ಪರ್ವತಾರೋಹಿಗಳೊಂದಿಗೆ ಹನುಮಂತರಾವ್ 
ರಾಜ್ಯ

ಉಚಿತ ಪರ್ವತಾರೋಹಣ ತರಬೇತಿ; ಗ್ರಾಮೀಣ ಯುವಕರಿಗೆ ಗದಗದ ಹನುಮಂತರಾವ್ ಸ್ಫೂರ್ತಿ!

ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿಯಾಗಿರುವ ಹನುಮಂತರಾವ್ ಅವರು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಭಾಗವಾಗಿ ಉತ್ತರಾಖಂಡದಲ್ಲಿದ್ದರು.

ಗದಗ: 2023ರಲ್ಲಿ ಉತ್ತರಾಖಂಡದ ನೆಹರು ಇನ್ಸ್ಟಿಟ್ಯೂಟ್ ಆಫ್ ಪರ್ವತಾರೋಹಣದಲ್ಲಿ ತರಬೇತಿ ಪಡೆದಿರುವ ಗದಗದ ಪರ್ವತಾರೋಹಿ 20 ವರ್ಷದ ಹನುಮಂತರಾವ್ ಕುಲಕರ್ಣಿ ಅವರು ಈಗ ಗ್ರಾಮೀಣ ಯುವಕರಿಗೆ ಉಚಿತ ಪರ್ವತಾರೋಹಣ ತರಬೇತಿ ನೀಡಲು ನಿರ್ಧರಿಸಿದ್ದಾರೆ.

ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿಯಾಗಿರುವ ಹನುಮಂತರಾವ್ ಅವರು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಭಾಗವಾಗಿ ಉತ್ತರಾಖಂಡದಲ್ಲಿದ್ದರು.

ಕಳೆದ ಮೂರು ವರ್ಷಗಳಲ್ಲಿ ಹನುಮಂತರಾವ್ ಅವರು ಹಿಮಾಲಯಕ್ಕೆ ನಾಲ್ಕು ಬಾರಿ ತೆರಳಿದ್ದಾರೆ. ಗದಗದ ಈ ಯುವಕ ಈಗ ಗ್ರಾಮೀಣ ಯುವಕರಿಗೆ ಶೆರ್ಪಾ ಪಾತ್ರವನ್ನು ವಹಿಸಲು ಮತ್ತು ಜೀವನದಲ್ಲಿ ಯಶಸ್ಸಿನ ಶಿಖರಗಳನ್ನು ಏರಲು ಉಚಿತ ಪರ್ವತಾರೋಹಣ ತರಬೇತಿ ನೀಡಲು ದೃಢನಿಶ್ಚಯ ಮಾಡಿದ್ದಾರೆ.

ಹನುಮಂತರಾವ್ ಅವರು ಗ್ರಾಮೀಣ ಯುವಕರನ್ನು ಬಾದಾಮಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ಪಶ್ಚಿಮ ಘಟ್ಟಗಳಿಗೆ ಕರೆದೊಯ್ಯುತ್ತಿದ್ದಾರೆ ಮತ್ತು ನಕ್ಷೆ, ಸಂಚರಣೆ, ಹವಾಮಾನ, ಔಷಧಿ, ಪರ್ವತ ನೈರ್ಮಲ್ಯ ಹಾಗೂ ಪರ್ವತಾರೋಹಣ ತಂತ್ರಗಳಂತಹ ಪರ್ವತಾರೋಹಣದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ, ಹನುಮಂತರಾವ್ ಅವರು ಗದಗದ ಗ್ರಾಮೀಣ ಭಾಗದ 50ಕ್ಕೂ ಹೆಚ್ಚು ಯುವಕರಿಗೆ ಪರ್ವತಾರೋಹಣ ಕೌಶಲ್ಯಗಳನ್ನು ಕಲಿಸಿದ್ದಾರೆ. ಮೊದಲ ಹಂತದಲ್ಲಿ ಅವರು ಮುಂಡರಗಿ ಮತ್ತು ಗದಗ ತಾಲ್ಲೂಕುಗಳಿಂದ ಯುವಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹನುಮಂತರಾವ್ ಅವರು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು, ಅವರ ತಂದೆ ಗಿರೀಶ್ ಕುಲಕರ್ಣಿ ಗದಗ ಪುರಸಭೆ ಕಚೇರಿಯ ಪಕ್ಕದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದಾರೆ. ಹನುಮಂತರಾವ್ ಪರ್ವತಗಳನ್ನು ಹತ್ತಬೇಕೆಂಬ ತನ್ನ ಉತ್ಸಾಹವನ್ನು ಮೊದಲು ವ್ಯಕ್ತಪಡಿಸಿದಾಗ ಗಿರೀಶ್ ಆರಂಭದಲ್ಲಿ ಸಂಶಯ ವ್ಯಕ್ತಪಡಿಸಿದರು. ಗದಗ ಯುವಕನಿಗೆ ಇದು ಅಸಾಮಾನ್ಯ ಮಹತ್ವಾಕಾಂಕ್ಷೆಯಾಗಿತ್ತು.

ಆದರೆ ಗಿರೀಶ್ ಅವರು ಅಂತಿಮವಾಗಿ ಒಪ್ಪಿಗೆ ನೀಡಿದರು. ಆದರೆ ಸವಾಲಿನ ಪರಿಸ್ಥಿತಿಗಳಿಗೆ, ವಿಶೇಷವಾಗಿ -10 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಘನೀಕರಿಸುವ ತಾಪಮಾನಕ್ಕೆ ಹೊಂದಿಕೊಳ್ಳಲು ಸಿದ್ಧವಾಗುವಂತೆ ಹನುಮಂತರಾವ್ ಗೆ ಸೂಚಿಸಿದರು.

ನಂತರ ಉತ್ತರಾಖಂಡಕ್ಕೆ ತೆರಳಿದ ಹನುಮಂತರಾವ್ ಅವರು, ಅಲ್ಲಿ ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಅಮೆರಿಕ ಸೇರಿದಂತೆ ಪ್ರಪಂಚದ ಇತರ ಭಾಗಗಳಿಂದ ಬಂದಿದ್ದ ಜನರನ್ನು ಭೇಟಿಯಾದರು.

ಪರ್ವತಾರೋಹಿಗಳೊಂದಿಗೆ ಹನುಮಂತರಾವ್

ಹನುಮಂತ ಅವರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತರಬೇತಿ ಪಡೆದಿದ್ದಾರೆ. ಇದು ಪರ್ವತಗಳಲ್ಲಿ ಸಿಲುಕಿಕೊಳ್ಳುವ ಪರ್ವತಾರೋಹಿಗಳನ್ನು ರಕ್ಷಿಸುವ ಕಾರ್ಯದೊಂದಿಗೆ ಅವರನ್ನು ರಕ್ಷಣಾ ತಂಡದ ಭಾಗವಾಗಿಸುತ್ತದೆ. ಯಾರಾದರೂ ಐಸ್ ಕ್ರಾಫ್ಟ್‌ನಲ್ಲಿ ಸಿಲುಕಿಕೊಂಡರೆ ರಕ್ಷಿಸಲು ರಕ್ಷಣಾ ಸದಸ್ಯರಿಗೆ ಸಿ-ಪುಲ್ಲಿ ಮತ್ತು ಝಡ್-ಪುಲ್ಲಿಯಲ್ಲಿ ತರಬೇತಿ ನೀಡಲಾಗುತ್ತದೆ.

ಹನುಮಂತರಾವ್ ಅವರು ಈಗ ಪರ್ವತಗಳ ಅನುಭವವನ್ನು ನೀಡಲು ಗದಗ ಜಿಲ್ಲೆಯಿಂದ ಹಿಮಾಲಯಕ್ಕೆ ವಿದ್ಯಾರ್ಥಿಗಳ ತಂಡವನ್ನು ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾರೆ. ತಂಡದ ಸದಸ್ಯರನ್ನು ಅವರ ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆರೋಹಣವು ಕಷ್ಟಕರವಾಗಿದೆ ಮತ್ತು ಒಬ್ಬರ ಸಹಿಷ್ಣುತೆ ಮತ್ತು ಇಚ್ಛಾಶಕ್ತಿಯನ್ನು ಪರೀಕ್ಷಿಸುತ್ತದೆ. ಮುಂಬರುವ ದಿನಗಳಲ್ಲಿ ರೋಣ, ಗಜೇಂದ್ರಗಡ, ಮುಂಡರಗಿ ಮತ್ತು ಶಿರಹಟ್ಟಿ ತಾಲ್ಲೂಕುಗಳಿಂದ ಯುವಕರನ್ನು ಆಯ್ಕೆ ಮಾಡಲು ಅವರು ಯೋಜಿಸುತ್ತಿದ್ದಾರೆ.

ಇನ್ನೂ ಗಿರೀಶ್ ಅವರು ತಮ್ಮ ಮಗ ಎತ್ತರಕ್ಕೆ ಏರುತ್ತಿರುವುದನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದ್ದು, "ಅವನು ಚಿಕ್ಕವನಿದ್ದಾಗ ತನ್ನ ತಾಯಿ ರೂಪಶ್ರೀಯನ್ನು ಕಳೆದುಕೊಂಡನು. ಅವನು ನಾಲ್ಕು ಬಾರಿ ಹಿಮಾಲಯಕ್ಕೆ ಹೋಗಿದ್ದಾನೆ ಎಂದು ನಮಗೆ ಹೆಮ್ಮೆಯಿದೆ. ಅವನು ಶೀಘ್ರದಲ್ಲೇ ಗದಗ ಯುವಕರನ್ನು ಪರ್ವತಾರೋಹಣ ದಂಡಯಾತ್ರೆಗೆ ಕರೆದೊಯ್ಯುತ್ತಾನೆ ಎಂದು ನಾವು ಭಾವಿಸುತ್ತೇವೆ" ಎಂದಿದ್ದಾರೆ.

ಕಷ್ಟಗಳು ಎದುರಾದಾಗ ಎಂದಿಗೂ ಬಿಟ್ಟುಕೊಡಬಾರದು ಎಂಬುದನ್ನು ಪರ್ವತಾರೋಹಣ ಕಲಿಸಿದೆ ಎಂದು ಹನುಮಂತ್ ಹೇಳುತ್ತಾರೆ. “ಪರ್ವತ, ಗಾಳಿ, ಮೌನ ವಾತಾವರಣ ಎಲ್ಲವೂ ನನಗೆ ಅನೇಕ ಪಾಠಗಳನ್ನು ಕಲಿಸಿದೆ. ನಾನು ಉತ್ತರಾಖಂಡದ ನೆಹರು ಇನ್‌ಸ್ಟಿಟ್ಯೂಟ್ ಆಫ್ ಪರ್ವತಾರೋಹಣದಲ್ಲಿ ಎನ್‌ಸಿಸಿಯಲ್ಲಿದ್ದಾಗ ಪರ್ವತಾರೋಹಣವನ್ನು ಕಲಿತಿದ್ದೇನೆ. ಗ್ರಾಮೀಣ ಯುವಕರು ಅದೇ ತರಬೇತಿಯನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಹನುಮಂತರಾವ್ ಹೇಳಿದ್ದಾರೆ.

ನಾನು 2024 ರಲ್ಲಿ ಉಚಿತ ತರಬೇತಿ ಶಿಬಿರವನ್ನು ಪ್ರಾರಂಭಿಸಿದೆ. ನಾನು ಕೆಲವು ಸಮಾನ ಮನಸ್ಕ ಯುವಕರನ್ನು ಒಟ್ಟುಗೂಡಿಸಿ ಕರ್ನಾಟಕದೊಳಗೆ ಪರ್ವತಾರೋಹಣ ಪ್ರವಾಸಗಳಲ್ಲಿ ಬಾದಾಮಿ ಮತ್ತು ಇತರ ಸ್ಥಳಗಳಿಗೆ ಕರೆದೊಯ್ದೆ. ಕಳೆದ ಮೂರು ವರ್ಷಗಳಲ್ಲಿ ನಾನು ಹಿಮಾಲಯಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. ಈ ಬಾರಿ ನಾನು ರಕ್ಷಣಾ ತಂಡದ ಭಾಗವೂ ಆಗಿದ್ದೇನೆ ಎಂದು ಹನುಮಂತರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

6ನೇ ತಲೆಮಾರಿನ ಏರೋ ಎಂಜಿನ್‌ಗಳತ್ತ ಗಮನ ಹರಿಸುವ ಸಮಯ ಇದು: ರಾಜನಾಥ್ ಸಿಂಗ್

ಹಿಂದೂ ಮನೆ ಮೇಲೆ ನಿರಂತರ ಕಲ್ಲು ತೂರಾಟ: ಚಿಕ್ಕಮಗಳೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ, ಭದ್ರತೆ ಹೆಚ್ಚಳ

ಓಪನ್ ಆಗಿ ಮಾಂಸ ಮಾರಾಟ ನಿಷೇಧಕ್ಕೆ ಮುಂದಾದ ಬಿಹಾರ!

JEE ಮುಖ್ಯ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್; ಪಡೆದ ಅಂಕ ಎಷ್ಟು ಗೊತ್ತಾ?

ಪಹಲ್ಗಾಮ್ ಭಯೋತ್ಪಾದಕ ದಾಳಿ: 10 ತಿಂಗಳು ಕಳೆದರೂ ಈಡೇರದ ಉದ್ಯೋಗದ ಭರವಸೆ!

SCROLL FOR NEXT