ಸಾಂದರ್ಭಿಕ ಚಿತ್ರ 
ಜೀವನಶೈಲಿ

ಪೋಷಕರಿಗೆ ಡ್ರಗ್ಸ್ ಗಿಂತ ಸಾಮಾಜಿಕ ಮಾಧ್ಯಮಗಳದ್ದೇ ಆತಂಕ: ಸಮೀಕ್ಷೆ

ತಂತ್ರಜ್ಞಾನ ಅಬಿವೃದ್ಧಿ ಹೊಂದುತ್ತಿದ್ದಂತೆ ಅದು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತದೆ...

ವಾಷಿಂಗ್ಟನ್ ಡಿ.ಸಿ: ತಂತ್ರಜ್ಞಾನ ಅಬಿವೃದ್ಧಿ ಹೊಂದುತ್ತಿದ್ದಂತೆ ಅದು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತದೆ ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಇದೀಗ ಸಾಮಾಜಿಕ ಮಾಧ್ಯಮಗಳು ತಮ್ಮ ಮಕ್ಕಳ ಮೇಲೆ ಡ್ರಗ್ಸ್, ಆಲ್ಕೋಹಾಲ್, ಸಿಗರೇಟು ಸೇವನೆಯಂತಹ ದುಷ್ಚಟಗಳಿಂದಲೂ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಪೋಷಕರು ಆತಂಕಕ್ಕೊಳಗಾಗಿದ್ದಾರಂತೆ.

ವಾಷಿಂಗ್ಟನ್ ನ ರೀಚೌಟ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ, ಇಂಟರ್ನೆಟ್ ಗಳು ಯುವಜನತೆ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಮ್ಮ ಮಕ್ಕಳು ಆಲ್ಕೋಹಾಲ್, ಡ್ರಗ್ಸ್ ಮತ್ತು ಧೂಮಪಾನಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಪೋಷಕರು ಗಾಬರಿಗೊಂಡಿದ್ದಾರೆ.

ವ್ಯತಿರಿಕ್ತವೆಂದರೆ ತಂತ್ರಜ್ಞಾನ ಶೇಕಡಾ 42ರ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಆತಂಕಕ್ಕೀಡಾದ ಪೋಷಕರ ಸಂಖ್ಯೆ ಶೇಕಡಾ 25ರಷ್ಟಿದೆ.

ರೀಚ್ ಔಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊನೊ ನಿಕೊಲಸ್, ಪ್ರತಿದಿನ ತಮ್ಮ ಮಕ್ಕಳು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದು ಪೋಷಕರನ್ನು ಆತಂಕಕ್ಕೀಡುಮಾಡಿದೆಯೆಂದು ಸಮೀಕ್ಷೆ ಹೇಳುತ್ತದೆ ಎನ್ನುತ್ತಾರೆ ಎಂದು ಎಬಿಸಿ ಉಲ್ಲೇಖಿಸಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ರೀಚೌಟ್ ಸಂಸ್ಥೆ 890 ಪೋಷಕರನ್ನು ಸಮೀಕ್ಷೆಗೊಳಪಡಿಸಿತ್ತು. ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಪಟ್ಟ ಅನಾಮಧೇಯತೆ ಪೋಷಕರನ್ನು ಹೆಚ್ಚು ಆತಂಕಕ್ಕೀಡುಮಾಡಿದೆಯಂತೆ. ಸಾಮಾಜಿಕ ಮಾಧ್ಯಮವೆಂದರೆ ಯುವಜನತೆ ಪ್ರತಿದಿನ ಬಳಸುವ ತಂತ್ರಜ್ಞಾನವಾಗಿದೆ. ಇಲ್ಲಿ ಗೊತ್ತಿದ್ದೊ, ಗೊತ್ತಿಲ್ಲದೆಯೊ ಯುವಜನರು ಬಹಳ ಬೇಗನೆ ಆಕರ್ಷಿತರಾಗುತ್ತಾರೆ. ಇಲ್ಲಿ ಸೋಷಿಯಲ್ ಮೀಡಿಯಾ ಮನಸ್ಸಿನ ಮೇಲೆ ಉಂಟುಮಾಡುವ ಹಾನಿ ನಿಜಕ್ಕೂ ಮಹತ್ವದ್ದು ಎನ್ನುತ್ತಾರೆ.

ಸಾಮಾಜಿಕ ಮಾಧ್ಯಮಗಳ ಭರಾಟೆಯ ಮಧ್ಯೆ ಮಕ್ಕಳ ಶಿಕ್ಷಣ ಮತ್ತು ಓದಿನ ಒತ್ತಡದ ಬಗ್ಗೆ ಕೂಡ ಪೋಷಕರಿಗೆ ಆತಂಕವುಂಟಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ