ತಾಲಿಬಾನ್ ಉಗ್ರರು 
ದೇಶ

ಮಕ್ಕಳನ್ನ ಕೊಂದಾಯ್ತು, ಮುಂದೆ ಇನ್ಯಾರನ್ನ?

ಇಸ್ಲಾಮಾಬಾದ್: ಮಕ್ಕಳನ್ನು ಕೊಂದಾಯ್ತು ಇನ್ನೇನು? ಇಂಥ ಪ್ರಶ್ನೆ ಕೇಳಿದ್ದು 132 ಮಕ್ಕಳನ್ನು ನಿರ್ದಯವಾಗಿ ಹತ್ಯೆ ಮಾಡಿದ ಉಗ್ರರು.

ಮುಗ್ಧ ಜೀವಗಳನ್ನು ಆಹುತಿ ಪಡೆದ ಬಳಿಕ ಇನ್ನೇನು ಎನ್ನುವ ಪಾತಕಿಗಳ ಪ್ರಶ್ನೆಗೆ ಉತ್ತರಿಸಿದ ಪಾಕಿಸ್ತಾನ ತಾಲಿಬಾನ್ ನಾಯಕತ್ವ 'ಇನ್ನು ಸೈನಿಕರು ಬರುತ್ತಾರೆ ಅವರನ್ನೂ ಮುಗಿಸಿ ಹುತಾತ್ಮರಾಗಿ' ಎಂಬ ಸೂಚನೆ ನೀಡಿದ್ದರಂತೆ. ಒಟ್ಟಾರೆ 7 ಗಂಟೆ ಕಾಲ ನಡೆದ ಹತ್ಯಾಕಾಂಡದ ವೇಳೆ ಉಗ್ರರು ಮೊಬೈಲ್ ಮೂಲಕ ನಡೆಸಿದ ಮಾತುಕತೆ ವಿವರವನ್ನು ಪಾಕ್ ಸೇನೆ ಛೇದಿಸಿ ಪಡೆಕೊಂಡಿದೆ.

ವಿಚಿತ್ರ ಖುಷಿ: ಈ ಉಗ್ರರು ಎಂಥ ಕಟುಕ ಮನಸ್ಥಿತಿಯವರೆಂದರೆ ಮಕ್ಕಳನ್ನು ಕೊಲ್ಲುವಾಗ ವಿಚಿತ್ರ ಖುಷಿ ಅನುಭವಿಸುತ್ತಿದ್ದರಂತೆ. ಈ ವಿಚಾರವನ್ನು ಉಗ್ರ ದಾಳಿಯಿಂದ ಪಾರಾದ 14 ವರ್ಷದ ಶಹನವಾಜ್ ಖಾನ್ ಎನ್ನುವ ಬಾಲಕ ಬಿಚ್ಚಿಟ್ಟಿದ್ದಾನೆ. ಉಗ್ರರು ದಾಳಿ ನಡೆಸಿದಾಗ ಇಂಗ್ಲಿಷ್ ತರಗತಿ ನಡೆಯುತ್ತಿತ್ತು.

ಕೊಠಡಿಯೊಳಗೆ ಮಿಲಿಟರಿ ಸಮವಸ್ತ್ರದಲ್ಲಿ ಬಂದೂಕುಧಾರಿ ಉಗ್ರರು 8 ವಿದ್ಯಾರ್ಥಿಗಳಿಗೆ ಕೈ ಎತ್ತುವಂತೆ ಸೂಚಿಸಿದರು. ಇಡೀ ತರಗತಿಯೇ ಕೈ ಎತ್ತಿತ್ತು. ಎಂಟು ವಿದ್ಯಾರ್ಥಿಗಳನ್ನಷ್ಟೇ ಆಯ್ಕೆ ಮಾಡಿದ ಅವರು ಕ್ಲಾಸಿನ ಮುಂದೆ ಹೋಗಿ ನಿಲ್ಲುವಂತೆ ಸೂಚಿಸಿದರು.

ನಂತರ ಶಿಕ್ಷಕರನ್ನು ಕುರ್ಚಿಯಲ್ಲಿ ಕೂರಿಸಿ ನಿಮ್ಮ ಪ್ರೀತಿ ಪಾತ್ರರು ಕಣ್ಣ ಮುಂದೆಯೇ ಸಾಯುವುದನ್ನು ನೋಡಿ ಎನ್ನುತ್ತಾ ಮಕ್ಕಳ ಮೇಲೆ ಗುಂಡಿನಮಳೆಗರೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT