ಬೆಂಗಳೂರು: ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಲ್ಲಿ ಬೆಂಗಳೂರಿನ ಜನತೆ ತಮ್ಮ ಸ್ವಂತ ಮನೆಯ ಮುಂದೆ ತಮ್ಮ ಸ್ವಂತ ಕಾರು ನಿಲ್ಲಿಸುವುದಕ್ಕೂ ದಂಡ ಕಟ್ಟಬೇಕಂತೆ. ಜಿಬಿಎ (GBA) ಹೊಸ ಪಾರ್ಕಿಂಗ್ ರೂಲ್ಸ್ 2026 ಹೆಸರಿನಲ್ಲಿ, ಬೆಂಗಳೂರಿಗರು ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಕಾರು ನಿಲ್ಲಿಸಲು ವರ್ಷಕ್ಕೆ 15,000 ದಿಂದ 25,000 ವರೆಗೆ ದಂಡದ ರೂಪದ ಶುಲ್ಕ ತೆರಬೇಕು ಎನ್ನುವ ತುಘಲಕ್ ನೀತಿಯನ್ನು ಜಾರಿಗೆ ತರಲು ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಕೃಷ್ಣಭೈರೇಗೌಡ ಸ್ಕೆಚ್ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
* ಖಾಲಿ ನಿವೇಶನಗಳಲ್ಲಿ ಕಸ ತೆಗೆಯುವ ನೆಪದಲ್ಲಿ ಕೋಟಿ ಕೋಟಿ ಗುಡಿಸಿದ್ದು ಸಾಲದೆಂಬಂತೆ, ಈಗ 'ಮನೆ ಮುಂದಿನ ಪಾರ್ಕಿಂಗ್' ಮೇಲೆಯೂ ಕಣ್ಣು ಬಿದ್ದಿದೆಯೇ?
* ಮನೆ ಮುಂದೆ ಗಾಡಿ ನಿಲ್ಲಿಸೋದಕ್ಕೂ ಟ್ಯಾಕ್ಸಾ?: ಸಾರ್ವಜನಿಕರು ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಿ ಮನೆ ಕಟ್ಟಿಕೊಂಡಿರುವುದು ನಿಮ್ಮ ಕಮಿಷನ್ ದಂಧೆಗೆ ಸಾಲದೆಂದು ಮನೆ ಮುಂದಿನ ಜಾಗಕ್ಕೂ ಲೂಟಿ ಶುಲ್ಕ ವಿಧಿಸುತ್ತಿದ್ದೀರಾ?
* ರಸ್ತೆಗಳ ಸ್ಥಿತಿ ಏನಾಗಿದೆ?: ಸಾಲು ಸಾಲು ಗುಂಡಿಗಳು, ಮಳೆಯಾದರೆ ಈಜುಕೊಳವಾಗುವ ರಸ್ತೆಗಳನ್ನು ಸರಿಪಡಿಸಲು ಯೋಗ್ಯತೆಯಿಲ್ಲದ ಸರ್ಕಾರಕ್ಕೆ ಈ ಪಾರ್ಕಿಂಗ್ ಟ್ಯಾಕ್ಸ್ ವಸೂಲಿ ಮಾಡಲು ಏನು ನೈತಿಕ ಹಕ್ಕಿದೆ?
* ಸಾರ್ವಜನಿಕ ಸಾರಿಗೆ ಸರಿಪಡಿಸಿ: ಪಾರ್ಕಿಂಗ್ ದರ ಏರಿಸಿ ಜನರನ್ನು ದೋಚುವ ಮೊದಲು ನಂಟುಕೊಂಡಿರುವ ಮೆಟ್ರೋ ಕಾಮಗಾರಿ ಚುರುಕುಗೊಳಿಸಿ, ಬಿಎಂಟಿಸಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಿ.
ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಕನ್ನ ಹಾಕಲು ಹೊರಟಿರುವ ಈ ಜನವಿರೋಧಿ 'ಪಾರ್ಕಿಂಗ್ ಲೂಟಿ ನೀತಿ'ಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ ಎಂದು ಅಶೋಕ್ ಹೇಳಿದ್ದಾರೆ.