ಸಾಂದರ್ಭಿಕ ಚಿತ್ರ 
ರಾಜ್ಯ

ಮಗಳ ಕಾಲೇಜು ಶುಲ್ಕ ಭರಿಸಲು ಹಣದ ಸಮಸ್ಯೆ: ಮಂಗಳಸೂತ್ರ ಕೊಟ್ಟ ತಾಯಿ

ಕಾವೇರಿಯ ಪೋಷಕರು ತಮ್ಮ ಮಗಳೊಂದಿಗೆ ಪ್ರವೇಶದ ಸಮಯದಲ್ಲಿ ಸಲ್ಲಿಸಿದ ಮೂಲ ದಾಖಲೆಗಳನ್ನು ಕೇಳಲು ಕಾಲೇಜಿಗೆ ಹೋದಾಗ, ಕಾಲೇಜು ಅಧ್ಯಕ್ಷರು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಾಯಿಸಿದರು.

ಕೊಪ್ಪಳ: ಭಾರತೀಯ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣು ಧರಿಸುವ ಮಂಗಳಸೂತ್ರಕ್ಕೆ ಬಹಳ ಮಹತ್ವವಿದೆ. ಪತಿ ನಿಧನ ಹೊಂದುವವರೆಗೆ ಕುತ್ತಿಗೆಯಿಂದ ಮಂಗಳಸೂತ್ರ ತೆಗೆಯುವುದಿಲ್ಲ. ಆದರೆ ಕೊಪ್ಪಳದ ರೇಣುಕಮ್ಮ ವಾಲಿಕರ್ ತನ್ನ ಮಗಳ ನರ್ಸಿಂಗ್ ಶಿಕ್ಷಣದ ಕನಸನ್ನು ಮುಂದುವರಿಸಲು ಅನಿವಾರ್ಯವಾಗಿ ಮಂಗಳಸೂತ್ರ ಮಾರಬೇಕಾದ ಪರಿಸ್ಥಿತಿ ಬಂತು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್‌ನ ಪ್ರಥಮ ವರ್ಷದ ವಿದ್ಯಾರ್ಥಿನಿ ಕಾವೇರಿ ಕೆಲವು ದಿನಗಳ ಹಿಂದೆ ಪ್ರವೇಶ ಸಮಯದಲ್ಲಿ 10,000 ರೂಪಾಯಿ ಶುಲ್ಕವನ್ನು ಪಾವತಿಸಿದ್ದರು. ಉಳಿದ ಮೊತ್ತ 90 ಸಾವಿರ ರೂಪಾಯಿ ಪಾವತಿಸಲು ಹೆಚ್ಚಿನ ಸಮಯ ಕೇಳಿದ್ದರು. ಈ ಮಧ್ಯೆ, ಅವರಿಗೆ ಗದಗದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಉಚಿತ ಮೆರಿಟ್ ಸೀಟು ಸಿಕ್ಕಿತು.

ಕಾವೇರಿಯ ಪೋಷಕರು ತಮ್ಮ ಮಗಳೊಂದಿಗೆ ಪ್ರವೇಶದ ಸಮಯದಲ್ಲಿ ಸಲ್ಲಿಸಿದ ಮೂಲ ದಾಖಲೆಗಳನ್ನು ಕೇಳಲು ಕಾಲೇಜಿಗೆ ಹೋದಾಗ, ಕಾಲೇಜು ಅಧ್ಯಕ್ಷರು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಾಯಿಸಿದರು.

ಅವರ ಬಳಿ ಹಣವಿಲ್ಲದಿದ್ದರೆ, ಮಂಗಳಸೂತ್ರ ಸೇರಿದಂತೆ ಆಭರಣಗಳನ್ನು ನೀಡಬೇಕು ಎಂದು ಹೇಳಿದರು. ಬೇರೆ ದಾರಿಯಿಲ್ಲದೆ, ರೇಣುಕಮ್ಮ ತನ್ನ ಮಂಗಳಸೂತ್ರ ಮತ್ತು ಇತರ ಚಿನ್ನದ ಆಭರಣಗಳನ್ನು ತೆಗೆದು ಅಧ್ಯಕ್ಷರಿಗೆ ಕೊಟ್ಟರು.

ನನ್ನ ಗಂಡನ ಮುಂದೆ ನನ್ನ ಮಂಗಳಸೂತ್ರ ತೆಗೆಯಬೇಕಾಗಿ ಬಂದಿದ್ದು ನನಗೆ ಬೇಸರ ತಂದಿದೆ ಎಂದು ರೇಣುಕಮ್ಮ ಹೇಳುತ್ತಾರೆ.

ಆಭರಣಗಳನ್ನು ಕೇಳಲಿಲ್ಲ

ಈ ಬಗ್ಗೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಚಿನವಲರ್ ಅವರು ಪ್ರತಿಕ್ರಿಯೆ ನೀಡಿ, ಮಂಗಳಸೂತ್ರ ಅಥವಾ ಆಭರಣಗಳನ್ನು ಕೇಳಲಿಲ್ಲ. ವಿದ್ಯಾರ್ಥಿ ಶುಲ್ಕವನ್ನು ಪಾವತಿಸಿರಲಿಲ್ಲ. ನಾನು ಶುಲ್ಕವನ್ನು ಕೇಳಿದ್ದಾಗ ನಾಳೆ ಕಟ್ಟುತ್ತೇನೆ, ಇನ್ನೊಂದು ದಿನ ಕಟ್ಟುತ್ತೇನೆ ಎಂದು ಮುಂದೂಡುತ್ತಲೇ ಬರುತ್ತಿದ್ದರು. ನಂತರ ವಿದ್ಯಾರ್ಥಿನಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತು, ನಮ್ಮ ಬಳಿ ಕೊಟ್ಟಿದ್ದ ಮೂಲ ದಾಖಲೆಗಳನ್ನು ಕೇಳುತ್ತಿದ್ದಳು, ಆದ್ದರಿಂದ ನಾನು ಉಳಿದ ಶುಲ್ಕವನ್ನು ಪಾವತಿಸಲು ಕೇಳಿದೆ. ಅವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದರು. ಅವಳ ತಾಯಿ ತನ್ನ ಮಂಗಳಸೂತ್ರ ಮತ್ತು ಆಭರಣಗಳನ್ನು ತೆಗೆದು ನನಗೆ ಕೊಟ್ಟರು. ಆದರೆ ನಾವು ಮರುದಿನ ಅವುಗಳನ್ನು ಹಿಂತಿರುಗಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!

Asia Cup Rising Stars T20: ಓಮನ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶ

ಶಬರಿಮಲೆಯಲ್ಲಿ ಜನದಟ್ಟಣೆ: ಎರಡು ದಿನದಲ್ಲಿ 2 ಲಕ್ಷ ಅಯ್ಯಪ್ಪ ಭಕ್ತರ ಭೇಟಿ; ಮಹಿಳಾ ಭಕ್ತೆ ಸಾವು!

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಿಂದ ಗಡೀಪಾರು!

POCSO case: ಯಡಿಯೂರಪ್ಪಗೆ ಸಂಕಷ್ಟ; ಡಿಸೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

SCROLL FOR NEXT