ಭಾರತದ ಶ್ರೀಮಂತ ಹಳ್ಳಿ ಗುಜರಾತಿನ 'ಧರ್ಮಜ್‌' 
ದೇಶ

ಭಾರತದ ಅತ್ಯಂತ ಶ್ರೀಮಂತ ಹಳ್ಳಿ ಗುಜರಾತಿನ 'ಧರ್ಮಜ್‌'

ಪ್ರತಿ ಕುಟುಂಬದಿಂದಲೂ ಒಬ್ಬೊಬ್ಬ ಸದಸ್ಯರು ಹಲವು ವರ್ಷಗಳಿಂದ ವಿದೇಶಗಳಲ್ಲಿ ನೆಲೆಸಿದ್ದಾರೆ...

ವಡೋದರ: ಕೇರಳದ ಗ್ರಾಮವೊಂದರ ಬ್ಯಾಂಕಿನಲ್ಲಿ ಅನಿವಾಸಿ ಭಾರತೀಯರಿಂದ ಬರೋಬ್ಬರಿ ರೂ. 90 ಸಾವಿರ ಕೋಟಿ ಠೇವಣಿ ಇಡುವ ಮೂಲಕ ಅತಿ ಶ್ರೀಮಂತ ಹಳ್ಳಿ ಎಂಬ ಖ್ಯಾತಿ ಪಡೆದಿತ್ತು. ಆದರೆ ಇದೀಗ ಗುಜರಾತಿನ ವಡೋದರದಲ್ಲಿರುವ ಹಳ್ಳಿಯೊಂದರ ಬ್ಯಾಂಕುಗಳಲ್ಲಿ ಸುಮಾರು 1000 ಕೋಟಿ ಠೇವಣಿ ಇಡುವ ಮೂಲಕ ಕೇರಳದ ಗ್ರಾಮವನ್ನು ಹಿಂದಿಕ್ಕಿದೆ.

ಗುಜರಾತಿನ ಆನಂದ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿಯೇ ಧರ್ಮಜ್. ಅಂದ ಹಾಗೆ ಈ ಹಳ್ಳಿಯಲ್ಲಿನ ಜನಸಂಖ್ಯೆ ಎಷ್ಟು ಗೊತ್ತೆ ಕೇವಲ 11,333.

ಈ ಹಳ್ಳಿಯಿಂದ ವಿದೇಶಕ್ಕೆ ತೆರಳಿರುವ ಅನಿವಾಸಿ ಭಾರತೀಯರು, ಹಲವು ವರ್ಷಗಳಿಂದ ಈ ಹಳ್ಳಿಯ ಬ್ಯಾಂಕುಗಳಲ್ಲಿ ಠೇವಣಿ ಇಡಲು ಪ್ರಾರಂಭಿಸಿದ್ದು, ಇಂದಿಗೆ ಅದರ ಮೌಲ್ಯ ಸಾವಿರ ಕೋಟಿ ದಾಟಿದೆ. ಈ ಮೂಲಕ ಧರ್ಮಜ್ ಭಾರತದಲ್ಲೇ ಅತ್ಯಂತ ಶ್ರೀಮಂತ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ವಡೋದರ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೆಜರ್ ಆರ್.ಎನ್.ಹೈರ್‌ವೇ ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಈ ಗ್ರಾಮದ ಅನಿವಾಸಿ ಭಾರತೀಯರು, ಧರ್ಮಜ್‌ನ ಸರ್ಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಲು ಪ್ರಾರಂಭಿಸಿದ್ದು, ಅದು ಇಂದಿಗೆ ಸಾವಿರ ಕೋಟಿ ಗಡಿ ದಾಟಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಧರ್ಮಜ್ ವಿದ್ಯಾವಂತ ಹಳ್ಳಿಯಾಗಿದ್ದು, ದೇಶದಲ್ಲೇ ಶ್ರೀಮಂತ ಹಳ್ಳಿಯಾಗಿ ಹೊರಹೊಮ್ಮಿದೆ.

ಧರ್ಮಜ್ ಗ್ರಾಮದಲ್ಲಿ ಸುಮಾರು 3 ಸಾವಿರ ಪಟ್ಟೇದಾರ್ ಕುಟುಂಬಗಳು ವಾಸಿಸುತ್ತಿವೆ. ಪ್ರತಿ ಕುಟುಂಬದಿಂದಲೂ ಒಬ್ಬೊಬ್ಬ ಸದಸ್ಯರು ಹಲವು ವರ್ಷಗಳಿಂದ ವಿದೇಶಗಳಲ್ಲಿ ನೆಲೆಸಿದ್ದಾರೆ.

ಧರ್ಮಜ್ ಗ್ರಾಮಸ್ಥರ ಪೈಕಿ ಸುಮಾರು 1,700 ಕುಟುಂಬಗಳು ಬ್ರಿಟನ್‌ನಲ್ಲಿ ನೆಲಸಿವೆ. ಸುಮಾರು 300 ಕುಟುಂಬಗಳು ಅಮೆರಿಕದಲ್ಲಿ ನೆಲಸಿವೆ. ಅಂತೆಯೇ 160 ಕುಟುಂಬಗಳು ನ್ಯೂಜಿಲೆಂಡ್‌ನಲ್ಲಿ, 200 ಕುಟುಂಬಗಳು ಕೆನಡಾ, 60 ಕುಟುಂಬಗಳು ಆಸ್ಟ್ರೇಲಿಯಾದಲ್ಲಿದ್ದಾರೆ. ಧರ್ಮಜ್ 11.333 ಜನಸಂಖ್ಯೆ ಹೊಂದಿದ್ದು, ಆ ಪೈಕಿ 3,120 ಕುಟುಂಬಗಳು ವಿದೇಶಗಳಲ್ಲಿ ನೆಲೆಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

Street Dog attack: ಬೀದಿ ನಾಯಿ ಸಮಸ್ಯೆಗೆ ಉಪಾಯ ಕಂಡುಕೊಂಡ ಗದಗ ಜನತೆ, ಕಾಟದಿಂದ ಮುಕ್ತಿಗೆ ಬಣ್ಣ ನೀರಿನ ಪ್ರಯೋಗ..!

ನಮ್ಮವರು ಬೇರೆ ಧರ್ಮದವರ ಪ್ರಾರ್ಥನೆ ಸ್ಥಳಗಳಿಗೆ ಹೋಗುವುದಿಲ್ಲವೇ? ಯದುವೀರ್ ಬಿಜೆಪಿ ಜೊತೆ ಸೇರಿ ಇತಿಹಾಸ ಮರೆತಿದ್ದಾರೆ: DKS

SCROLL FOR NEXT