ಹಲ್ಲೆಗೊಳಗಾದ ಗ್ರಾಹಕ 
ರಾಜ್ಯ

ಬೆಂಗಳೂರು: ಡೆಲಿವರಿ ಲೋಕೇಶನ್ ವಿಚಾರಕ್ಕೆ ಜಗಳ; ಗ್ರಾಹಕನ ಮೇಲೆ ಬ್ಲಿಂಕಿಟ್ ಏಜೆಂಟ್‌ ಹಲ್ಲೆ; ಮೂಗು ಮುರಿತ!

ಗ್ರಾಹಕರು ಕರೆ ಮಾಡಿ, ಸರಿಯಾದ ಮಹಡಿಗೆ ಬರಲು ಕೇಳಿದಾಗ, ವಿತರಣಾ ಏಜೆಂಟ್ ಫ್ಲಾಟ್ ಬಳಿ ಬಂದು ಜಗಳವಾಡಿದ್ದಾನೆ. ತಮಿಳಿನಲ್ಲಿ ಬೈದಿದ್ದಾನೆ, ಮಾತು ವಿಕೋಪಕ್ಕೆ ತಿರುಗಿ ಗುದ್ದಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಮಾರ್ಚ್ 7 ರಂದು ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾಳಮ್ಮ ಲೇಔಟ್‌ನಲ್ಲಿ ಡೆಲಿವರಿ ಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ 27 ವರ್ಷದ ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಗಿಗ್ ಕೆಲಸಗಾರ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಲ್ಲೆಯ ಪರಿಣಾಮವಾಗಿ ಮೂಗಿನ ಮೂಳೆ ಮುರಿದಿದೆ.

ಸಂತ್ರಸ್ತ ಪಾಲ್ ಜೆ ವಿಥಯತಿ ಕೋರಮಂಗಲದ 8 ನೇ ಬ್ಲಾಕ್ ನಿವಾಸಿಯಾಗಿದ್ದು, ಕೇರಳ ಮೂಲದವರಾಗಿದ್ದಾರೆ. ಮಾರ್ಚ್ 7 ರಂದು ಬ್ಲಿಂಕಿಟ್‌ನಿಂದ ತಿಂಡಿ ಆರ್ಡರ್ ಮಾಡಿದ್ದಾರೆ. ವಿತರಣಾ ಏಜೆಂಟ್ ಅವರಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಎರಡನೇ ಮಹಡಿಯ ಫ್ಲಾಟ್‌ಗೆ ಹೋಗುವ ಬದಲು, ವಿತರಣಾ ಏಜೆಂಟ್ ನಾಲ್ಕನೇ ಮಹಡಿಗೆ ಹೋಗಿದ್ದಾರೆ.

ಗ್ರಾಹಕರು ಕರೆ ಮಾಡಿ, ಸರಿಯಾದ ಮಹಡಿಗೆ ಬರಲು ಕೇಳಿದಾಗ, ವಿತರಣಾ ಏಜೆಂಟ್ ಫ್ಲಾಟ್ ಬಳಿ ಬಂದು ಜಗಳವಾಡಿದ್ದಾನೆ. ತಮಿಳಿನಲ್ಲಿ ಬೈದಿದ್ದಾನೆ, ಮಾತು ವಿಕೋಪಕ್ಕೆ ತಿರುಗಿ ಗುದ್ದಾಡಿದ್ದಾರೆ ಎನ್ನಲಾಗಿದೆ. ವಿಥಯತಿ ಅವರ ಮೂಗು ಮತ್ತು ತುಟಿಗಳ ಬಳಿ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ಹಲ್ಲೆಯಲ್ಲಿ ಮೂಗಿನ ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಂತರ ಸಂತ್ರಸ್ತನ ಸಂಬಂಧಿ ಬ್ಲಿಂಕಿಟ್ ಅನ್ನು ಟ್ಯಾಗ್ ಮಾಡಿ X ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕಂಪನಿಯು, "ಇದರ ಬಗ್ಗೆ ಕೇಳಿ ನಮಗೆ ತುಂಬಾ ಕಳವಳವಾಗಿದೆ ಮತ್ತು ಅಂತಹ ಕ್ರಮಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ ಎಂದು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ನಾವು ಇದನ್ನು ಆದ್ಯತೆಯ ಮೇಲೆ ತನಿಖೆ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅಪ್ಡೇಟ್ ಅನ್ನು ಹಂಚಿಕೊಳ್ಳುತ್ತೇವೆ" ಎಂದು ಹೇಳಿದೆ.

ಆರಂಭದಲ್ಲಿ, NCR ದಾಖಲಿಸಲಾಗಿತ್ತು. ಮಂಗಳವಾರ, ಸೆಕ್ಷನ್ 117, 126 ಮತ್ತು BNS ನ ಇತರ ವಿಭಾಗಗಳ ಅಡಿಯಲ್ಲಿ FIR ದಾಖಲಿಸಲಾಗಿದೆ. ಜೋಸೆಫ್ ಎಂದು ಗುರುತಿಸಲಾದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಇಂದಿರಾ, ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್!

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!

ಬಂಡೀಪುರ, ನಾಗರಹೊಳೆ ಸಫಾರಿ ತಾತ್ಕಾಲಿಕ ಸ್ಥಗಿತ ಸಮರ್ಥಿಸಿಕೊಂಡ ಖಂಡ್ರೆ; ಷರತ್ತುಬದ್ಧ ಆರಂಭ

SCROLL FOR NEXT