ಶಿವರಾಜ್‌ಸಿಂಗ್ ಚೌಹಾಣ್‌ರಿದ್ದ ವಿಮಾನ 
ದೇಶ

ಚೌಹಾಣ್ ವಿಮಾನ ತಳ್ಳಿದ ಪೊಲೀಸರು!

ಸೈಬೀರಿಯಾದಲ್ಲಿ ಕೊರೆಯುವ ಚಳಿಯಿಂದಾಗಿ ಥಂಡಿಹೊಡೆದಿದ್ದ...

ಛಂದ್ವಾರಾ: ಸೈಬೀರಿಯಾದಲ್ಲಿ ಕೊರೆಯುವ ಚಳಿಯಿಂದಾಗಿ ಥಂಡಿಹೊಡೆದಿದ್ದ ವಿಮಾನವನ್ನು ಪ್ರಯಾಣಿಕರೇ ತಳ್ಳಿ ಚಾಲೂ ಮಾಡಿದ ಪ್ರಸಂಗ ನಿಮಗೆ ನೆನಪಿರಬಹುದು. ಇದೇ ಘಟನೆಯನ್ನು ನೆನಪಿಸುವ ಪ್ರಸಂಗ ಮಧ್ಯ ಪ್ರದೇಶದಲ್ಲೂ ನಡೆದಿದೆ. ಆದರೆ, ಇಲ್ಲಿ ವಿಮಾನ ತಳ್ಳಿದ್ದು ಮಾತ್ರ ಪೊಲೀಸರು!
 
ಹೌದು, ಇಲ್ಲಿನ ಛಾಂದ್ವಾರಾ ವಿಮಾನ ನಿಲ್ದಾಣ ಸೋಮವಾರ ಇಂಥದ್ದೊಂದು ಪ್ರಸಂಗಕ್ಕೆ ಸಾಕ್ಷಿಯಾಯಿತು. ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ರಿದ್ದ ವಿಮಾನ ಮಧ್ಯಾಹ್ನ 12 ಗಂಟೆ ವೇಳೆಗೆ ಛಂದ್ವಾರಾದಲ್ಲಿ ಇಳಿದಿತ್ತು.

ಕೆಲ ಹೊತ್ತಿನ ಬಳಿಕ ಕೇಂದ್ರದ ಮಾಜಿ ಸಚಿವ ಕಮಲ್‌ನಾಥ್ ಅವರ ವಿಮಾನವೂ ಇಲ್ಲೇ ಇಳಿಯುವುದಿತ್ತು. ಆದರೆ, ಚೌಹಾಣ್ ವಿಮಾನದ ಎಂಜಿನ್ ಚಾಲೂ ಆಗದ ಕಾರಣ ಕೊನೆಗೆ ಅಲ್ಲಿದ್ದ ಪೊಲೀಸರೇ ನೆರವಿಗೆ ಧಾವಿಸಬೇಕಾಯಿತು. ಇಷ್ಟೊತ್ತಿಗಾಗಲೇ ಏರ್‌ಪೋರ್ಟ್‌ನತ್ತ ಆಗಮಿಸಿದ್ದ ಕಮಲ್‌ನಾಥ್ ಅವರಿದ್ದ ವಿಮಾನ ಆಗಸದಲ್ಲೇ 20 ನಿಮಿಷ ಗಿರಕಿ ಹೊಡೆಯಬೇಕಾಗಿಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕೊಪ್ಪಳದ ಗಂಗಾವತಿಯಲ್ಲಿ ಹರಿಯಿತು ನೆತ್ತರು: BJP ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಹತ್ಯೆ

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ

SCROLL FOR NEXT