ಸಾಮಾಜಿಕ ಜಾಲತಾಣ 
ಜೀವನಶೈಲಿ

ಕೊರೋನಾ ವೈರಸ್ ಕುರಿತ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ! 

ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ ಎಂಬ ಮಾಹಿತಿ ಬಹಿರಂಗವಾಗಿದೆ. 

ನ್ಯೂಯಾರ್ಕ್: ಕೊರೋನಾ ವೈರಸ್ ಕುರಿತಂತೆ ಸಾಧ್ಯವಾದಷ್ಟೂ ಮಟ್ಟಿಗೆ ಹರಡಿರುವ ತಪ್ಪು ಮಾಹಿತಿಗೆ ಸಾಮಾಜಿಕ ಜಾಲತಾಣಗಳೇ ಮೂಲ ಎಂಬ ಮಾಹಿತಿ ಬಹಿರಂಗವಾಗಿದೆ. 

ಆನ್ನೆನ್ಬರ್ಗ್ ವಿಜ್ಞಾನ ಸಮೀಕ್ಷೆಯಲ್ಲಿ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಅಮೆರಿಕದ 1,008 ವಯಸ್ಕರನ್ನು ಪ್ರಶ್ನೆ ಕೇಳಲಾಗಿತ್ತು. ಈ ಪೈಕಿ ಪ್ರತಿಕ್ರಿಯೆ ನೀಡಿರುವವರ ಪೈಕಿ ಹಲವರು ಕೋವಿಡ್-19 ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಲಭ್ಯವಾಗಲು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳೂ ಕಾರಣ ಎಂಬುದನ್ನು ಯೂನಿವರ್ಸಿಟಿ ಆಫ್ ಪೆನ್ಸಲ್ವೇನಿಯಾ ಹಾಗೂ ಅರ್ಬಾನಾ-ಚಾಂಪೇನ್‌ನಲ್ಲಿ ಇಲಿನಾಯ್ಸ್ ನ ಸಂಶೋಧಕರು ಕಂಡುಕೊಂಡಿದ್ದಾರೆ. 

ಕೊರೋನ ಹರಡಿದ ಪ್ರಾರಂಭದ ದಿನಗಳಲ್ಲಿ ಅದನ್ನು ತಡೆಗಟ್ಟುವುದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಅದರ ಕುರಿತಾದ ಕಾನ್ಸ್ಪಿರೆಸಿ ಥಿಯರಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾದ ತಪ್ಪು ಮಾಹಿತಿ ಹರಡುತ್ತಿತ್ತು. ಅದನ್ನೆ ಬಹುತೇಕ ಮಂದಿ ನಂಬಿದ್ದರು ಎಂದು ಹಾರ್ವರ್ಡ್ ಕೆನಡಿ ಸ್ಕೂಲ್ ಮಿಸ್ ಇನ್ಫಾರ್ಮೇಷನ್ ರಿವ್ಯೂ ಜರ್ನಲ್ ನಲ್ಲಿ ಪ್ರಕಟವಾದ ಸಮೀಕ್ಷಾ ವರದಿ ಹೇಳಿದೆ. 

ಸಾಮಾಜಿಕ ಜಾಲತಣಾ ಅಥವಾ ಇನ್ನಿತರ ಮಾಧ್ಯಮಗಳನ್ನು ಗಮನಿಸುತ್ತಿದ್ದ ಜನರ ಪೈಕಿ ಶೇ.23 ರಷ್ಟು ಜನರು ಕೊರೋನಾ ವೈರಸ್ ನ್ನು ಚೀನ ಉದ್ದೇಶಪೂರ್ವಕವಾಗಿ ಕೊರೋನಾ ವೈರಸ್ ನ್ನು ಬಯೋ’ವೆಪನ್ ನ್ನಾಗಿ ಬಳಕೆ ಮಾಡಿದೆ ಎಂಬುದನ್ನು ನಂಬಿದ್ದರು. ಶೇ.21 ರಷ್ಟು ಮಂದಿ ಕೊರೋನಾವನ್ನು ತಡೆಗಟ್ಟಲು ವಿಟಮಿನ್ C ಉಪಯುಕ್ತವೆಂದು ನಂಬಿದ್ದರು. ಆದರೆ ಇವೆರಡಕ್ಕೂ ಸ್ಪಷ್ಟ ಸಾಕ್ಷ್ಯಾಧಾರ ಇನ್ನೂ ದೊರೆತಿಲ್ಲ ಅಥವಾ ಸದ್ಯದ ಮಟ್ಟಿಗೆ ಸುಳ್ಳು ಮಾಹಿತಿಗಳಾಗಿವೆ. 
 
ಫೇಸ್ ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ ನ್ನು ವೀಕ್ಷಿಸುವ ಜನರು ಕೊರೋನಾ ತಡೆಗೆ ವಿಟಮೀನ್ C  ಉಪಯುಕ್ತ ಎಂದು ನಂದಿದ್ದರು. ಗೂಗಲ್ ನ್ಯೂಸ್, ಯಾಹೂ ನ್ಯೂಸ್ ನ್ನು ವೀಕ್ಷಿಸುವ ಜನರು (ಮಾರ್ಚ್ ತಿಂಗಳಲ್ಲಿ) ಕೊರೋನಾ ಹರಡುವಿಕೆ ತಡೆಗೆ ರೋಗಲಕ್ಷಣಗಳಿಲ್ಲದ ವ್ಯಕ್ತಿಯಿಂದ ದೂರ ಉಳಿಯುವ ಅಗತ್ಯವಿಲ್ಲವೆಂದೂ, ಕೈ ತೊಳೆಯುವುದು ಪರಿಣಾಮಕಾರಿಯಲ್ಲವೆಂದೂ ನಂಬಿದ್ದರು. 

ಆದರೆ ಮುಖ್ಯವಾಹಿನಿಯಲ್ಲಿರುವ ಸುದ್ದಿ ವಾಹಿನಿಗಳು ಹಾಗೂ ಮುದ್ರಣ ಮಾಧ್ಯಮಗಳು ಕೋವಿಡ್-19 ಹರಡುವಿಕೆ, ಅದನ್ನು ತಡೆಯುವ ವಿಧಾನ, ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನಿಖರ, ನೈಜ ಮಾಹಿತಿ ನೀಡಿವೆ ಎಂದು ಸಮೀಕ್ಷೆಯ ಮೂಲಕ ತಿಳಿದುಬಂದಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT