ದೇಶ

3ನೇ ಕ್ಲಾಸ್ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಪ್ರಿನ್ಸಿಪಲ್

Vishwanath S

ಬರಬಂಕಿ(ಉತ್ತರಪ್ರದೇಶ): ಪೆನ್ಸಿಲ್ ಮತ್ತು ರಬ್ಬರ್ ಕದ್ದ ಎಂಬ ಕಾರಣಕ್ಕೆ ಮೂರನೇ ತರಗತಿ ವಿದ್ಯಾರ್ಥಿಯನ್ನು  ಶಾಲೆಯ ಪ್ರಿನ್ಸಿಪಲ್ ತೀರ್ವವಾಗಿ ಥಳಿಸಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಉತ್ತರಪ್ರದೇಶ ಬರಬಂಕಿಯಲ್ಲಿ 11 ವರ್ಷದ ವಿದ್ಯಾರ್ಥಿಯನ್ನು ಥಳಿಸಿದ ಆರೋಪದ ಮೇಲೆ ಶಾಲಾ ಪ್ರಿನ್ಸಿಪಲ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಪೆನ್ಸಿಲ್ ಮತ್ತು ರಬ್ಬರ್ ರನ್ನು ಕದ್ದಿದ್ದಾನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಿನ್ಸಿಪಲ್  ವಿದ್ಯಾರ್ಥಿಗೆ ಸ್ಕೇಲ್ ನಿಂದ ತೀವ್ರವಾಗಿ ಥಳಿಸಿದ್ದರು. ನಂತರ ಮನೆಗೆ ಬಂದ ವಿದ್ಯಾರ್ಥಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ರಕ್ತ ವಾಂತಿ ಮಾಡಿಕೊಂಡಿದ್ದಾನೆ. ಆ ಕೂಡಲೇ ವಿದ್ಯಾರ್ಥಿಯನ್ನು ಪೋಷಕರು ಪಥೇಪುರ್ ಆಸ್ಪತ್ರೆಗೆ ಸೇರಿದ್ದಾರೆ. ಆದರೆ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ.

SCROLL FOR NEXT