ಉಪಮುಖ್ಯಮಂತ್ರಿ II ಶ್ರೀ ಜಗದೀಪ್ ಸಿಂಗ್ ದೇವ್ ನೇತೃತ್ವದ ಪೆನಾಂಗ್‌ನ ಉನ್ನತ ಮಟ್ಟದ ನಿಯೋಗ ಮತ್ತು ಪೆನಾಂಗ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ  
ರಾಜ್ಯ

ಕರ್ನಾಟಕ-ಪೆನಾಂಗ್ ತಾಂತ್ರಿಕ, ಕೌಶಲ್ಯ ಅಭಿವೃದ್ಧಿ ಸಹಯೋಗ: ನಿಯೋಗ ಜೊತೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ

ಕರ್ನಾಟಕವು ಸಾಫ್ಟ್‌ವೇರ್ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಚಿಪ್ ವಿನ್ಯಾಸ, ಸ್ಟಾರ್ಟ್‌ಅಪ್‌ಗಳು, ಡೀಪ್ ಟೆಕ್ ಮತ್ತು ಪ್ರತಿಭೆ ಅಭಿವೃದ್ಧಿಯಲ್ಲಿ ತನ್ನ ಸಾಮರ್ಥ್ಯಗಳನ್ನು ತೋರಿಸಿದೆ.

ಬೆಂಗಳೂರು: ಮಲೇಷ್ಯಾದ ಪೆನಾಂಗ್‌ನ ಉಪು ಮುಖ್ಯಮಂತ್ರಿ II ಜಗದೀಪ್ ಸಿಂಗ್ ಡಿಯೋ ನೇತೃತ್ವದ ನಿಯೋಗವು ಕರ್ನಾಟಕದ ಐಟಿ -ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಸೆಮಿಕಂಡಕ್ಟರ್‌ಗಳು, ಡೀಪ್ ಟೆಕ್ನಾಲಜಿ, ಸ್ಪೇಸ್ ಅಪ್ಲಿಕೇಶನ್‌ಗಳು, ಸ್ಮಾರ್ಟ್ ಸಿಟಿಗಳು ಮತ್ತು ಕೌಶಲ್ಯ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಯೋಗವನ್ನು ಅನ್ವೇಷಿಸುವ ಕುರಿತು ಚರ್ಚಿಸಿದರು.

ಚರ್ಚೆಗಳು ಪೂರಕ ಸಾಮರ್ಥ್ಯಗಳನ್ನು ಗುರುತಿಸುವತ್ತ ಗಮನಹರಿಸಿದವು. ಕರ್ನಾಟಕವು ಸಾಫ್ಟ್‌ವೇರ್ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಚಿಪ್ ವಿನ್ಯಾಸ, ಸ್ಟಾರ್ಟ್‌ಅಪ್‌ಗಳು, ಡೀಪ್ ಟೆಕ್ ಮತ್ತು ಪ್ರತಿಭೆ ಅಭಿವೃದ್ಧಿಯಲ್ಲಿ ತನ್ನ ಸಾಮರ್ಥ್ಯಗಳನ್ನು ತೋರಿಸಿದೆ. ಪೆನಾಂಗ್ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸೆಮಿಕಂಡಕ್ಟರ್‌ಗಳು, ಸುಧಾರಿತ ವಸ್ತುಗಳು ಮತ್ತು ಕೈಗಾರಿಕಾ ಸ್ಕೇಲ್-ಅಪ್‌ನಲ್ಲಿ ತನ್ನ ಪರಿಣತಿಯನ್ನು ಎತ್ತಿ ತೋರಿಸಿತು.

ಪೆನಾಂಗ್ ನಿಯೋಗವು ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಸೆಮಿಕಂಡಕ್ಟರ್ ಮತ್ತು ಚಿಪ್ ವಿನ್ಯಾಸ, ಕೌಶಲ್ಯ ಮತ್ತು ಪ್ರತಿಭೆ ವಿನಿಮಯ, ಡೀಪ್ ಟೆಕ್ನಾಲಜಿ, ಸ್ಪೇಸ್ ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಂತಹ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಲು ಮತ್ತು ನಿರಂತರ ತೊಡಗಿಸಿಕೊಳ್ಳುವಿಕೆಯ ಮೂಲಕ ಪರಸ್ಪರ ಒಪ್ಪಿಕೊಂಡರು.

ಕೌಶಲ್ಯ ಮತ್ತು ಪ್ರತಿಭೆ ಅಭಿವೃದ್ಧಿಯು ಪ್ರಮುಖ ಗಮನ ಕ್ಷೇತ್ರವಾಗಿ ಹೊರಹೊಮ್ಮಿದೆ. ಪೆನಾಂಗ್‌ನಲ್ಲಿ ಮುಂದುವರಿದ ಸೆಮಿಕಂಡಕ್ಟರ್ ಮತ್ತು ಇಂಟಿಗ್ರೇಟೆಡ್ ಸರ್ಕ್ಯೂಟ್ ವಿನ್ಯಾಸ ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುವ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ; ಅಮೆರಿಕ ಹೇಳಿದ್ದೇನು?

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು, ಭಯೋತ್ಪಾದಕ ಕೃತ್ಯ ಶಂಕೆ..!

ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ಅಂತಾರಾಷ್ಟ್ರೀಯ ವಾಯುಪ್ರದೇಶ ಬಂದ್: ಭಾರತದಲ್ಲೇ ಸಿಲುಕಿದ ವೆಸ್ಟ್ ಇಂಡೀಸ್, ಜಿಂಬಾಬ್ವೆ ಕ್ರಿಕೆಟ್ ತಂಡ!

SCROLL FOR NEXT