ಕಠ್ಮಂಡು ಮೇಯರ್ ಬಾಲೆನ್ 
ರಾಜ್ಯ

ನೇಪಾಳದ ಪಿಎಂ ಹುದ್ದೆಗೆ ಕಠ್ಮಂಡು ಮೇಯರ್ ಹೆಸರು: ಕರ್ನಾಟಕಕ್ಕೂ- ಬಾಲೆನ್ ಗೂ ಇದೆ ನಂಟು!

ನೇಪಾಳದ ಮುಂದಿನ ಪ್ರಧಾನಿ ಹುದ್ದೆಗೆ ಕಠಮಂಡುವಿನ ಮೇಯರ್ ಬಾಲೇಂದ್ರ ಶಾ ಅಥವಾ ಬಾಲೆನ್ ಶಾ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಈ ಬಾಲೆನ್ ಶಾಗೂ ಕರ್ನಾಟಕಕ್ಕೂ ನಂಟಿದೆ ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ.

ಬೆಳಗಾವಿ: ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳದಲ್ಲಿ ಯುವಜನರ ಪ್ರತಿಭಟನೆಯ ಬಳಿಕ ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈಗ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನೂ ಆಯ್ಕೆ ಮಾಡಲಾಗಿದೆ.

ಆದರೆ, ನೇಪಾಳದ ಮುಂದಿನ ಪ್ರಧಾನಿ ಹುದ್ದೆಗೆ ಕಠಮಂಡುವಿನ ಮೇಯರ್ ಬಾಲೇಂದ್ರ ಶಾ ಅಥವಾ ಬಾಲೆನ್ ಶಾ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಈ ಬಾಲೆನ್ ಶಾಗೂ ಕರ್ನಾಟಕಕ್ಕೂ ನಂಟಿದೆ ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ.

ಕಠ್ಮಂಡುವಿನ ಮೇಯರ್ ಆಗಿಯೂ ಸೇವೆ ಸಲ್ಲಿಸುತ್ತಿರುವ 35 ವರ್ಷದ ರ‍್ಯಾಪರ್ ಬೆಳಗಾವಿಯ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿದರು. 2022 ರಲ್ಲಿ ಬಾಲೆನ್ ಮೇಯರ್ ಆಗಿ ಅಧಿಕಾರ ವಹಿಸಿಕೊಂಡರು, ಈ ಹುದ್ದೆಗೆ ಆಯ್ಕೆಯಾದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಾಪಕ ಸದಸ್ಯರಾದ ಡಾ. ಶ್ರೇಯಸ್, ವಿದೇಶಿ ವಿದ್ಯಾರ್ಥಿಗಳಿಗೆ ಪಿಐಒಕೋಟಾ ಅಡಿಯಲ್ಲಿ ಪ್ರವೇಶ ಪಡೆದ ನಂತರ 2016 ರಿಂದ 2018 ರವರೆಗೆ ಬಾಲೆನ್ ತಮ್ಮ ಎಂ.ಟೆಕ್ ಯಶಸ್ವಿಯಾಗಿ ಪೂರ್ಣಗೊಳಿಸಿದರು ಎಂದು ಹೇಳಿದರು.

ಆ ಸಮಯದಲ್ಲಿ, ಪ್ರವೀಣ್ ಶ್ರೇಸ್ತಾ ಮತ್ತು ಸುನಿಲ್ ಲಾಮ್ಸಾಲ್ ನೇಪಾಳದ ಬಾಲೆನ್ ಜೊತೆಗೆ ನಿಟ್ಟೆ ಸಂಸ್ಥೆಗೆ ಪ್ರವೇಶ ಪಡೆದ ಇತರ ಇಬ್ಬರು ವಿದ್ಯಾರ್ಥಿಗಳಾಗಿದ್ದರು. ನೇಪಾಳದಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳು ಭಾರತದಲ್ಲಿ ವಿವಿಧ ಪಿಜಿ ಕೋರ್ಸ್‌ಗಳನ್ನು ಆರಿಸಿಕೊಂಡರು ಎಂದು ಅವರು ಹೇಳಿದರು.

ಬಾಲೆನ್ ಎಂದು ಹೆಚ್ಚು ಪ್ರಸಿದ್ಧರಾಗಿರುವ ಅವರು ನೇಪಾಳದ ರಾಜಧಾನಿ ಕಠ್ಮಂಡುವಿನ ಪ್ರಸ್ತುತ ಮೇಯರ್. ರಾಜಕೀಯಕ್ಕೆ ಅವರ ಪ್ರವೇಶವನ್ನು ಅಸಾಂಪ್ರದಾಯಿಕವೆಂದು ಪರಿಗಣಿಸಲಾಗಿತ್ತು. ಆದರೆ ನೇಪಾಳ ದೇಶ ಈಗ ಎದುರಿಸುತ್ತಿರುವ ಬಿಕ್ಕಟ್ಟಿನ ನಡುವೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಯುವಜನರ ಗುಂಪು ಬಾಲೆನ್ ಶಾ ಅವರನ್ನು ಪರಿಗಣಿಸಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ABVP ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು? Video

ಬೆಂಗಳೂರು: ಮಹಿಳೆ ಮೇಲೆ ಹಲ್ಲೆ; BMTC ಡ್ರೈವರ್ ತಾತ್ಕಾಲಿಕ ವಜಾ; ಮುತ್ತಿಕ್ಕುವಂತೆ ಪೀಡಿಸಿದ ಚಾಲಕ ಆರೀಫ್‍ಗೆ ಧರ್ಮದೇಟು!

'ಅಶ್ಲೀಲ ದೃಶ್ಯ'ದಲ್ಲಿ ನಟಿಸುವಂತೆ ನನ್ನನ್ನು ಒತ್ತಾಯಿಸಲಾಗಿತ್ತು: ಶ್ರೀರಾಮ ಚಂದ್ರ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ ಏನು?

ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ: ವಿನಯ್ ಜತೆ ಸುತ್ತಾಟ ಎಂದವರಿಗೆ ರಮ್ಯಾ ತಿರುಗೇಟು

SCROLL FOR NEXT