ಹೆದ್ದಾರಿ ದಾಟುವ ಶಾಲಾ ವಿದ್ಯಾರ್ಥಿಗಳು  
ರಾಜ್ಯ

Gadag: ಶೌಚಾಲಯ ಇಲ್ಲದ ಸರ್ಕಾರಿ ಶಾಲೆ; ಬಹಿರ್ದೆಸೆಗೆ ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟುವ ವಿದ್ಯಾರ್ಥಿಗಳು!

ಪಾಲಕರ ಒತ್ತಡದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವಂತೆ ಸ್ಥಳೀಯ ಆಡಳಿತಕ್ಕೆ ಶಾಲಾ ಸಮಿತಿ ಮನವಿ ಮಾಡಿದೆ.

ಗದಗ: ಗದಗ ಸಮೀಪದ ಹೊಂಬಳದ ಲಿಂಗಪ್ಪ ಶಂಕರಪ್ಪ ಮೈಲಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸೂಕ್ತ ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪ್ರಕೃತಿ ಕೂಗಿಗೆ ತೀವ್ರ ತೊಂದರೆಪಡುವಂತಾಗಿದೆ.

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋ-ಎಡ್ ಶಾಲೆಯಲ್ಲಿ ಪಿಂಕ್ ಶೌಚಾಲಯವಿದ್ದರೂ ನೀರು ಹರಿಯದ ಕಾರಣ ಜನನಿಬಿಡ ರಾಜ್ಯ ಹೆದ್ದಾರಿಯಾಗಿರುವ ನರಗುಂದ ರಸ್ತೆ ದಾಟಿದ ಬಳಿಕ ಬಯಲು ಬಹಿರ್ದೆಸೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

1990ರಲ್ಲಿ ಶಾಲೆ ಸ್ಥಾಪನೆಯಾದಾಗ ಎರಡು ಸಣ್ಣ ಶೌಚಾಲಯಗಳಿದ್ದವು. ಹಲವು ವರ್ಷಗಳಿಂದ ಶೌಚಾಲಯದ ನಿರ್ವಹಣೆ ಇಲ್ಲದೇ ಇರುವುದರಿಂದ ಮಳೆ, ಗಾಳಿಗೆ ಛಾವಣಿ ಶೀಟ್‌ಗಳು ಹಾರಿ ಹೋಗಿವೆ. ಪ್ರಕೃತಿಯ ಕರೆಗೆ ಹೋಗಲು ತಮ್ಮ ಮಕ್ಕಳು ನಿತ್ಯ ಹೆದ್ದಾರಿಯನ್ನು ದಾಟಬೇಕು ಎಂಬುದು ಪೋಷಕರ ಚಿಂತೆಗೆ ಕಾರಣವಾಗಿದೆ. ಕೆಲವು ಹುಡುಗಿಯರು ತಮ್ಮ ಮನೆಗಳಿಗೆ ಹೋಗುತ್ತಾರೆ ಅಥವಾ ಬೇರೆಡೆ ಹೋಗುತ್ತಾರೆ.

ಪಾಲಕರ ಒತ್ತಡದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವಂತೆ ಸ್ಥಳೀಯ ಆಡಳಿತಕ್ಕೆ ಶಾಲಾ ಸಮಿತಿ ಮನವಿ ಮಾಡಿದೆ. ಇದನ್ನು ಹೊರತುಪಡಿಸಿದರೆ ಶಾಲೆಯಲ್ಲಿ ಬೋಧನಾ ಗುಣಮಟ್ಟ ಹಾಗೂ ಪಠ್ಯೇತರ ಚಟುವಟಿಕೆಗಳು ಉತ್ತಮವಾಗಿವೆ ಎನ್ನುತ್ತಾರೆ ಪಾಲಕರು. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿರುವುದಾಗಿ ಶಾಲಾ ಆಡಳಿತ ಮಂಡಳಿ ಹೇಳಿದೆ.

ವಿದ್ಯಾರ್ಥಿಗಳು ರಸ್ತೆ ದಾಟಬೇಕಾಗಿರುವುದರಿಂದ ಪಾಲಕರು ಆತಂಕಗೊಂಡಿದ್ದು, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಶೌಚಾಲಯ ನಿರ್ಮಿಸಿಕೊಡುವಂತೆ ಶಾಲಾ ಸಮಿತಿಗೆ ಮನವಿ ಮಾಡಿದ್ದೇವೆ ಎಂದು ಸ್ಥಳೀಯ ನಿವಾಸಿ ಬಸವರಾಜ ತಿಮ್ಮಗೊನ್ನವರ ಹೇಳಿದರು.

ಹಿರಿಯ ಶಿಕ್ಷಕ ರೂಪೇಶಕುಮಾರ್ ಮಾತನಾಡಿ, ‘ಶಿಕ್ಷಣ ಇಲಾಖೆಯ ಸೂಚನೆಯಂತೆ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯತಿಗೆ ಮನವಿ ಪತ್ರ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ’ ಎಂದು ತಿಳಿಸಿದರು. ಶೌಚಾಲಯ ನಿರ್ಮಾಣ ಮಾಡಬೇಕಾದದ್ದು ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Russia sanctions: ರಷ್ಯಾ ವಿರುದ್ಧ ಕಠಿಣ ನಿಲುವು; ಎರಡನೇ ಹಂತದ ನಿರ್ಬಂಧ ವಿಧಿಸಲು ಡೊನಾಲ್ಡ್ ಟ್ರಂಪ್ ಸಿದ್ಧತೆ!

ವಿಧಾನ ಪರಿಷತ್‌ ನಾಮನಿರ್ದೇಶನಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್: ಆರತಿ ಕೃಷ್ಣ, ಪತ್ರಕರ್ತ ಶಿವಕುಮಾರ್ ಸೇರಿ ನಾಲ್ವರ ನೇಮಕ

ತುಳು ರಾಜ್ಯದ ಎರಡನೇ ಅಧಿಕೃತ ಭಾಷೆ ಬೇಡಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ: ಡಿ.ಕೆ. ಶಿವಕುಮಾರ್

ಕನ್ನಡದ 'ಗಜ' ಖ್ಯಾತಿಯ ನಟಿ ನವ್ಯಾ ನಾಯರ್ ಗೆ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ! ಕಾರಣ ಏನು ಗೊತ್ತಾ? Video ನೋಡಿ...

ರಾಜ್ಯದಲ್ಲಿ ಹೆಚ್ಚುತ್ತಿರುವ ಹದಿಹರೆಯದವರ ಗರ್ಭಧಾರಣೆ ಪ್ರಕರಣ: ಕಠಿಣ ಕಾನೂನುಗಳ ಹೊರತಾಗಿಯೂ ಇನ್ನೂ ಅಸ್ತಿತ್ವದಲ್ಲಿ ಬಾಲ್ಯವಿವಾಹ!

SCROLL FOR NEXT