Former Telecom Minister Dayanidhi Maran 
ದೇಶ

ಜಾರಿ ತೆಕ್ಕೆಗೆ ಬಿದ್ದ ರು.700 ಕೋಟಿ ಆಸ್ತಿ

ಬಹುಕೋಟಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಮಾರನ್ ಸಹೋದರರಿಗೆ ಬುಧವಾರ ಹಿನ್ನಡೆಯಾಗಿದೆ. ಏರ್‍ಸೆಲ್- ಮ್ಯಾಕ್ಸೆಸ್ ಖರೀದಿ ಪ್ರಕರಣದಲ್ಲಿ ಅವ್ಯವಹಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವ ದಯಾನಿಧಿ ಮಾರನ್...

ನವದೆಹಲಿ: ಬಹುಕೋಟಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಮಾರನ್ ಸಹೋದರರಿಗೆ ಬುಧವಾರ ಹಿನ್ನಡೆಯಾಗಿದೆ. ಏರ್‍ಸೆಲ್- ಮ್ಯಾಕ್ಸೆಸ್ ಖರೀದಿ ಪ್ರಕರಣದಲ್ಲಿ ಅವ್ಯವಹಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವ ದಯಾನಿಧಿ ಮಾರನ್ ಮತ್ತು ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್‍ಗೆ ಸೇರಿದ ರು.742.58 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟು ಗೋಲು ಹಾಕಿಕೊಂಡಿದೆ.

ಈ ಪೈಕಿ ಬ್ಯಾಂಕ್‍ಗಳಲ್ಲಿ ಕಲಾನಿಧಿ ಮಾರನ್ ಹೆಸರಿನಲ್ಲಿ ಇರಿಸಲಾಗಿರುವ ರು.100 ಕೋಟಿ ಠೇವಣಿ ಕೂಡ ಸೇರಿದೆ. ಹವಾಲಾ ಜಾಲದ ಅಡಿ ಮಾರನ್ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ.

ಏನೇನು ಮುಟ್ಟುಗೋಲು?
ದಯಾನಿಧಿ ಮಾರನ್‍ಗೆ ಸೇರಿದ ರು.7.47 ಕೋಟಿ ನಿಗದಿತ ಠೇವಣಿ, ಕಲಾನಿಧಿ ಮಾರನ್‍ಗೆ ಸೇರಿದ ರು.2.78 ಕೋಟಿ ಮೌಲ್ಯದ ಮ್ಯೂಚ್ಯುವಲ್ ಫಂಡ್ ಮತ್ತು ಕಲಾನಿಧಿ ಮಾರನ್ ಪತ್ನಿಯ ಹೆಸರಿನಲ್ಲಿದ್ದ ರು.1.78 ಕೋಟಿ ಠೇವಣಿ ಮತ್ತು ರು.1.78 ಕೋಟಿ ಮೌಲ್ಯದ ಮ್ಯುಚ್ಯುವಲ್ ಫಂಡ್ ಅನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಆರೋಪವೇನು?
ಮಾರನ್ 2004 ಮತ್ತು 2007ರ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದಾಗ ಏರ್‍ಸೆಲ್ ಖರೀದಿ ವಿಚಾರ ಪ್ರಸ್ತಾಪ ವಾಗಿತ್ತು. ಸಿಂಗಾಪುರ ಮೂಲದ ಏರ್‍ಸೆಲ್ ಮ್ಯಾಕ್ಸಿಸ್ ಕಂಪನಿಯ ಮಾಲೀಕ ಶಿವಶಂಕರನ್ ಮೇಲೆ ಏರ್‍ಸೆಲ್ ಅನ್ನು ತಮ್ಮ ಸಹೋದರ ಕಲಾನಿಧಿಗೇ ಮಾರು ವಂತೆ ಈ ಬಗ್ಗೆ ಒತ್ತಡ ಹೇರಲಾಗಿತ್ತು ಎಂಬ ಆರೋಪಗಳಿವೆ. ಸಿಬಿಐ ತನಿಖೆ ನಡೆಸಿದ ವೇಳೆ ಏರ್‍ಸೆಲ್ ರು.629 ಕೋಟಿಯನ್ನು ಅಕ್ರಮವಾಗಿ ಸನ್‍ನೆಟ್ ವರ್ಕ್‍ನಲ್ಲಿ ಹೂಡಿಕೆ ಮಾಡಲಾಗಿತ್ತು. ಈ ಪೈಕಿ ರು.100 ಕೋಟಿ ಮೊತ್ತವನ್ನು ಮಾರಿಷಸ್ ಮೂಲಕ ಬಂಡವಾಳ ಹೂಡಿಕೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT