ಸಾಂದರ್ಭಿಕ ಚಿತ್ರ 
ಜೀವನಶೈಲಿ

ಒಂಟಿತನವು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಬಹುದು!

ಪ್ರತಿಯೊಬ್ಬರಿಗೂ ಸಾಮಾಜಿಕ ಜೀವನದಿಂದ ತುಸು ವಿರಾಮ ಬೇಕಾಗುತ್ತದೆ, ಆದರೆ ಕೆಲವೊಮ್ಮೆ ಇದೇ ಒಂಟಿತನ ಅಥವಾ ಜನರಿಂದ ದೂರವಿರುವಿಕೆಯು ನಿಮ್ಮ ಸೃಜನಶೀಲತೆ ಹೆಚ್ಚುವಂತೆ ಮಾಡುತ್ತದೆ

ವಾಷಿಂಗ್ ಟನ್: ಪ್ರತಿಯೊಬ್ಬರಿಗೂ ಸಾಮಾಜಿಕ ಜೀವನದಿಂದ ತುಸು ವಿರಾಮ ಬೇಕಾಗುತ್ತದೆ, ಆದರೆ ಕೆಲವೊಮ್ಮೆ ಇದೇ ಒಂಟಿತನ ಅಥವಾ ಜನರಿಂದ ದೂರವಿರುವಿಕೆಯು ನಿಮ್ಮ ಸೃಜನಶೀಲತೆ ಹೆಚ್ಚುವಂತೆ ಮಾಡುತ್ತದೆ, ಒಂಟಿತನವು ವ್ಯಕ್ತಿಯ ಸೃಜನಶೀಲತೆಯನ್ನು ಸುಧಾರಿಸುತ್ತದೆ  ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ನ್ಯೂ ಯಾರ್ಕ್ ನ ಬಫೆಲೋ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಕೆಲವರು ತಮ್ಮನ್ನು ತಾವು ಒಂಟಿಯಾಗಿಸಿಕೊಂಡು ನಮ್ಮ ಒಳಗಿನ ಆಂತರ್ಯವನ್ನು ಹೊರಹಾಕಲು ಬಯಸುತ್ತಾರೆ. "ತಮ್ಮ ಸಮಸ್ಯೆಗಳು ಮತ್ತು ಅದಕ್ಕಿರಬಹುದಾದ ಪರಿಹಾರಗಳನ್ನು ಅರಿತುಕೊಳ್ಳುವ ಸಲುವಾಗಿ ಯಾರೊಬ್ಬರು ಏಕೆ ಸಮಾಜದಿಂದ ವಿಮುಖರಾಗುತ್ತಾರೆ ಎನ್ನುವುದನ್ನು ನಾವು ಅರ್ಥೈಸಿಕೊಲ್ಲಬೇಕು" ಅಮೆರಿಕದ ಪ್ರಮುಖ ಲೇಖಕರಾದ ಜೂಲಿ ಬೌಕರ್ ಹೇಳಿದ್ದಾರೆ.
ಕೆಲವರು ಒಂಟಿಯಾಗಿ ಪುಸ್ತಕ ಓದುವದಕ್ಕೆ, ಕಂಪ್ಯೂಟರ್ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಹಿಂದಿನ ಎಲ್ಲಾ ಅಧ್ಯಯನದ ಪ್ರಕಾರ ವ್ಯಕ್ತಿ ಒಂಟಿಯಾಗಿದ್ದರೆ ಖಿನ್ನತೆಯಂತಹಾ ಮಾನಸಿಕ ತೊಂದರೆ ಉಂಟಾಗುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಈ ನೂತನ ವರದಿಯು ಒಂಟಿತನ ಅಥವಾ ಸಮಾಜದಿಂದ ದೂರವಾಗುವುದು ವ್ಯಕ್ತಿಯ ಉನ್ನತಿಗೂ ಸಹಾಯವಾಗುತ್ತದೆ ಎಂದು ಹೇಳಿದೆ.
ಯುವಕರು ಹೆಚ್ಚಾಗಿ ಒಂಟಿಯಾಗಿರಲು ಬಯಸುತ್ತಾರೆ ಅಷ್ಟಕ್ಕೆ ಅವರಾರೂ ಸಮಾಜದ್ರೋಹಿಗಳಲ್ಲಿ.ಸಂಶೋಧಕರು ಹೇಳಿದ್ದಾರೆ. ಒಂದೊಮ್ಮೆ ಯಾರಾರ್ದರೂ ಒಂಟಿಯಾಗಿದ್ದಾಗ ಅವರಿ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಅವರ ಜೀವನದ ಯಾವುದೇ ಸಮಸ್ಯೆಗೆ ಅಂತಹಾ ಸಮಯದಲ್ಲಿ ಪರಿಹಾರ ದೊರೆಯಬಹುದು.
ಇದಲ್ಲದೆ ಸಂಕೋಚ, ಆತಂಕಗಳು ಸಹ ದೂರವಾಗುವ ಸಾದ್ಯತೆಗಳು ಇದೆ ಎಂದು ಸಂಶೋಧನಾ ವರದಿ ಪ್ರಸ್ತಾಪಿಸಿದೆ.ವ್ಯಕ್ತಿತ್ವ ಹಾಗೂ ವೈಯುಕ್ತಿಕ ವ್ಯತ್ಯಾಸಗಳ ಕುರಿತ ನಿಯತಕಾಲಿಕದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆದ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

SCROLL FOR NEXT