ಬಂಧಿತ ಆರೋಪಿಗಳೊಂದಿಗೆ ಪೊಲೀಸರು 
ರಾಜ್ಯ

ಬೆಳಗಾವಿ: ಡಾಕ್ಟರ್ ಮನೆಯಲ್ಲಿ 1.2 ಕೋಟಿ ರೂ. ಮೊತ್ತದ ಚಿನ್ನ ಕಳವು: ಇಬ್ಬರ ಬಂಧನ!

ಪೊಲೀಸರು 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣಗಳು ಮತ್ತು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟಿದ್ದ 22.8 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಒಟ್ಟು 75.3 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬೆಳಗಾವಿ: ನಗರದ ವೃದ್ಧ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಎಂದು ಗುರುತಿಸಲಾಗಿದೆ.

ಪೊಲೀಸರು 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣಗಳು ಮತ್ತು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟಿದ್ದ 22.8 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಒಟ್ಟು 75.3 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮನೆಯಲ್ಲಿದ್ದ 930 ಗ್ರಾಂ ಚಿನ್ನದ ಆಭರಣಗಳು ಕಾಣೆಯಾದ ನಂತರ ಮೇ 11 ರಂದು ಬೆಳಗಾವಿಯ ಕ್ಲಬ್ ರಸ್ತೆಯ ನಿವಾಸಿ ಡಾ. ಅನ್ನಪೂರ್ಣ ವಿಶ್ವನಾಥ್ ಧಾದೇದ್ ದೂರು ದಾಖಲಿಸಿದ್ದರು. ಬಲವಂತದ ಪ್ರವೇಶ ಅಥವಾ ಲಾಕರ್‌ಗೆ ಹಾನಿಯಾದ ಯಾವುದೇ ಲಕ್ಷಣಗಳು ಇಲ್ಲದ ಕಾರಣ, ಆರಂಭದಲ್ಲಿ ಮನೆಯೊಳಗೆ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಅನುಮಾನ ಉಂಟಾಗಿತ್ತು ಎಂದು ಪೊಲೀಸರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬ್ರಾವ್, ಪ್ರಮುಖ ಆರೋಪಿ ರಾಹುಲ್ ಕಾಂಬ್ಳೆ, ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಡಾ. ವಿಶ್ವನಾಥ್ ಧಾದೇದ್ ಅವರನ್ನು ನೋಡಿಕೊಳ್ಳಲು ಡಿಸೆಂಬರ್‌ನಲ್ಲಿ ಕೇರ್‌ಟೇಕರ್ ಆಗಿ ಸೇರಿಕೊಂಡಿದ್ದ. ದಂಪತಿಯ ಮಗ, ವೈದ್ಯನೂ ಆಗಿದ್ದಾನೆ, ಬೇರೆಡೆ ವಾಸಿಸುತ್ತಿದ್ದಾನೆ. ಇದರಿಂದಾಗಿ ಕುಟುಂಬವು ಕೇರ್‌ಟೇಕರ್ ಅನ್ನು ನೇಮಿಸಬೇಕಾಯಿತು. ಕಾಂಬ್ಳೆ ಸುಮಾರು ಮೂರು ತಿಂಗಳ ಅವಧಿಯಲ್ಲಿ ಆಗಾಗ್ಗೆ ಆಭರಣಗಳನ್ನು ಕಳ್ಳತನ ಮಾಡಿದ್ದು, ನಂತರ ಪರಾರಿಯಾಗಿದ್ದ ಎಂದು ತಿಳಿಸಿದರು.

ತನಿಖೆ ವೇಳೆ ಮನೆಯಲ್ಲಿರುವ ಹಳೆಯ ಲಾಕರ್ ಮುಚ್ಚಿದಾಗ ಲಾಕ್ ಆಗಿರುವಂತೆ ಕಂಡುಬಂದಿತ್ತು. ಆದರೆ ಸ್ವಲ್ಪ ಬಲ ಪ್ರಯೋಗದ ಮೂಲಕ ಅದನ್ನು ತೆಗೆಯಬಹುದಿತ್ತು. ಆರೋಪಿಗಳು ಈ ನ್ಯೂನತೆಯನ್ನು ಬಳಸಿಕೊಂಡು ಕಳ್ಳತನ ಮಾಡಿದ್ದಾರೆ ಎಂದು ವರದಿಯಾಗಿದೆ ಎಂದು ಆಯುಕ್ತರು ಹೇಳಿದರು.

ಕಾಂಬ್ಳೆ ಸಹ-ಆರೋಪಿ ಬಾಬಾಸಾಬ್ ಕಟಗೇರಿ ಸಹಾಯದಿಂದ ಕದ್ದ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿ, ಇಬ್ಬರೂ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಳಿದ ಕದ್ದ ಆಭರಣಗಳನ್ನು ಮರುಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಸಂಗ್ರಹಿಸಬೇಕು, ಮನೆ ಲಾಕರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್: ಲೋಕಭವನದಲ್ಲೇ ಸರಳ ಸಮಾರಂಭ; ಸಾರ್ವಜನಿಕರಿಗೆ ಪ್ರವೇಶ ಇಲ್ಲ

Karnataka CM News LIVE Updates | ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ!

ISI-ಭೂಗತ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು; 9 ಮಂದಿ ಬಂಧನ!

"ಇದ್ರೇ ನೆಮ್ದಿಯಾಗ್ ಇರ್ಬೇಕ್": ಐಟಿ ಉದ್ಯೋಗಕ್ಕೆ ಬೈ ಆಟೋ ಡ್ರೈವಿಂಗ್ ಗೆ ಜೈ; ಮಾಸಿಕ 60,000 ರೂ. ಸಂಪಾದಿಸುತ್ತಿರುವ ಮಹಿಳೆ!

ಸಚಿವ ಸಂಪುಟ ರಚನೆಗೆ ಭಾರೀ ಕಸರತ್ತು: ಪ್ರಿಯಾಂಕ್ ಖರ್ಗೆಗೆ DCM ಸ್ಥಾನ ನೀಡಲು ಒತ್ತಾಯ!

SCROLL FOR NEXT