ಬೆಂಗಳೂರಿನಲ್ಲಿ ಹಲವು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರೂ, ನಗರದ ಹಲವು ಪ್ರದೇಶಗಳಲ್ಲಿ ಮತ್ತೆ ಮತ್ತೆ ಅತಿಕ್ರಮಣಗಳು ಕಂಡುಬಂದಿವೆ. 
ರಾಜ್ಯ

ಬೆಂಗಳೂರಿನಲ್ಲಿ 750 ಕಿ.ಮೀ. ಪಾದಚಾರಿ ಮಾರ್ಗ ತೆರವು; ಪೀಣ್ಯ ಮೇಲ್ಸೇತುವೆಯಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಜುಲೈ 1ರಿಂದ ಜುಲೈ 31ರವರೆಗೆ ನಡೆದ ಅಭಿಯಾನದಲ್ಲಿ 750 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದ್ದು, ಇದರಿಂದ ಮಕ್ಕಳು, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಸೇರಿದಂತೆ ಪಾದಚಾರಿಗಳಿಗೆ ರಸ್ತೆಗಳು ಹೆಚ್ಚು ಸುರಕ್ಷಿತ ಹಾಗೂ ಸುಗಮವಾಗಿವೆ.

ಬೆಂಗಳೂರು: ನಗರದಾದ್ಯಂತ ಒಂದು ತಿಂಗಳ ಕಾಲ ನಡೆದ ‘ಸೇಫ್ ಫುಟ್‌ಪಾತ್’ (ಸುರಕ್ಷಿತ ಪಾದಚಾರಿ ಮಾರ್ಗ) ಅಭಿಯಾನದಡಿ ಅತಿಕ್ರಮಣಗೊಂಡಿದ್ದ 750 ಕಿ.ಮೀ.ಗೂ ಅಧಿಕ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಲಾಗಿದೆ. ಇದೀಗ ಮತ್ತೆ ಅತಿಕ್ರಮಣವಾಗದಂತೆ ಅನಿರೀಕ್ಷಿತ ಪರಿಶೀಲನೆಗಳು ಹಾಗೂ ನಿರಂತರ ತೆರವು ಕಾರ್ಯಾಚರಣೆಗಳ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗಮನ ಕೇಂದ್ರೀಕರಿಸಿವೆ.

ಜುಲೈ 1ರಿಂದ ಜುಲೈ 31ರವರೆಗೆ ನಡೆದ ಅಭಿಯಾನದಲ್ಲಿ 750 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದ್ದು, ಇದರಿಂದ ಮಕ್ಕಳು, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಸೇರಿದಂತೆ ಪಾದಚಾರಿಗಳಿಗೆ ರಸ್ತೆಗಳು ಹೆಚ್ಚು ಸುರಕ್ಷಿತ ಹಾಗೂ ಸುಗಮವಾಗಿವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಆದರೆ, ಪಾದಚಾರಿ ಮಾರ್ಗಗಳನ್ನು ಅತಿಕ್ರಮಣಮುಕ್ತವಾಗಿ ಉಳಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ ಎಂದರು.

ಹಲವು ಪ್ರದೇಶಗಳಲ್ಲಿ ಹಲವು ಬಾರಿ ಅತಿಕ್ರಮಣ ತೆರವುಗೊಳಿಸಿದರೂ ಮತ್ತೆ ಅತಿಕ್ರಮಣವಾಗುತ್ತಿರುವುದು ಕಂಡುಬಂದಿದೆ. ನಾಗರಿಕರಿಂದ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇತ್ತೀಚೆಗೆ ಅನಿರೀಕ್ಷಿತ ಮರು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದು, ರಸ್ತೆಬದಿ ವ್ಯಾಪಾರಿಗಳು ಹಾಗೂ ಅಕ್ರಮ ಆಕ್ರಮಣಕಾರರನ್ನು ಅಚ್ಚರಿಗೊಳಿಸಿದ್ದಾರೆ.

ಇದೇ ವೇಳೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪೀಣ್ಯ ಮೇಲ್ಸೇತುವೆಯಲ್ಲಿ ಡಾಂಬರ ಮರುಹಾಸು ಕಾಮಗಾರಿ ಕೈಗೊಂಡಿರುವುದರಿಂದ, ಆಗಸ್ಟ್‌ 3ರಿಂದ 12ರವರೆಗೆ ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ತುಮಕೂರು ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಮೇಲ್ಸೇತುವೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಶನಿವಾರ ಹಾಗೂ ಭಾನುವಾರ ಈ ನಿರ್ಬಂಧ ರಾತ್ರಿ 12ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಎಸ್‌ಆರ್‌ಎಸ್ ಮೇಲಿನ ರ್ಯಾಂಪ್‌ನಿಂದ ಕೆನ್ನಮೆಟಲ್ ವಿಡಿಯಾ ಕೆಳ ರ್ಯಾಂಪ್‌ವರೆಗೆ ಈ ನಿರ್ಬಂಧ ಅನ್ವಯವಾಗಲಿದೆ.

ನೆಲಮಂಗಲದತ್ತ ತೆರಳುವ ವಾಹನಗಳು ಎಸ್‌ಆರ್‌ಎಸ್ ಮೇಲಿನ ರ್ಯಾಂಪ್ ಸಮೀಪದಿಂದ ಹೊರಬಂದು, ರಾಷ್ಟ್ರೀಯ ಹೆದ್ದಾರಿ-4ರ ಸರ್ವಿಸ್ ರಸ್ತೆ ಹಾಗೂ ಮುಖ್ಯ ರಸ್ತೆಯ ಮೂಲಕ ಎಸ್‌ಆರ್‌ಎಸ್ ಜಂಕ್ಷನ್‌, ಅಲ್ಲಿಂದ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್‌, ಜಾಲಹಳ್ಳಿ ಕ್ರಾಸ್‌, ದಾಸರಹಳ್ಳಿ, 8ನೇ ಮೈಲಿ ಹಾಗೂ ಪಾರ್ಲೆ-ಜಿ ಟೋಲ್ ಮಾರ್ಗವಾಗಿ ಸಂಚರಿಸಬೇಕೆಂದು ಸೂಚಿಸಲಾಗಿದೆ.

ಬೆಂಗಳೂರು ದಕ್ಷಿಣ ನಗರ ನಿಗಮವು ಸೋಮವಾರ ಪ್ರಕಟಣೆ ನೀಡಿ, ತೆರವುಗೊಳಿಸಲಾದ ಪಾದಚಾರಿ ಮಾರ್ಗಗಳು ಮತ್ತೆ ಅತಿಕ್ರಮಣವಾಗದಂತೆ ನಿಯಮಿತವಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ತಿಳಿಸಿದೆ. ಸೋಮವಾರ ಒಂದೇ ದಿನ 1.20 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ.

ಜಯನಗರದಲ್ಲಿ 9ನೇ ಹಾಗೂ 10ನೇ ಮುಖ್ಯರಸ್ತೆಗಳಲ್ಲಿನ 0.50 ಕಿ.ಮೀ. ಪಾದಚಾರಿ ಮಾರ್ಗವನ್ನು ತೆರವುಗೊಳಿಸಿ 10 ತಳ್ಳುಗಾಡಿಗಳನ್ನು ಸ್ಥಳಾಂತರಿಸಲಾಯಿತು.

ಎಚ್‌ಎಸ್‌ಆರ್ ಲೇಔಟ್‌ನ 31ನೇ ಮುಖ್ಯರಸ್ತೆಯಲ್ಲಿ 0.70 ಕಿ.ಮೀ. ಪಾದಚಾರಿ ಮಾರ್ಗವನ್ನು ಮುಕ್ತಗೊಳಿಸಲು 15 ಸಣ್ಣ ಅಂಗಡಿಗಳು, 10 ಮೇಲ್ಛಾವಣಿಗಳು (ಕ್ಯಾನೊಪಿಗಳು), 12 ಮೆಟ್ಟಿಲುಗಳು ಹಾಗೂ ರ್ಯಾಂಪ್‌ಗಳು ಮತ್ತು ಮೂರು ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲಾಯಿತು.

ಜುಲೈ 1ರಿಂದ ಇದುವರೆಗೆ ಕೇಂದ್ರ ವಲಯದಲ್ಲಿ 195.85 ಕಿ.ಮೀ., ಉತ್ತರ ವಲಯದಲ್ಲಿ 175.75 ಕಿ.ಮೀ., ಪಶ್ಚಿಮ ವಲಯದಲ್ಲಿ 168.37 ಕಿ.ಮೀ., ದಕ್ಷಿಣ ವಲಯದಲ್ಲಿ 116.76 ಕಿ.ಮೀ. ಹಾಗೂ ಪೂರ್ವ ವಲಯದಲ್ಲಿ 116.65 ಕಿ.ಮೀ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ.

ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರ ಸಹಯೋಗದೊಂದಿಗೆ ನಾಗರಿಕ ಸಂಸ್ಥೆಯ ಸಿಬ್ಬಂದಿ, ಯಂತ್ರೋಪಕರಣಗಳು ಹಾಗೂ ವಾಹನಗಳನ್ನು ಬಳಸಿ ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಪಾದಚಾರಿಗಳು ಮತ್ತೆ ರಸ್ತೆ ಮೇಲೆ ನಡೆಯುವ ಪರಿಸ್ಥಿತಿ ಬರದಂತೆ ಅನಿರೀಕ್ಷಿತ ತಪಾಸಣೆ ಹಾಗೂ ಮರು ಅತಿಕ್ರಮಣ ತೆರವು ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ, ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು, ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!

West Asia War: ಒಪ್ಪಂದಕ್ಕೆ ಬರ್ತೀರಾ? ಇತಿಹಾಸ ಸೇರ್ತೀರಾ?; ಇರಾನ್‌ಗೆ ಟ್ರಂಪ್ ಲಾಸ್ಟ್ ವಾರ್ನಿಂಗ್..!

ಹೊಸ ಮುಖಗಳ ನಿರೀಕ್ಷೆ ಹುಸಿ; ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ, ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!

ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ವರದಿ ನೀಡಲು ನೂತನ ಸಚಿವರಿಗೆ ಸೂಚನೆ: ಸಿದ್ದುಗೆ ಯಾವುದೇ ಅಸಮಾಧಾನವಿಲ್ಲ, ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ- ಸಿಎಂ ಡಿಕೆ ಶಿವಕುಮಾರ್

ಸಚಿವ ಸಂಪುಟದಲ್ಲಿ ಬೆಂಗಳೂರು ಮೇಲುಗೈ; ಯಾದಗಿರಿ ಸೇರಿ 8 ಜಿಲ್ಲೆಗಳಿಗೆ ಸಿಗಲಿಲ್ಲ ಪ್ರಾತಿನಿಧ್ಯ..!