ನಿಂಬೆಹಣ್ಣು 
ದೇಶ

ಒಂದು ನಿಂಬೆಹಣ್ಣಿಗೆ ಬರೀ 23,000 ರುಪಾಯಿ ಅಂತೆ..!

ಸಾಮಾನ್ಯವಾಗಿ ಒಂದು ನಿಂಬೆಹಣ್ಣಿನ ಬೆಲೆ ಎಷ್ಟಿರಬಹುದು..? 2 ರುಪಾಯಿ, 5 ರುಪಾಯಿ, 20 ರುಪಾಯಿ.. ಬೇಸಿಗೆ ಕಾಲವಾದ್ದರಿಂದ ಕೊಂಚ ಹೆಚ್ಚು ಎಂದುಕೊಂಡರೂ 25 ರುಪಾಯಿ...

ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಲ್ಲಿ ನಿಂಬೆಹಣ್ಣು ದಾಖಲೆ ಬೆಲೆಗೆ ಮಾರಾಟವಾಗುವ ಮೂಲಕ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಒಂದು ನಿಂಬೆಹಣ್ಣಿನ ಬೆಲೆ ಎಷ್ಟಿರಬಹುದು..? 2 ರುಪಾಯಿ, 5 ರುಪಾಯಿ, 20 ರುಪಾಯಿ.. ಬೇಸಿಗೆ ಕಾಲವಾದ್ದರಿಂದ ಕೊಂಚ ಹೆಚ್ಚು ಎಂದುಕೊಂಡರೂ 25 ರುಪಾಯಿ ಇರಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ತಮಿಳುನಾಡಿನಲ್ಲಿ ಚಮತ್ಕಾರಿ ನಿಂಬೆಹಣ್ಣೊಂದು ಬರೋಬ್ಬರಿ 23 ಸಾವಿರ ರುಪಾಯಿಗಳಾಗಿ ಮಾರಾಟವಾಗಿದೆ. ವಿಲ್ಲುಪುರಂನಲ್ಲಿನ ದೇವಾಲಯವೊಂದರ ಜಾತ್ರೆ ವೇಳೆ ದೇವರ ಬಳಿ ಇದ್ದ ನಿಂಬೆಹಣ್ಣನ್ನು ಹರಾಜು ಹಾಕಲಾಗಿದ್ದು, ಈ ಭಾರಿ ಹರಾಜಿನಲ್ಲಿ ನಿಂಬೆಹಣ್ಣು ದಾಖಲೆಗೆ ಬೆಲೆಗೆ ಮಾರಾಟವಾಗಿದೆ.

ವಿಲ್ಲುಪುರಂನ ಒಡ್ಡಾನೆಂಡಲ್ ಗ್ರಾಮದ ಇಡುಂಬನ್ ದೇವಾಲಯದಲ್ಲಿ ಹರಾಜು ನಡೆದಿದ್ದು, ಜಾತ್ರೆ ಸಂದರ್ಭದಲ್ಲಿ ದೇವಾಲಯದ ತ್ರಿಶೂಲಕ್ಕೆ ಚುಚ್ಚಿದ್ದ ನಿಂಬೆಹಣ್ಣನ್ನು ಹರಾಜು ಹಾಕಿದಾಗ ಅದು ಬರೊಬ್ಬರಿ 23 ಸಾವಿರ ರುಪಾಯಿಗಳಿಗೆ ಹರಾಜಾಗಿದೆ. ಪ್ರತೀ ವರ್ಷ ಇಲ್ಲಿ 11 ದಿನಗಳ ದೇವರ ಜಾತ್ರೆ ನಡೆಯುತ್ತದೆ. ಜಾತ್ರೆ ವೇಳೆ ದೇವರ ಮುಂದೆ ಇರುವ ತ್ರಿಶೂಲಕ್ಕೆ ನಿಂಬೆ ಹಣ್ಣನ್ನು ಚುಚ್ಚಲಾಗಿರುತ್ತದೆ. ಈ ನಿಂಬೆಹಣ್ಣನ್ನು ಪ್ರತಿನಿತ್ಯ ಪೂಜಿಸುವುದರಿಂದ ಇದರಲ್ಲಿ ಚಮತ್ಕಾರಿ ಶಕ್ತಿ ಇರುತ್ತದೆ. ಇದನ್ನು ಮನೆಯಲ್ಲಿಡುವುದರಿಂದ ಮನೆಯಲ್ಲಿರುವ ದುಷ್ಟಶಕ್ತಿಗಳು ನಾಶವಾಗಿ, ಒಳ್ಳೆಯದಾಗುತ್ತದೆ ಎಂದು ಜನರು ನಂಬಿದ್ದಾರೆ. ಹೀಗಾಗಿ ಪ್ರತೀವರ್ಷ ಈ ನಿಂಬೆಹಣ್ಣನ್ನು ಕೊಳ್ಳಲು ಸಾವಿರಾರು ಜನ ಹರಾಜು ಪ್ರಕ್ರಿಯೆಲ್ಲಿ ಪಾಲ್ಗೊಳ್ಳುತ್ತಾರೆ.

ಇನ್ನು ಈ ಬಾರಿಯ ಹರಾಜಿನಲ್ಲಿ ಒಟ್ಟು 11 ನಿಂಬೆಹಣ್ಣುಗಳನ್ನು ಹರಾಜು ಮಾಡಲಾಗಿದ್ದು, ದಾಖಲೆಗೆ ಬೆಲೆಗೆ ಮಾರಾಟವಾದ ನಿಂಬೆಯನ್ನು ಹೊರತು ಪಡಿಸಿ ಉಳಿದ 10 ನಿಂಬೆಹಣ್ಣುಗಳಿಂದ ದೇವಾಲಯದ ಬೊಕ್ಕಸಕ್ಕೆ ಸುಮಾರು 61, 200 ರು. ಆದಾಯ ಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT