ನಮ್ಮ ಬೆಂಗಳೂರು 
ದೇಶ

ನಮ್ಮ ಬೆಂಗಳೂರು ಪುರಸ್ಕಾರ: ಆಯ್ಕೆ ಶುರು

ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರ...

ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರಕ್ಕೆ ಸಕ್ರಿಯ ನಾಗರಿಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳು ತೆರಳಲಿದ್ದಾರೆ.

ಪೀಣ್ಯದ ಡಾ.ರಾಜ್‌ಕುಮಾರ್ ಮೈದಾನದಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು ಚಲನಚಿತ್ರ ನಿರ್ಮಾಪಕ ಎಂ.ಜಿ.ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸಾಮಾನ್ಯ ನಾಗರಿಕರು ಹಾಗೂ ಅವರ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡಲಾಗುತ್ತದೆ. ಜನರ ಮಧ್ಯೆಯೇ ಇದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರು, ಸಾಮಾನ್ಯರಾಗಿದ್ದು ಹೊಸದೊಂದ ಬದಲಾವಣೆಯನ್ನು ತಂದಿರುವಂಥವರನ್ನು ಈ ಪುರಸ್ಕಾರಕ್ಕೆ ಗುರುತಿಸಲಾಗುತ್ತದೆ. ವಿದ್ಯಾರ್ಥಿಗಲು ಇಡಿ ಬೆಂಗಳೂರನ್ನು ಸುತ್ತಾಡಿ, ಹುಡುಕಾಟ ನಡೆಸಿ ಅವರ ನೆಚ್ಚನ ಹೀರೋವನ್ನು ಆಯ್ಕೆ ಮಾಡುತ್ತಾರೆ.

ನಾಗರಿಕರೇ ಅವರೊಳಗಿರುವ ಉತ್ತಮರನ್ನು ಗುರುತಿಸುವುದರಿಂದ ಈ ಪುರಸ್ಕಾರ ಇತರೆ ಪುರಸ್ಕಾರಗಳಿಗಿಂದ ವಿಭಿನ್ನ ಎನಿಸುತ್ತದೆ.

ಉಳಿದವರಿಗಿಂತ ತಾವು ಹೇಗೆ ಭಿನ್ನ ಎಂಬುದನ್ನೂ ಸ್ಪಷ್ಟಪಡಿಸುವ ಅವಕಾಶ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ನಗದನ್ನು ಒಳಗೊಂಡಿರುತ್ತದೆ. ಪ್ರಕ್ರಿಯೆ ಡಿ.10 ರಂದು ಆರಂಭವಾಗಲಿದ್ದು ಡಿ.11 ಕ್ಕೆ ಜಯನಗರ, ಜೆಪಿ ನಗರ, ಬಿಟಿಎಂ, ಬನ್ನೇರುಘಟ್ಟ, ಡಿ.12ರಂದು ವೈಟ್ ಫೀಲ್ಡ್, ಮಾರತ್ತಹಳ್ಳಿ, ಸರ್ಜಾಪುರ, ಡಿ.13ಕ್ಕೆ ಸದಾಶಿವ ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಗಾಂಧಿನಗರ, ಡಿ.14-ಮೈಸೂರು ರಸ್ತೆ, ವಿಜಯನಗರ, ರಾಜಾಜಿನಗರ, ಡಿ. 15 ಗಾಂಧಿ ಬಜಾರ್, ಹನುಮಂತನಗರ, ಗಿರಿನಗರ, ಡಿ.16ಕ್ಕೆ ಕೆಆರ್‌ಪುರ, ರಾಮಮೂರ್ತಿನಗರ, ಕಮ್ಮನಹಳ್ಳಿಗಳಿಗೆ ತೆರಳಿ ಹೀರೋಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿವರಗಳಿಗೆ:
ಮೊ: 9591985287, 9036288857.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT