ಬಿಎಂಟಿಸಿ ಚಾಲಕನ ಮೇಲೆ ಯುವಕನ ಹಲ್ಲೆ 
ರಾಜ್ಯ

'ಟೀ ಚೆನ್ನಾಗಿಲ್ಲ' ಎಂದ BMTC ಚಾಲಕನ ತಲೆ ಓಪನ್; ಯುವಕನ ವಿರುದ್ಧ ತಿರುಗಿ ಬಿದ್ದ ಸಾರಿಗೆ ಸಿಬ್ಬಂದಿ; Majestic ನಲ್ಲಿ ಹೈಡ್ರಾಮಾ!

ಟೀ ವಿಚಾರಕ್ಕೆ ನಡೆದ ಕ್ಷುಲ್ಲಕ ಗಲಾಟೆ ತಾರಕಕ್ಕೇರಿ ಟೀ ಅಂಗಡಿಯಲ್ಲಿ ಯುವಕ ಬಿಎಂಟಿಸಿ ಚಾಲಕನ ತಲೆಗೆ ಬಡಿದು ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ.

ಬೆಂಗಳೂರು: ಟೀ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆಯೊಂದು ತಾರಕಕ್ಕೇರಿ ಬಿಎಂಟಿಸಿ ಬಸ್ ಚಾಲಕನ ತಲೆ ಓಪನ್ ಆಗುವಂತೆ ಬದಿದಾಟವಾಗುವವರೆಗೂ ಸಾಗಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಹೌದು.. ಟೀ ವಿಚಾರಕ್ಕೆ ನಡೆದ ಕ್ಷುಲ್ಲಕ ಗಲಾಟೆ ತಾರಕಕ್ಕೇರಿ ಟೀ ಅಂಗಡಿಯಲ್ಲಿ ಯುವಕ ಬಿಎಂಟಿಸಿ ಚಾಲಕನ ತಲೆಗೆ ಬಡಿದು ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ.

ಇನ್ನು ಈ ವಿಚಾರ ತಿಳಿಯುತ್ತಲೇ ಬಿಎಂಟಿಸಿ ಚಾಲಕನ ಸಹ ಸಿಬ್ಬಂದಿಗಳು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಸ್ಖಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ.

ಟೀ ಚೆನ್ನಾಗಿಲ್ಲ ಎಂದಿದ್ದಕ್ಕೇ ಗಲಾಟೆ

ಇನ್ನು ಮೂಲಗಳ ಪ್ರಕಾರ ಬಿಎಂಟಿಸಿ ಚಾಲಕರೊಬ್ಬರು ಟೀ ಕುಡಿಯಲು ಮೆಜೆಸ್ಟಿಕ್ ನಿಲ್ದಾಣದೊಳಗಿರುವ ಗೂಡಂಗಡಿಗೆ ಬಂದಿದ್ದರು. ಈ ವೇಳೆ ಯುವಕನಿಂದ ಟೀ ಪಡೆದು ಕುಡಿದ ಚಾಲಕ ಟೀ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಯುವಕ ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದು ಈ ವೇಳೆ ಚಾಲಕ ಮತ್ತು ಟೀ ಅಂಗಡಿ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಟೀ ಅಂಗಡಿ ಯುವಕ ಏಕಾಏಕಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಟೀ ಫ್ಲಾಸ್ಕ್ ನಿಂದ ಚಾಲಕನ ತಲೆಗೆ ಬಾರಿಸಿದ್ದು, ಈ ವೇಳೆ ಚಾಲಕನ ತಲೆಯಿಂದ ರಕ್ತಸ್ರಾವವಾಗಿದೆ.

ಇದೇ ಸಂದರ್ಭದಲ್ಲಿ ಅಲ್ಲಿದ್ದ ಸಾರಿಗೆ ಇಲಾಖೆಯ ಇತರೆ ಚಾಲಕರು ಹಾಗೂ ನಿರ್ವಾಹಕರು ಟೀ ಅಂಗಡಿ ಯುವಕನ ವಿರುದ್ಧ ಜಗಳಕ್ಕೆ ನಿಂತಿದ್ದಾರೆ. ಅಲ್ಲದೆ ಕೆಲ ಸಿಬ್ಬಂದಿ ಕೈಗೆ ಸಿಕ್ಕ ವಸ್ತುಗಳಿಂದ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರನ್ನು ಬಿಡಿಸಲಾಗಿದೆ.

ಬಳಿಕ ಗಾಯಗೊಂಡಿದ್ದ ಚಾಲಕನನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಿ.. ಇಲ್ಲ..' ಚೀನಾಗೆ ಶೇ.50ರಿಂದ ಶೇ.100ರಷ್ಟು ಸುಂಕ ಹಾಕ್ತೀನಿ': NATO ರಾಷ್ಟ್ರಗಳಿಗೆ Trump ಎಚ್ಚರಿಕೆ!

ರಜನಿಕಾಂತ್ 'Coolie' ಚಿತ್ರದಲ್ಲಿ ನಟಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ: Aamir Khan ಹೇಳಿಕೆ ಕುರಿತು ಸ್ಪಷ್ಟನೆ!

ಮುಂದಿವ ವರ್ಷ ಮಾರ್ಚ್ 5 ರಂದು ನೇಪಾಳ ಸಂಸತ್ ಚುನಾವಣೆ: ಅಧ್ಯಕ್ಷರ ಕಚೇರಿ ಘೋಷಣೆ

ಹಾಸನ ಗಣೇಶ ಮೆರವಣಿಗೆ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಸ್ಥಳಕ್ಕೆ ಕೃಷ್ಣ ಬೈರೇಗೌಡ ಭೇಟಿ

ಕೊನೆಗೂ ಸಂಘರ್ಷ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ; 'ಶಾಂತಿ ಮಾರ್ಗ' ಆರಿಸಿಕೊಳ್ಳುವಂತೆ ಮನವಿ

SCROLL FOR NEXT