ಸಾಂದರ್ಭಿಕ ಚಿತ್ರ 
ರಾಜ್ಯ

ಮಗಳ ಕಾಲೇಜು ಶುಲ್ಕ ಭರಿಸಲು ಹಣದ ಸಮಸ್ಯೆ: ಮಂಗಳಸೂತ್ರ ಕೊಟ್ಟ ತಾಯಿ

ಕಾವೇರಿಯ ಪೋಷಕರು ತಮ್ಮ ಮಗಳೊಂದಿಗೆ ಪ್ರವೇಶದ ಸಮಯದಲ್ಲಿ ಸಲ್ಲಿಸಿದ ಮೂಲ ದಾಖಲೆಗಳನ್ನು ಕೇಳಲು ಕಾಲೇಜಿಗೆ ಹೋದಾಗ, ಕಾಲೇಜು ಅಧ್ಯಕ್ಷರು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಾಯಿಸಿದರು.

ಕೊಪ್ಪಳ: ಭಾರತೀಯ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣು ಧರಿಸುವ ಮಂಗಳಸೂತ್ರಕ್ಕೆ ಬಹಳ ಮಹತ್ವವಿದೆ. ಪತಿ ನಿಧನ ಹೊಂದುವವರೆಗೆ ಕುತ್ತಿಗೆಯಿಂದ ಮಂಗಳಸೂತ್ರ ತೆಗೆಯುವುದಿಲ್ಲ. ಆದರೆ ಕೊಪ್ಪಳದ ರೇಣುಕಮ್ಮ ವಾಲಿಕರ್ ತನ್ನ ಮಗಳ ನರ್ಸಿಂಗ್ ಶಿಕ್ಷಣದ ಕನಸನ್ನು ಮುಂದುವರಿಸಲು ಅನಿವಾರ್ಯವಾಗಿ ಮಂಗಳಸೂತ್ರ ಮಾರಬೇಕಾದ ಪರಿಸ್ಥಿತಿ ಬಂತು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್‌ನ ಪ್ರಥಮ ವರ್ಷದ ವಿದ್ಯಾರ್ಥಿನಿ ಕಾವೇರಿ ಕೆಲವು ದಿನಗಳ ಹಿಂದೆ ಪ್ರವೇಶ ಸಮಯದಲ್ಲಿ 10,000 ರೂಪಾಯಿ ಶುಲ್ಕವನ್ನು ಪಾವತಿಸಿದ್ದರು. ಉಳಿದ ಮೊತ್ತ 90 ಸಾವಿರ ರೂಪಾಯಿ ಪಾವತಿಸಲು ಹೆಚ್ಚಿನ ಸಮಯ ಕೇಳಿದ್ದರು. ಈ ಮಧ್ಯೆ, ಅವರಿಗೆ ಗದಗದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಉಚಿತ ಮೆರಿಟ್ ಸೀಟು ಸಿಕ್ಕಿತು.

ಕಾವೇರಿಯ ಪೋಷಕರು ತಮ್ಮ ಮಗಳೊಂದಿಗೆ ಪ್ರವೇಶದ ಸಮಯದಲ್ಲಿ ಸಲ್ಲಿಸಿದ ಮೂಲ ದಾಖಲೆಗಳನ್ನು ಕೇಳಲು ಕಾಲೇಜಿಗೆ ಹೋದಾಗ, ಕಾಲೇಜು ಅಧ್ಯಕ್ಷರು ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಾಯಿಸಿದರು.

ಅವರ ಬಳಿ ಹಣವಿಲ್ಲದಿದ್ದರೆ, ಮಂಗಳಸೂತ್ರ ಸೇರಿದಂತೆ ಆಭರಣಗಳನ್ನು ನೀಡಬೇಕು ಎಂದು ಹೇಳಿದರು. ಬೇರೆ ದಾರಿಯಿಲ್ಲದೆ, ರೇಣುಕಮ್ಮ ತನ್ನ ಮಂಗಳಸೂತ್ರ ಮತ್ತು ಇತರ ಚಿನ್ನದ ಆಭರಣಗಳನ್ನು ತೆಗೆದು ಅಧ್ಯಕ್ಷರಿಗೆ ಕೊಟ್ಟರು.

ನನ್ನ ಗಂಡನ ಮುಂದೆ ನನ್ನ ಮಂಗಳಸೂತ್ರ ತೆಗೆಯಬೇಕಾಗಿ ಬಂದಿದ್ದು ನನಗೆ ಬೇಸರ ತಂದಿದೆ ಎಂದು ರೇಣುಕಮ್ಮ ಹೇಳುತ್ತಾರೆ.

ಆಭರಣಗಳನ್ನು ಕೇಳಲಿಲ್ಲ

ಈ ಬಗ್ಗೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಚಿನವಲರ್ ಅವರು ಪ್ರತಿಕ್ರಿಯೆ ನೀಡಿ, ಮಂಗಳಸೂತ್ರ ಅಥವಾ ಆಭರಣಗಳನ್ನು ಕೇಳಲಿಲ್ಲ. ವಿದ್ಯಾರ್ಥಿ ಶುಲ್ಕವನ್ನು ಪಾವತಿಸಿರಲಿಲ್ಲ. ನಾನು ಶುಲ್ಕವನ್ನು ಕೇಳಿದ್ದಾಗ ನಾಳೆ ಕಟ್ಟುತ್ತೇನೆ, ಇನ್ನೊಂದು ದಿನ ಕಟ್ಟುತ್ತೇನೆ ಎಂದು ಮುಂದೂಡುತ್ತಲೇ ಬರುತ್ತಿದ್ದರು. ನಂತರ ವಿದ್ಯಾರ್ಥಿನಿಗೆ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತು, ನಮ್ಮ ಬಳಿ ಕೊಟ್ಟಿದ್ದ ಮೂಲ ದಾಖಲೆಗಳನ್ನು ಕೇಳುತ್ತಿದ್ದಳು, ಆದ್ದರಿಂದ ನಾನು ಉಳಿದ ಶುಲ್ಕವನ್ನು ಪಾವತಿಸಲು ಕೇಳಿದೆ. ಅವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದರು. ಅವಳ ತಾಯಿ ತನ್ನ ಮಂಗಳಸೂತ್ರ ಮತ್ತು ಆಭರಣಗಳನ್ನು ತೆಗೆದು ನನಗೆ ಕೊಟ್ಟರು. ಆದರೆ ನಾವು ಮರುದಿನ ಅವುಗಳನ್ನು ಹಿಂತಿರುಗಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

SCROLL FOR NEXT