ನಿಂಬೆಹಣ್ಣು 
ದೇಶ

ಒಂದು ನಿಂಬೆಹಣ್ಣಿಗೆ ಬರೀ 23,000 ರುಪಾಯಿ ಅಂತೆ..!

ಸಾಮಾನ್ಯವಾಗಿ ಒಂದು ನಿಂಬೆಹಣ್ಣಿನ ಬೆಲೆ ಎಷ್ಟಿರಬಹುದು..? 2 ರುಪಾಯಿ, 5 ರುಪಾಯಿ, 20 ರುಪಾಯಿ.. ಬೇಸಿಗೆ ಕಾಲವಾದ್ದರಿಂದ ಕೊಂಚ ಹೆಚ್ಚು ಎಂದುಕೊಂಡರೂ 25 ರುಪಾಯಿ...

ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಲ್ಲಿ ನಿಂಬೆಹಣ್ಣು ದಾಖಲೆ ಬೆಲೆಗೆ ಮಾರಾಟವಾಗುವ ಮೂಲಕ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಒಂದು ನಿಂಬೆಹಣ್ಣಿನ ಬೆಲೆ ಎಷ್ಟಿರಬಹುದು..? 2 ರುಪಾಯಿ, 5 ರುಪಾಯಿ, 20 ರುಪಾಯಿ.. ಬೇಸಿಗೆ ಕಾಲವಾದ್ದರಿಂದ ಕೊಂಚ ಹೆಚ್ಚು ಎಂದುಕೊಂಡರೂ 25 ರುಪಾಯಿ ಇರಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ತಮಿಳುನಾಡಿನಲ್ಲಿ ಚಮತ್ಕಾರಿ ನಿಂಬೆಹಣ್ಣೊಂದು ಬರೋಬ್ಬರಿ 23 ಸಾವಿರ ರುಪಾಯಿಗಳಾಗಿ ಮಾರಾಟವಾಗಿದೆ. ವಿಲ್ಲುಪುರಂನಲ್ಲಿನ ದೇವಾಲಯವೊಂದರ ಜಾತ್ರೆ ವೇಳೆ ದೇವರ ಬಳಿ ಇದ್ದ ನಿಂಬೆಹಣ್ಣನ್ನು ಹರಾಜು ಹಾಕಲಾಗಿದ್ದು, ಈ ಭಾರಿ ಹರಾಜಿನಲ್ಲಿ ನಿಂಬೆಹಣ್ಣು ದಾಖಲೆಗೆ ಬೆಲೆಗೆ ಮಾರಾಟವಾಗಿದೆ.

ವಿಲ್ಲುಪುರಂನ ಒಡ್ಡಾನೆಂಡಲ್ ಗ್ರಾಮದ ಇಡುಂಬನ್ ದೇವಾಲಯದಲ್ಲಿ ಹರಾಜು ನಡೆದಿದ್ದು, ಜಾತ್ರೆ ಸಂದರ್ಭದಲ್ಲಿ ದೇವಾಲಯದ ತ್ರಿಶೂಲಕ್ಕೆ ಚುಚ್ಚಿದ್ದ ನಿಂಬೆಹಣ್ಣನ್ನು ಹರಾಜು ಹಾಕಿದಾಗ ಅದು ಬರೊಬ್ಬರಿ 23 ಸಾವಿರ ರುಪಾಯಿಗಳಿಗೆ ಹರಾಜಾಗಿದೆ. ಪ್ರತೀ ವರ್ಷ ಇಲ್ಲಿ 11 ದಿನಗಳ ದೇವರ ಜಾತ್ರೆ ನಡೆಯುತ್ತದೆ. ಜಾತ್ರೆ ವೇಳೆ ದೇವರ ಮುಂದೆ ಇರುವ ತ್ರಿಶೂಲಕ್ಕೆ ನಿಂಬೆ ಹಣ್ಣನ್ನು ಚುಚ್ಚಲಾಗಿರುತ್ತದೆ. ಈ ನಿಂಬೆಹಣ್ಣನ್ನು ಪ್ರತಿನಿತ್ಯ ಪೂಜಿಸುವುದರಿಂದ ಇದರಲ್ಲಿ ಚಮತ್ಕಾರಿ ಶಕ್ತಿ ಇರುತ್ತದೆ. ಇದನ್ನು ಮನೆಯಲ್ಲಿಡುವುದರಿಂದ ಮನೆಯಲ್ಲಿರುವ ದುಷ್ಟಶಕ್ತಿಗಳು ನಾಶವಾಗಿ, ಒಳ್ಳೆಯದಾಗುತ್ತದೆ ಎಂದು ಜನರು ನಂಬಿದ್ದಾರೆ. ಹೀಗಾಗಿ ಪ್ರತೀವರ್ಷ ಈ ನಿಂಬೆಹಣ್ಣನ್ನು ಕೊಳ್ಳಲು ಸಾವಿರಾರು ಜನ ಹರಾಜು ಪ್ರಕ್ರಿಯೆಲ್ಲಿ ಪಾಲ್ಗೊಳ್ಳುತ್ತಾರೆ.

ಇನ್ನು ಈ ಬಾರಿಯ ಹರಾಜಿನಲ್ಲಿ ಒಟ್ಟು 11 ನಿಂಬೆಹಣ್ಣುಗಳನ್ನು ಹರಾಜು ಮಾಡಲಾಗಿದ್ದು, ದಾಖಲೆಗೆ ಬೆಲೆಗೆ ಮಾರಾಟವಾದ ನಿಂಬೆಯನ್ನು ಹೊರತು ಪಡಿಸಿ ಉಳಿದ 10 ನಿಂಬೆಹಣ್ಣುಗಳಿಂದ ದೇವಾಲಯದ ಬೊಕ್ಕಸಕ್ಕೆ ಸುಮಾರು 61, 200 ರು. ಆದಾಯ ಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT