ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಸೋಮವಾರ ಹಾಸನದ ಹಾಸನಾಂಬ ದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರೊಂದಿಗೆ ಸಂವಾದ ನಡೆಸಿದರು. 
ರಾಜ್ಯ

ಹಾಸನಾಂಬ ಉತ್ಸವ: ಸೋಮವಾರ ಒಂದೇ ದಿನ 1.5 ಲಕ್ಷ ಭಕ್ತರಿಂದ ದೇವಿಯ ದರ್ಶನ

ಬೆಳಿಗ್ಗೆ 11 ಗಂಟೆಗೆ ಸರದಿಯಲ್ಲಿ ನಿಂತ ಜಿಲ್ಲಾಧಿಕಾರಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ದರ್ಶನ ಪಡೆದು, ದೇವಾಲಯದಿಂದ ಹೊರಬಂದರು.

ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಸೋಮವಾರ ಒಂದೇ ದಿನ 1.5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಕೂಡ ಸರದಿಯಲ್ಲಿ ನಿಂತು ಸಾರ್ವಜನಿಕರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಕಾಯ್ದು ದರ್ಶನ ಪಡೆದರು.

ಬೆಳಿಗ್ಗೆ 11 ಗಂಟೆಗೆ ಸರದಿಯಲ್ಲಿ ನಿಂತ ಜಿಲ್ಲಾಧಿಕಾರಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ದರ್ಶನ ಪಡೆದು, ದೇವಾಲಯದಿಂದ ಹೊರಬಂದರು.

ಬಳಿಕ ಭಕ್ತರೊಂದಿಗೆ ಸಂವಾದ ನಡೆಸಿ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ದೇವಾಲಯದಲ್ಲಿ ಒದಗಿಸಲಾದ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತ್ವರಿತ ದರ್ಶನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದೇವಿಯ ಮುಂದೆ ಎಲ್ಲಾ ಜನರು ಸಮಾನರು. ದರ್ಶನಕ್ಕಾಗಿ ಸಾಮಾನ್ಯ ಸರತಿಯನ್ನು ಬಳಸುವುದು ಉತ್ತಮ ಎಂದು ಹೇಳಿದರು.

ಏತನ್ಮಧ್ಯೆ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ನೆರೆಯ ಜಿಲ್ಲೆಗಳು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಅಕ್ಟೋಬರ್ 18 ರ ಮೊದಲು ದೇವಾಲಯಕ್ಕೆ ಭೇಟಿ ನೀಡಿ ಆರಾಮದಾಯಕ ದರ್ಶನ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಟ್ರಂಪ್ ಗೇ ಠಕ್ಕರ್: ವಿರೋಧದ ನಡುವೆಯೇ ಭಾರತದಲ್ಲಿ ಗೂಗಲ್ ಭಾರಿ ಹೂಡಿಕೆ, ಪ್ರಧಾನಿ ಮೋದಿಗೆ ಸುಂದರ್ ಪಿಚೈ ವಿವರಣೆ!

ಟ್ರಂಪ್‌ರನ್ನು Pak PM ಹೊಗಳುತ್ತಿದ್ದಾಗ ಹಿಂದೆ ನಿಂತಿದ್ದ Italy ಪ್ರಧಾನಿ ಜಾರ್ಜಿಯಾ ಮೆಲೋನಿ ರಿಯಾಕ್ಷನ್ Video Viral!

ಬೇಗ ಹೋಗು, ನನ್ನ ಉಳಿಸಿಕೊಡು: ರಾಜು ತಾಳಿಕೋಟೆಯ ಕೊನೆಯ 6 ನಿಮಿಷದ ಘಟನೆ ವಿವರಿಸಿದ Biggboss ವಿಜೇತ ಶೈನ್ ಶೆಟ್ಟಿ!

ಸದ್ಯಕ್ಕಿಲ್ಲ ಬ್ರೇಕ್.. 'ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅ.18ರವರೆಗೂ ಭಾರಿ ಮಳೆ': ಹವಾಮಾನ ಇಲಾಖೆ!

ಕಳಂಕಿತ ಸಿಎಂ, ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಕುರಿತ JPCಗೆ ಇಂಡಿಯಾ ಬಣ ಬಹಿಷ್ಕಾರ

SCROLL FOR NEXT