ಸಚಿವ ಪ್ರಿಯಾಂಕ್ ಖರ್ಗೆ  
ರಾಜ್ಯ

ಏಪ್ರಿಲ್ 17ಕ್ಕೆ ದೆಹಲಿಯಲ್ಲಿ ‘ಬ್ರಿಡ್ಜ್ ಟು ಬೆಂಗಳೂರು’ ಕಾರ್ಯಕ್ರಮ: ರಾಜ್ಯಕ್ಕೆ ಸಾವಿರಾರು ಕೋಟಿ ರೂ ಬಂಡವಾಳ ನಿರೀಕ್ಷೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕಿರಣ್ ಮಜುಂದಾರ್-ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 80 ದೇಶಗಳಿಂದ ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ

ಕ್ಷೇತ್ರವಾರು ಸಹಭಾಗಿತ್ವಗಳನ್ನು ಗಾಢಗೊಳಿಸಲು, ಕರ್ನಾಟಕ ರಾಜ್ಯದ ಪ್ರತಿಭಾವಂತರ ಸಾಮರ್ಥ್ಯವನ್ನು ಪ್ರದರ್ಶಿಸಲು, ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚು ಸಂರಚಿತ ಫಲಿತಾಂಶಗಳನ್ನು ಸಾಧಿಸಲು ಸರ್ಕಾರವು ‘ಬ್ರಿಡ್ಜ್ ಟು ಬೆಂಗಳೂರು– ಡೈಲಾಗ್ ವಿತ್ ಡಿಪ್ಲೊಮ್ಯಾಟ್ಸ್’ ಕಾರ್ಯಕ್ರಮದಲ್ಲಿ ಏಪ್ರಿಲ್ 17ರಂದು ದೆಹಲಿಯಲ್ಲಿ ಅಭಿವೃದ್ಧಿಗೊಂಡ ಗ್ಲೋಬಲ್ ಇನೋವೇಶನ್ ಅಲಯನ್ಸ್ (GIA 2.0) ಎಂಬ ಮುಂದಿನ ತಲೆಮಾರಿನ ಚೌಕಟ್ಟನ್ನು ಅನಾವರಣಗೊಳಿಸಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕಿರಣ್ ಮಜುಂದಾರ್-ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 80 ದೇಶಗಳಿಂದ ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ.

ಈ ವೇದಿಕೆ GIA 2.0ಗೆ ಜಾಗತಿಕ ಪ್ರದರ್ಶನ ವೇದಿಕೆಯಾಗಿದ್ದು, ಸರ್ಕಾರಗಳು, ರಾಜತಾಂತ್ರಿಕರು, ಸ್ಟಾರ್ಟ್‌ಅಪ್‌ಗಳು, ಉದ್ಯಮ ನಾಯಕರೂ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಒಟ್ಟುಗೂಡಿಸಿ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢಗೊಳಿಸುವುದಕ್ಕೆ ಸಹಾಯಕವಾಗಲಿದೆ ಎಂದು ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

‘ಬ್ರಿಡ್ಜ್ ಟು ಬೆಂಗಳೂರು 2026’ ಕಾರ್ಯಕ್ರಮವು ‘AI & Beyond’ ಎಂಬ ಧ್ಯೇಯವಾಕ್ಯದಡಿಯಲ್ಲಿ ಈ ವರ್ಷದ ನವೆಂಬರ್ 17ರಿಂದ 19ರವರೆಗೆ ನಡೆಯಲಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್‌ಗೆ ಪೂರ್ವಭಾವಿ ಕಾರ್ಯಕ್ರಮವಾಗಲಿದೆ.

GIAವು ಸರ್ಕಾರ-ಸರ್ಕಾರ ಸಹಕಾರ, ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶ ಮತ್ತು ಸಂಸ್ಥೆ-ಸಂಸ್ಥೆ ಸಂಶೋಧನಾ ಸಹಭಾಗಿತ್ವಗಳನ್ನು ಒಂದೇ ಫಲಿತಾಂಶಕೇಂದ್ರಿತ ವೇದಿಕೆಯಲ್ಲಿ ಏಕೀಕರಿಸಿ, ಕರ್ನಾಟಕವನ್ನು ಜಾಗತಿಕ ನವೋತ್ಪಾದನಾ ಪರಿಸರ ವ್ಯವಸ್ಥೆಗಳ ದೇಶದ ಪ್ರವೇಶದ್ವಾರವಾಗಿ ಸ್ಥಾಪಿಸುತ್ತದೆ.

ಕಳೆದ ಒಂದು ವರ್ಷದಲ್ಲಿ ನಮ್ಮ ಜಾಗತಿಕ ಸಹಭಾಗಿತ್ವಗಳು ಕಾರ್ಯಗತಗೊಳಿಸುವ ಹಂತಕ್ಕೆ ಅಭಿವೃದ್ಧಿಯಾಗಿದೆ. ಗ್ಲೋಬಲ್ ಇನೋವೇಶನ್ ಅಲಯನ್ಸ್ ಮೂಲಕ ನಾವು ಸಂರಚಿತ ಮಾರ್ಗಗಳನ್ನು ನಿರ್ಮಿಸುತ್ತಿದ್ದು, ಇದರಿಂದ ಕರ್ನಾಟಕದ ಸ್ಟಾರ್ಟ್‌ಅಪ್‌ಗಳು ಮತ್ತು ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಜಾಗತಿಕ ನವೋತ್ಪಾದನಾ ಪರಿಸರ ವ್ಯವಸ್ಥೆಗಳನ್ನು ರಾಜ್ಯದತ್ತ ಸಮೀಪಕ್ಕೆ ತರುತ್ತೇವೆ.

ನಾವು ‘ಕರ್ನಾಟಕದ ಡೀಪ್ ಟೆಕ್ ದಶಕ’ವೆಂದು ಕರೆಯುವ ಹಂತಕ್ಕೆ ಪ್ರವೇಶಿಸುತ್ತಿರುವಾಗ, ಸಂಶೋಧನೆ ಮತ್ತು ಪ್ರತಿಭೆಯಿಂದ ಹಿಡಿದು ಬಂಡವಾಳ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶದವರೆಗೆ ಸಂಪೂರ್ಣ ನವೋತ್ಪಾದನಾ ಮೌಲ್ಯ ಸರಪಳಿಯನ್ನು ಬಲಪಡಿಸುವುದರ ಮೇಲೆ ನಮ್ಮ ಗಮನವಿದೆ. ಡೀಪ್ ಟೆಕ್ ಮತ್ತು ಕೃತಕ ಬುದ್ಧಿಮತ್ತೆ (AI) ಈ ದೃಷ್ಟಿಯ ಕೇಂದ್ರಬಿಂದುವಾಗಿದ್ದು, GIA 2.0 ಮೂಲಕ ಈ ಸಹಭಾಗಿತ್ವಗಳನ್ನು ಇನ್ನಷ್ಟು ಸಂರಚಿತ, ಫಲಿತಾಂಶಕೇಂದ್ರಿತ ಮತ್ತು ಉದಯೋನ್ಮುಖ ಕ್ಷೇತ್ರಗಳಿಗೆ ಹೊಂದಾಣಿಕೆಯಾಗುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಪ್ರಮಾಣ ವಚನ ದಿನವೇ ಹೊಸ ಕಾಂಗ್ರೆಸ್ ಭವನಕ್ಕೆ ರಾಹುಲ್ ಗಾಂಧಿ ಶಂಕು ಸ್ಥಾಪನೆ; ಸ್ಥಳ ಪರಿಶೀಲಿಸಿದ ನಿಯೋಜಿತ ಸಿಎಂ

IPL 2026 Final: RCB vs GT, ಮರುಕಳಿಸುತ್ತಾ ಪಿಚ್ ನಂ 6 ಕರಾಳತೆ, ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

IPL 2026 Final: 'ಆತ 3 ಓವರ್ ಬೌಲಿಂಗ್ ಮಾಡಿದ್ರೂ RCB ಕಥೆ ಮುಗಿದಂತೆ, ಆಡಿಸಲೇಬೇಡಿ': ಫೈನಲ್ ಗೂ ಮುನ್ನ ಮಾಜಿ ಕ್ರಿಕೆಟಿಗನ ಹೊಸ ಬಾಂಬ್

ನೊಂದವರ ಗಾಯದ ಮೇಲೆ ಉಪ್ಪು ಸುರಿದಂತೆ: ಜಾಮೀನು ಸಿಕ್ಕಿದ್ದಕ್ಕೆ ಕೊಲೆ ಆರೋಪಿ ಕುಟುಂಬಸ್ಥರ ಪಾರ್ಟಿ, ನಟ ವಿಶಾಲ್ ಆಕ್ರೋಶ, Video!

ವೈಭವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕ್ರಿಕೆಟ್ ದೇವರು; ಯುವ ಆಟಗಾರ ಟೆಸ್ಟ್‌ ಕ್ರಿಕೆಟ್‌ ಆಡುವ ಕುರಿತು ಸಚಿನ್ ಹೇಳಿದ್ದೇನು?

SCROLL FOR NEXT