ಉದ್ಯಮಿ ಮಹೇಶ್ ರೆಡ್ಡಿ, ಅವರ ಕುಟುಂಬ ಹಾಗೂ ಜನಾರ್ದನ ರೆಡ್ಡಿ 
ರಾಜ್ಯ

ದೇವರಿಗೇ ಮೋಸ: ಹೈದರಾಬಾದ್ ಉದ್ಯಮಿ ಅಂಜನಾದ್ರಿಗೆ ಕೊಟ್ಟಿದ್ದು 1 ಕೆಜಿ ಚಿನ್ನ ಅಲ್ಲ, ಕೇವಲ 250 ಗ್ರಾಂ! ತನಿಖೆಗೆ ಆದೇಶ

ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮತ್ತು ಎಎಂಆರ್ ಇಂಡಿಯಾ ಅಧ್ಯಕ್ಷ ಮಹೇಶ್ ರೆಡ್ಡಿ ಹಾಗೂ ಅವರ ಕುಟುಂಬವು ದೇವಸ್ಥಾನಕ್ಕೆ 1ಕೆಜಿ ಚಿನ್ನದ ಪ್ರಭಾವಳಿ, ಕಿರೀಟ ಹಾಗೂ ಗದೆ ಸೇರಿದಂತೆ ಒಟ್ಟು 12 ಆಭರಣಗಳನ್ನು ಅರ್ಪಿಸಿದ್ದರು.

ಕೊಪ್ಪಳ: ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಆಂಜನೇಯನಿಗೆ ಮೋಸ ಮಾಡಿದ ಆಘಾತಕಾರಿ ಘಟನೆ ನಡೆದಿದ್ದು, ದೇವಾಲಯದ ಟ್ರಸ್ಟಿಗಳು ಇದನ್ನು ಬಹಿರಂಗಪಡಿಸಿದ್ದಾರೆ

ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನ ಉದ್ಯಮಿಯೊಬ್ಬರು, ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ 1 ಕೆಜಿ ಚಿನ್ನದ ಆಭರಣಗಳನ್ನು ನೀಡುವುದಾಗಿ ಹೇಳಿದ್ದರು.

ಅದರಂತೆ ಮೇ 8 ರಂದು ಹೈದರಾಬಾದ್ ಮೂಲದ ಉದ್ಯಮಿ ಮತ್ತು ಎಎಂಆರ್ ಇಂಡಿಯಾ ಅಧ್ಯಕ್ಷ ಮಹೇಶ್ ರೆಡ್ಡಿ ಹಾಗೂ ಅವರ ಕುಟುಂಬವು ದೇವಸ್ಥಾನಕ್ಕೆ 1ಕೆಜಿ ಚಿನ್ನದ ಪ್ರಭಾವಳಿ, ಕಿರೀಟ ಹಾಗೂ ಗದೆ ಸೇರಿದಂತೆ ಒಟ್ಟು 12 ಆಭರಣಗಳನ್ನು ಅರ್ಪಿಸಿದ್ದರು. ಮಹೇಶ್ ರೆಡ್ಡಿ ಅವರ ಸ್ನೇಹಿತರಾದ ಸ್ಥಳೀಯ ಶಾಸಕ ಮತ್ತು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಕೂಡ ಈ ವೇಳೆ ಹಾಜರಿದ್ದರು.

ಮಹೇಶ್ ರೆಡ್ಡಿ ಅರ್ಪಿಸಿದ್ದ ಆಭರಗಳ ಮೌಲ್ಯ ಒಟ್ಟು 2.5 ಕೋಟಿ ರೂ. ಎಂದು ಹೇಳಲಾಗಿತ್ತು. ಆದರೆ ಖಜಾನೆಗೆ ಕಳುಹಿಸಲು ಚಿನ್ನದ ಆಭರಗಳನ್ನು ಮತ್ತೊಮ್ಮೆ ಪರೀಕ್ಷೆ ಮಾಡಿದಾಗ ಇದು ಪೂರ್ಣ ಪ್ರಮಾಣದ ಚಿನ್ನವಲ್ಲ ಅನ್ನೋದು ಗೊತ್ತಾಗಿದೆ.

ಸರ್ಕಾರ ನೇಮಿಸಿದ ತಜ್ಞರ ತಂಡ, ಉದ್ಯಮಿ ಹೇಳಿಕೊಂಡಂತೆ ಇದು 1 ಕೆಜಿ ಚಿನ್ನದ ಆಭರಣ ಅಲ್ಲ. ಕೇವಲ 250 ಗ್ರಾಂ ಚಿನ್ನ ಇದೆ ಎಂದು ಹೇಳಿದ್ದು, ಈ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿದೆ. ಅಲ್ಲದೆ ದೇಣಿಗೆ ನೀಡಿದ ಮಹೇಶ ರಡ್ಡಿ ಸಮ್ಮುಖದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ನೋಟಿಸ್ ಸಹ ನೀಡಿದೆ.

ಉದ್ಯಮಿ ಬಾರದಿದ್ರೆ ದೇಣಿಗೆಯಾಗಿ ನೀಡಿದ ಆಭರಣವನ್ನ ವಾಪಸ್ಸು ಕೊಡುವ ಕುರಿತು ಚಿಂತಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಶ್ನೆ ಪತ್ರಿಕೆ ಸೋರಿಕೆ: NEET UG 2026 ರದ್ದು, ಸಿಬಿಐ ತನಿಖೆಗೆ ಆದೇಶ; ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ

'ನಿಜ ಏನು ಅಂದ್ರೆ..': ಮೋದಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ನಟಿ Ramya ವ್ಯಂಗ್ಯ, ಹೇಳಿದ್ದೇನು?

Himanta Biswa Sarma Swearing in: US ರಾಯಭಾರಿ ಗೋರ್ ಭಾಗಿಯಾಗಿದ್ದು ವಿಶೇಷ ಏಕೆ? ಅಸ್ಸಾಂ ನಲ್ಲಿ ಅಮೆರಿಕದ ಹಿತಾಸಕ್ತಿ ಏನು?

ಸಿಎಂ ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿದ ತನ್ನ ಏಕೈಕ ಶಾಸಕನನ್ನೇ ಉಚ್ಛಾಟಿಸಿದ AMMK!

ತಮಿಳುನಾಡು ರಾಜಕೀಯದಲ್ಲಿ ರೋಚಕ ಟ್ವಿಸ್ಟ್: CM ವಿಜಯ್ ಭೇಟಿ ಮಾಡಿ, TVKಗೆ ಬೆಂಬಲ ಘೋಷಿಸಿದ AIADMKಯ ಷಣ್ಮುಗಂ ಬಣ!

SCROLL FOR NEXT