿಶ್ಲೇಷಣೆಗೊಳಿಸಿ, ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಆರಂಭಗೊಂಡ 22ವರ್ಷಗಳಲ್ಲಿ ಅಂದರೆ 2023ವರೆಗೆ ಜಲಾಶಯದಲ್ಲಿ 7.556 ಟಿಎಂಸಿ ಅಡಿ ಹೂಳಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಅಡಿ, ಹೂಳಿನ ಕಾರಣ ಜಲಾಶಯದ ಸಂಗ್ರಹ ಸಾಮರ್ಥ್ಯ 115.552 ಟಿಎಂಸಿ ಅಡಿಗೆ ಕುಸಿತಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೂಳಿನಿಂದ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 115.552 ಟಿಎಂಸಿ ಅಡಿಗೆ ಕುಸಿದರೊ ನೀರಾವರಿ ಸೇರಿದಂತೆ ಮತ್ತಿತರರ ಬಳಕೆಗೆ ಯಾವುದೇ ನೀರಿನ ಕೊರೆತೆ ಉಂಟಾಗುವುದಿಲ್ಲ ಎಂದು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಹೂಳಿನ ಮಟ್ಟವನ್ನು ಅಧ್ಯಯನವು ಹೋಲಿಸಿದೆ. 2022 ರಲ್ಲಿ ಸಮೀಕ್ಷೆ ಮಾಡಲಾದ ನಾರಾಯಣಪುರ ಜಲಾಶಯವು ರಾಜ್ಯದಲ್ಲಿ ಅತಿ ಹೆಚ್ಚು ಹೂಳು ಶೇಖರಣೆಯನ್ನು ದಾಖಲಿಸಿದೆ. ನಾರಾಯಣಪುರವು 10.550 ಟಿಎಂಸಿಎಫ್‌ಟಿ ಹೂಳು ಸಂಗ್ರಹಿಸಿತ್ತು, ಇದರ ಪರಿಣಾಮವಾಗಿ 27.292 ಟಿಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯದ ನಷ್ಟವಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಹೂಳಿನಿಂದಾಗಿ ನೀರು ಸಂಗ್ರಹ ನಷ್ಟದ ವಿಷಯದಲ್ಲಿ ತುಂಗಭದ್ರಾ ಜಲಾಶಯ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶವಿರೋಧಿ ಚಟುವಟಿಕೆ ಆರೋಪ: ಕಾಶ್ಮೀರ ಟೈಮ್ಸ್ ದಿನಪತ್ರಿಕೆ ಕಚೇರಿಯ SIA ದಾಳಿ; Ak-47 ಕಾರ್ಟ್ರಿಡ್ಜ್‌, ಗ್ರೆನೇಡ್ ಲಿವರ್‌ ವಶಕ್ಕೆ!

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರದ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ, 24 ಗಂಟೆಯೊಳಗೆ ಗಡಿಪಾರು!

"ಕೆಲಸದ ಹೊರೆ ನಿರ್ವಹಣೆ ಅಗತ್ಯವಿದ್ದರೆ, IPL ಬಿಡಿ": ಶುಭ್‌ಮನ್ ಗಿಲ್‌ಗೆ ಖಡಕ್ ಸಂದೇಶ!

ಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!

SCROLL FOR NEXT