ಕಾರು ಬಸ್ ಅಪಘಾತ 
ರಾಜ್ಯ

ಶಿವಮೊಗ್ಗ: ಕಾರು-ಬಸ್‌ ಮಧ್ಯೆ ಭೀಕರ ಅಪಘಾತ; ಮೂವರು ದಾರುಣ ಸಾವು

ಇವರೆಲ್ಲರೂ ಚನ್ನಗಿರಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ, ವಾಪಸ್‌ ಕಿಗ್ಗಾಕ್ಕೆ ಹೋಗುತ್ತಿದ್ದರು. ಮಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುತ್ತಿದ್ದ ಬಸ್‌ ಡಿಕ್ಕಿಯಾಗಿದೆ.

ಶಿವಮೊಗ್ಗ: ಶಿವಮೊಗ್ಗದ ತೀರ್ಥಹಳ್ಳಿಯ ಭಾರತಿಪುರ ಕ್ರಾಸ್‌ ಬಳಿ KSRTC ಬಸ್‌ ಮತ್ತು ಕಾರಿನ ನಡುವೆ ಭೀಕರ ಅಪಘಾತ ಆಗಿ ಮೂವರು ಮೃತಪಟ್ಟಿದ್ದಾರೆ.

ರಿಯಾಜ್ ಅಹಮದ್ ಹಾಗೂ ಫಾತಿಮಾ ಮೃತರು. ಮಗು, ಕಾರಿನ ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರೆಲ್ಲರೂ ಚನ್ನಗಿರಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ, ವಾಪಸ್‌ ಕಿಗ್ಗಾಕ್ಕೆ ಹೋಗುತ್ತಿದ್ದರು. ಮಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುತ್ತಿದ್ದ ಬಸ್‌ ಡಿಕ್ಕಿಯಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೇಸ್‌ ದಾಖಲಿಸಿಕೊಂಡಿದ್ದಾರೆ.

ಚೆನ್ನಗಿರಿಯಿಂದ ಶೃಂಗೇರಿ ಕಡೆಗೆ ಸ್ವಿಫ್ಟ್ ಕಾರಿನಲ್ಲಿ 6 ಜನರು ತೆರಳುತ್ತಿದ್ದರೆ ಮಂಗಳೂರಿನಿಂದ ರಾಯಚೂರು ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದರೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮೀರ್ ಪುತ್ರನ ಸಿನಿಮಾ ಬ್ಯಾನರ್ ತೆರವು: ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿದ 'ಕೈ' ಮುಖಂಡ; ಕಣ್ಣೀರಿಟ್ಟ ಪೌರಾಯುಕ್ತೆ, video!

ಮಾಂಜಾ ದುರಂತ: ಬೈಕ್ ನಲ್ಲಿ ತೆರಳುವಾಗ ಕತ್ತು ಸೀಳಿದ ಗಾಳಿಪಟ ದಾರ, ಮಗಳಿಗೆ ಕರೆ ಮಾಡಿ ಪ್ರಾಣ ಬಿಟ್ಟ ತಂದೆ!

ಭೀತಿ ಮೂಡಿಸಿದ್ದ ನರಭಕ್ಷಕ ಕೊನೆಗೂ ಸೆರೆ, ಜನರ ಕೊಂದು ಮೃತದೇಹ ತಿನ್ನುತ್ತಿದ್ದ ರಾಕ್ಷಸ!

ಯಾವ ಸಂದೇಶವೂ ಇಲ್ಲ! ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿ.ಕೆ ಶಿವಕುಮಾರ್; Video

BMC ಚುನಾವಣೆಗೆ ಮುನ್ನಾ ದಿನ ಮುಂಬಾದೇವಿ ದೇವಸ್ಥಾನಕ್ಕೆ ಠಾಕ್ರೆ ಬ್ರದರ್ಸ್​ ಭೇಟಿ!

SCROLL FOR NEXT