ಈಗಿನ ಸುದ್ದಿ

ಮೈಸೂರಿನಲ್ಲಿ ರಾಮದಾಸ್ ಬೆಂಬಲಿಗ ಆತ್ಮಹತ್ಯೆ

Mainashree

ಮೈಸೂರು: ಆತ್ಮಹತ್ಯೆಗೆ ಯತ್ನಿಸಿದ್ದ ಮಾಜಿ ಸಚಿವ ರಾಮದಾಸ್ ಬೆಂಬಲಿಗ ನವೀನ್ ಎಂಬುವವರು ಬುಧವಾರ ಸಾವನ್ನಪ್ಪಿದ್ದಾರೆ.

ಮಾಜಿ ಸಚಿವ ರಾಮದಾಸ್ ಅವರು ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ ಮನನೊಂದ ಬೆಂಬಲಿಗ ನವೀನ್ ಎಂಬುವವರು ನೇಣು ಬಿಗಿದುಕೊಂಡಿದ್ದರು.

ನವೀನ್ ಅವರನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರದ ನಿವಾಸಿಯಾಗಿದ್ದ ನವೀನ್(29), ಆಟೋ ಚಾಲಕರಾಗಿದ್ದರು.


SCROLL FOR NEXT