ದೇಶ

ಭಾರತವನ್ನೂ ಸುಮ್ನೆ ಇರಾಕ್ ಬಿಡಲ್ಲ

Mainashree

ನವದೆಹಲಿ: ಅಲ್‌ಖೈದಾ ಮತ್ತು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘನೆಗಳು ಪರಸ್ಪರ ಕೈಜೋಡಿಸಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸುತ್ತಿವೆ.

ದೇಶದಲ್ಲಿ ವಿದೇಶಿಯರನ್ನು ಅಪಹರಿಸುವುದು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಮಾದರಿಯ ಸ್ಥಿತಿಯನ್ನು ಭಾರತದಲ್ಲೂ ಸೃಷ್ಟಿಸುವುದು ಈ ಸಂಘಟನೆಗಳ ಉದ್ದೇಶವಾಗಿದೆ.

ಈ ಎರಡೂ ಸಂಘಟನೆಗಳು ಗೂಢಲಿಸಿ ಮೂಲಕ ನಡೆಸಿದ ಸಂಭಾಷಣೆಯಿಂದ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಖೈದಾ ಮತ್ತು ಐಎಂ ಜಂಟಿ ಕಾರ್ಯತಂತ್ರವನ್ನು ಕೇಂದ್ರ ಗುಪ್ತಚರ ಮೂಲಗಳು ಬಹಿರಂಗಪಡಿಸಿವೆ.

ಕುಕರ್ ಬಾಂಬ್‌ನಂತಹ ಅಲ್ಪ ಪ್ರಮಾಣದ ಸ್ಪೋಟಗಳಲ್ಲಿ ಭಾಗಿಯಾಗುತ್ತಿದ್ದ ಇಂಡಿಯನ್ ಮುಜಾಹಿದೀನ್ ಈಗ ಅಲ್‌ಖೈದಾದೊಂದಿಗೆ ಕೈಜೋಡಿಸಿರುವುದು ಭದ್ರತಾ ಸಂಸ್ಥೆಗಳ ಭೀತಿಗೆ ಕಾರಣವಾಗಿದೆ.

SCROLL FOR NEXT