ಸಾಂದರ್ಭಿಕ ಚಿತ್ರ 
ರಾಜ್ಯ

ಮಗಳ ಕಾಲೇಜು ಶುಲ್ಕ ಭರಿಸಲು ಹಣದ ಸಮಸ್ಯೆ: ಮಂಗಳಸೂತ್ರ ಒತ್ತೆಯಿಟ್ಟ ತಾಯಿ

ಕಾವೇರಿಯ ಪೋಷಕರು ತಮ್ಮ ಮಗಳೊಂದಿಗೆ ಪ್ರವೇಶದ ಸಮಯದಲ್ಲಿ ಸಲ್ಲಿಸಿದ ಮೂಲ ದಾಖಲೆಗಳನ್ನು ಕೇಳಲು ಕಾಲೇಜಿಗೆ ಹೋದಾಗ, ಕಾಲೇಜು ಅಧ್ಯಕ್ಷರು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಾಯಿಸಿದರು.

ಕೊಪ್ಪಳ: ಭಾರತೀಯ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣು ಧರಿಸುವ ಮಂಗಳಸೂತ್ರಕ್ಕೆ ಬಹಳ ಮಹತ್ವವಿದೆ. ಪತಿ ನಿಧನ ಹೊಂದುವವರೆಗೆ ಕುತ್ತಿಗೆಯಿಂದ ಮಂಗಳಸೂತ್ರ ತೆಗೆಯುವುದಿಲ್ಲ. ಆದರೆ ಕೊಪ್ಪಳದ ರೇಣುಕಮ್ಮ ವಾಲಿಕರ್ ತನ್ನ ಮಗಳ ನರ್ಸಿಂಗ್ ಶಿಕ್ಷಣದ ಕನಸನ್ನು ಮುಂದುವರಿಸಲು ಅನಿವಾರ್ಯವಾಗಿ ಮಂಗಳಸೂತ್ರ ಮಾರಬೇಕಾದ ಪರಿಸ್ಥಿತಿ ಬಂತು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್‌ನ ಪ್ರಥಮ ವರ್ಷದ ವಿದ್ಯಾರ್ಥಿನಿ ಕಾವೇರಿ ಕೆಲವು ದಿನಗಳ ಹಿಂದೆ ಪ್ರವೇಶ ಸಮಯದಲ್ಲಿ 10,000 ರೂಪಾಯಿ ಶುಲ್ಕವನ್ನು ಪಾವತಿಸಿದ್ದರು. ಉಳಿದ ಮೊತ್ತ 90 ಸಾವಿರ ರೂಪಾಯಿ ಪಾವತಿಸಲು ಹೆಚ್ಚಿನ ಸಮಯ ಕೇಳಿದ್ದರು. ಈ ಮಧ್ಯೆ, ಅವರಿಗೆ ಗದಗದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಉಚಿತ ಮೆರಿಟ್ ಸೀಟು ಸಿಕ್ಕಿತು.

ಕಾವೇರಿಯ ಪೋಷಕರು ತಮ್ಮ ಮಗಳೊಂದಿಗೆ ಪ್ರವೇಶದ ಸಮಯದಲ್ಲಿ ಸಲ್ಲಿಸಿದ ಮೂಲ ದಾಖಲೆಗಳನ್ನು ಕೇಳಲು ಕಾಲೇಜಿಗೆ ಹೋದಾಗ, ಕಾಲೇಜು ಅಧ್ಯಕ್ಷರು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಾಯಿಸಿದರು.

ಅವರ ಬಳಿ ಹಣವಿಲ್ಲದಿದ್ದರೆ, ಮಂಗಳಸೂತ್ರ ಸೇರಿದಂತೆ ಆಭರಣಗಳನ್ನು ನೀಡಬೇಕು ಎಂದು ಹೇಳಿದರು. ಬೇರೆ ದಾರಿಯಿಲ್ಲದೆ, ರೇಣುಕಮ್ಮ ತನ್ನ ಮಂಗಳಸೂತ್ರ ಮತ್ತು ಇತರ ಚಿನ್ನದ ಆಭರಣಗಳನ್ನು ತೆಗೆದು ಅಧ್ಯಕ್ಷರಿಗೆ ಕೊಟ್ಟರು.

ನನ್ನ ಗಂಡನ ಮುಂದೆ ನನ್ನ ಮಂಗಳಸೂತ್ರ ತೆಗೆಯಬೇಕಾಗಿ ಬಂದಿದ್ದು ನನಗೆ ಬೇಸರ ತಂದಿದೆ ಎಂದು ರೇಣುಕಮ್ಮ ಹೇಳುತ್ತಾರೆ.

ಆಭರಣಗಳನ್ನು ಕೇಳಲಿಲ್ಲ

ಈ ಬಗ್ಗೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಚಿನವಲರ್ ಅವರು ಪ್ರತಿಕ್ರಿಯೆ ನೀಡಿ, ಮಂಗಳಸೂತ್ರ ಅಥವಾ ಆಭರಣಗಳನ್ನು ಕೇಳಲಿಲ್ಲ. ವಿದ್ಯಾರ್ಥಿ ಶುಲ್ಕವನ್ನು ಪಾವತಿಸಿರಲಿಲ್ಲ. ನಾನು ಶುಲ್ಕವನ್ನು ಕೇಳಿದ್ದಾಗ ನಾಳೆ ಕಟ್ಟುತ್ತೇನೆ, ಇನ್ನೊಂದು ದಿನ ಕಟ್ಟುತ್ತೇನೆ ಎಂದು ಮುಂದೂಡುತ್ತಲೇ ಬರುತ್ತಿದ್ದರು. ನಂತರ ವಿದ್ಯಾರ್ಥಿನಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತು, ನಮ್ಮ ಬಳಿ ಕೊಟ್ಟಿದ್ದ ಮೂಲ ದಾಖಲೆಗಳನ್ನು ಕೇಳುತ್ತಿದ್ದಳು, ಆದ್ದರಿಂದ ನಾನು ಉಳಿದ ಶುಲ್ಕವನ್ನು ಪಾವತಿಸಲು ಕೇಳಿದೆ. ಅವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದರು. ಅವಳ ತಾಯಿ ತನ್ನ ಮಂಗಳಸೂತ್ರ ಮತ್ತು ಆಭರಣಗಳನ್ನು ತೆಗೆದು ನನಗೆ ಕೊಟ್ಟರು. ಆದರೆ ನಾವು ಮರುದಿನ ಅವುಗಳನ್ನು ಹಿಂತಿರುಗಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ, ಸೆ.22ರಿಂದ ಸರ್ವೇ ಆರಂಭ: ಸಿಎಂ ಸಿದ್ದರಾಮಯ್ಯ

15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಪ್ರಮಾಣ ವಚನ: ರಾಜೀನಾಮೆ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಧನಕರ್

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಕೇಸ್: ಸ್ಥಳ ಮಹಜರು ಸಮಯದಲ್ಲಿ ಹಲವು ಅಸ್ಥಿಪಂಜರಗಳ ನೋಡಿದ್ದೇನೆಂದ ಸೌಜನ್ಯಾ ಮಾವ..!

ಪ್ರಧಾನಿ ಮೋದಿ ಮಣಿಪುರ ಭೇಟಿ: ಕೀ, ಪೆನ್ನು, ಲೈಟರ್, ಛತ್ರಿ ನಿಷೇಧ

BRS ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷ; ನಾಲ್ಕನೇ ಸ್ಥಾನದಲ್ಲಿ TDP

SCROLL FOR NEXT