ದೇಶ

280 ಕೋಟಿ ಆನ್ ಲೈನ್ ವಂಚನೆ: ಐವರ ಬಂಧನ

ಆನ್ ಲೈನ್ ಮೂಲಕ ಹಣ ಡಬ್ಲಿಂಗ್ ಮಾಡುವುದಾಗಿ ನಂಬಿಸಿ ಸಾವಿರಾರು...

ಬೆಂಗಳೂರು: ಆನ್ ಲೈನ್ ಮೂಲಕ ಹಣ ಡಬ್ಲಿಂಗ್ ಮಾಡುವುದಾಗಿ ನಂಬಿಸಿ ಸಾವಿರಾರು ಮಂದಿಗೆ ರು.280 ಕೋಟಿಗೂ ಹೆಚ್ಚು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್.ಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ, ಆಂಧ್ರ ಮೂಲದ ದಾಮೋದರ್ ರೆಡ್ಡಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಆರೋಪಿ ರೆಡ್ಡಿ, ಚೈನ್ಲಿಂಕ್ ವ್ಯವಹಾರ ಮಾದರಿಯಲ್ಲಿ ವ್ಯವಹಾರ ನಡೆಸುತ್ತಿದ್ದ. ಡಿಡಿಡಿ ವೆಬ್ಸೈಟ್ ವೀಕ್ಷಣೆ ಹೆಸರಿನಲ್ಲಿ ಸಾರ್ವಜನಿಕರಿಂದ ಸದಸ್ಯತ್ವ ಶುಲ್ಕವಾಗಿ ಮೂರ್ನಾಲ್ಕು ಸಾವಿರ ಸ್ವೀಕರಿಸುತ್ತಿದ್ದ. ಒಂದು ವೇಳೆ ಸದಸ್ಯರು ಮತ್ತಿಬ್ಬರನ್ನು ಪರಿಚಯಿಸಿದರೆ ಶೇ.25ರಷ್ಟು ಕಮಿಷನ್ ನೀಡುವ ಆಮಿಷ ನೀಡುತ್ತಿದ್ದ.

ಕೆ.ಆರ್.ಪುರದಲ್ಲಿ ಕಚೇರಿ ಹೊಂದಿದ್ದಾಗಿ ತಿಳಿಸಿದ್ದ ರೆಡ್ಡಿ ಹಲವರ ವಿಶ್ವಾಸವನ್ನೂ ಗಳಿಸಿದ್ದ. ಈತನ ಮಾತು ನಂಬಿ ಬೆಂಗಳೂರು ಸೇರಿ ರಾಜ್ಯದ ಸಾವಿರಾರು ಮಂದಿ ವೆಬ್ಸೈಟ್ನ ಸದಸ್ಯತ್ವ ಪಡೆದಿದ್ದರು. ಹೀಗೆ ಕೋಟ್ಯಂತರ ರುಪಾಯಿ ಸಂಗ್ರಹವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇತ್ತೀಚೆಗೆ ಮೈಸೂರು ಮೂಲದ ಶ್ರೀನಿವಾಸ್ ಎಂಬುವರು ರೆಡ್ಡಿಯಿಂದ ವಂಚನೆಗೊಳಾಗಿದ್ದಾಗಿ ಹೇಳಿ ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT