ಮದ್ಯದ ದರ ವಿಚಾರವಾಗಿ ಬಾರ್ ನಲ್ಲಿ ಭಾರಿ ಗಲಾಟೆ 
ರಾಜ್ಯ

Video: ಬಿಯರ್ ದರ ವಿಚಾರಕ್ಕೆ ಗಲಾಟೆ; ಬಾಟಲಿಗಳಲ್ಲೇ ಹೊಡೆದಾಟ, ನಾಗರಭಾವಿ ಬಾರ್‌ನಲ್ಲಿ ಹೈಡ್ರಾಮಾ!

ಮದ್ಯದ ಬೆಲೆ ಏರಿಕೆ ವಿಚಾರವಾಗಿ ಉಂಟಾದ ವಾಗ್ವಾದವು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿದ್ದು, ಘಟನೆ ವೇಳೆ ಯುವಕರ ಗುಂಪೊಂದು ಬಾರ್ ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ.

ಬೆಂಗಳೂರು: ಬಿಯರ್ ದರದ ವಿಚಾರಕ್ಕೆ ಹುಟ್ಟಿಕೊಂಡ ಮಾತಿನ ಚಕಮಕಿ ಬಳಿಕ ತಾರಕಕ್ಕೇರಿ ಪರಸ್ಪರ ಹಿಂಸಾತ್ಮಕ ತಿರುವು ಪಡೆದ ಘಟನೆ ಬೆಂಗಳೂರಿನ ನಾಗರಭಾವಿಯ ಬಾರ್ ನಲ್ಲಿ ನಡೆದಿದೆ.

ಹೌದು.. ಬೆಂಗಳೂರಿನ ನಾಗರಭಾವಿಯ ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲೇನಿಯಂ ಬಾರ್‌ನಲ್ಲಿ ಶನಿವಾರ ಸಂಜೆ ಭಾರಿ ಗಲಾಟೆ ನಡೆದಿದೆ.

ಮದ್ಯದ ಬೆಲೆ ಏರಿಕೆ ವಿಚಾರವಾಗಿ ಉಂಟಾದ ವಾಗ್ವಾದವು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿದ್ದು, ಘಟನೆ ವೇಳೆ ಯುವಕರ ಗುಂಪೊಂದು ಬಾರ್ ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.

ಶನಿವಾರ ಸಂಜೆ ಸುಮಾರು 7 ಗಂಟೆಗೆ ಈ ಘಟನೆ ನಡೆದಿದ್ದು, ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಮಿಲೇನಿಯಂ ಬಾರ್‌ಗೆ ಬಂದಿದ್ದ ಕೆಲ ಗ್ರಾಹಕರು ಮದ್ಯದ ಬೆಲೆ ಹೆಚ್ಚಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವಾಗಿ ಗ್ರಾಹಕರು ಮತ್ತು ಬಾರ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿತು.

ಇದೇ ವೇಳೆ ಬಾರ್‌ನೊಳಗೆ ಮತ್ತೊಂದು ಗ್ರಾಹಕರ ಗುಂಪಿನ ನಡುವೆಯೂ ಜಗಳ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಮಾತಿನ ಚಕಮಕಿ ಬಳಿಕ ಎರಡೂ ಕಡೆಯವರ ನಡುವೆ ಹಲ್ಲೆ-ಪ್ರತಿಹಲ್ಲೆ ಆರಂಭವಾಗಿ ಬಾರ್‌ನೊಳಗೆ ಭಾರೀ ಗಲಾಟೆ ಉಂಟಾಯಿತು.

ಪೊಲೀಸರ ಪ್ರಕಾರ, ಪರಿಸ್ಥಿತಿ ನಿಯಂತ್ರಣ ತಪ್ಪಿದಾಗ ಯುವಕರ ಗುಂಪು ಬಿಯರ್ ಬಾಟಲಿಗಳಿಂದ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತು. ಸಿಬ್ಬಂದಿಯನ್ನು ಬಾಟಲಿಗಳಿಂದ ಹೊಡೆದು, ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯನ್ನು ತಡೆಯಲು ಹಾಗೂ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದ ಕೆಲ ಗ್ರಾಹಕರ ಮೇಲೂ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಏಕಾಏಕಿ ನಡೆದ ಈ ಹಿಂಸಾಚಾರದಿಂದ ಬಾರ್‌ನಲ್ಲಿದ್ದ ಇತರ ಗ್ರಾಹಕರು ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾ ಲೇಔಟ್ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಲ್ಲಿ ಸಡನ್ ಆಪರೇಷನ್? ವಿಜಯೇಂದ್ರ ಚೇಂಜ್: ಸದಾನಂದಗೌಡ ಆಡಿಯೋ ವೈರಲ್; ಮಾಜಿ ಸಿಎಂ ಹೇಳಿದ್ದೇನು?

ಲಿಪ್ ಲಾಕ್ ದೃಶ್ಯದ ವೇಳೆ ನಟನಿಗೆ ರಕ್ತಬರುವಂತೆ ಕಚ್ಚಿದ್ರಾ ನಟಿ ಕಂಗನಾ ರಣಾವತ್? Video Viral

ನಾನು ಫಡ್ನವೀಸ್ 'ಹಿತೈಷಿ', ಅವರು ಪ್ರಧಾನಿ ಅಭ್ಯರ್ಥಿಯಾದರೆ ಬೆಂಬಲ- ಅಚ್ಚರಿ ಮೂಡಿಸಿದ ಉದ್ಧವ್ ಠಾಕ್ರೆ ಹೇಳಿಕೆ!

Video: ಹಲವು ವರ್ಷಗಳ ಬಳಿಕ ತ್ರಯಂಬಕೇಶ್ವರ ದೇಗುಲ ಅಮೃತಕುಂಡದಲ್ಲಿ ಶಿವಲಿಂಗ ದರ್ಶನ; ಭಕ್ತರಲ್ಲಿ ಸಂಭ್ರಮ

ರಾಮ ಮಂದಿರಕ್ಕಾಗಿ ಅವರು ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ: ಚಂಪತ್ ರಾಯ್ ಪರ ಸಹೋದರನ ಸಮರ್ಥನೆ