ಬಾಗಲಕೋಟೆ: ಆಟವಾಡುತ್ತಿದ್ದ ತಮ್ಮ 18 ತಿಂಗಳ ಮಗಳು ಪಕ್ಕದ ಮನೆಯ ಸಂಪ್ಗೆ ಬಿದ್ದು ಮೃತಪಟ್ಟಿದ್ದರಿಂದ ದುಃಖಿತರಾದ ಪೋಷಕರು ಮಗಳು ಬದುಕಲಿ ಎಂದು ಉಪ್ಪಿನ ರಾಶಿ ಮಧ್ಯೆ ಇಟ್ಟಿದ್ದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 38ರಲ್ಲಿ ನಡೆದಿದೆ. ಉಪ್ಪಿನಲ್ಲಿ ಮೃತದೇಹವಿಟ್ಟರೆ ಮಗು ಬದುಕಿ ಬರುತ್ತದೆ ಎಂದು ನಂಬಿದ್ದರು.
ಮೃತ ಮಗಳು ಅಮೀನಾಳ ಮೃತದೇಹವನ್ನು ಪೋಷಕರು ಎರಡು ಗಂಟೆಯವರೆಗೂ ಉಪ್ಪಿನಲ್ಲಿ ಮುಳುಗಿಸಿಟ್ಟಿದ್ದರು. ಅಷ್ಟೇ ಅಲ್ಲದೆ ಮಗುವಿನ ಕಿವಿ ಬಳಿ ಮೊಬೈಲ್ ನಲ್ಲಿ ಕುರಾನ್ ಹಾಡು ಪ್ಲೇ ಮಾಡಿದ ಪೋಷಕರು ಪ್ರಾರ್ಥಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ವೈದ್ಯರು ನೀವು ಈ ರೀತಿ ಮಾಡಿದರೂ ಮಗು ಬದುಕುವುದಿಲ್ಲ ಎಂದು ಹೇಳಿದ್ದರಿಂದ ಕೊನೆಗೆ ನೋವಿನಲ್ಲೇ ಪೋಷಕರು ಮಗುವಿನ ಅಂತ್ಯ ಸಂಸ್ಕಾರ ನೆರವೇರಿಸಿದರು.