ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಭಾರತದ ಆರ್ಥಿಕ ಅಭಿವೃದ್ಧಿಗೆ ಸಣ್ಣ ಉದ್ಯಮವೇ ಬೆನ್ನೆಲುಬು: ಮೋದಿ

ತರಕಾರಿ ಮಾರಾಟಗಾರ, ಹಾಲುಮಾರಾಟಗಾರ, ನೇಕಾರರು, ಕುಶಲಕರ್ಮಿಗಳು ಪತ್ರಿಕೆ ಮಾರಾಟಗಾರರು ಮತ್ತು ಇತರೆ ಸಣ್ಣ ಉದ್ದಿಮೆಗಳೇ ಭಾರತದ ಆರ್ಥಿಕತೆಗೆ ಮುಖ್ಯ ಬೆನ್ನೆಲುಬಾಗಿದೆ ಎಂದು ಪ್ರಧಾನಮಂತ್ರಿ...

ನವದೆಹಲಿ: ತರಕಾರಿ ಮಾರಾಟಗಾರ, ಹಾಲುಮಾರಾಟಗಾರ, ನೇಕಾರರು, ಕುಶಲಕರ್ಮಿಗಳು ಪತ್ರಿಕೆ ಮಾರಾಟಗಾರರು ಮತ್ತು ಇತರೆ ಸಣ್ಣ ಉದ್ದಿಮೆಗಳೇ ಭಾರತದ ಆರ್ಥಿಕತೆಗೆ ಮುಖ್ಯ ಬೆನ್ನೆಲುಬಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸಣ್ಣ ಉದ್ದಿಮೆ ಕುರಿತಂತೆ ಮಾ.31ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರಬರೆದಿದ್ದರು. ಆ ಪತ್ರ ಇಂದು ಬಿಡುಗಡೆಗೊಂಡಿದ್ದು, ಪತ್ರದಲ್ಲಿ ಸಣ್ಣ ಉದ್ಯಮಕ್ಕೆ ಉತ್ತೇಜನ ನೀಡುವ ಮಾತುಗಳನ್ನು ಮೋದಿ ಹೇಳಿದ್ದು, ಸಣ್ಣ ಉದ್ದಿಮೆಗಾರರೇ ನಮ್ಮ ದೇಶದ ನಿಜವಾದ ಬೆನ್ನುಲುಬು. ಭಾರತ ಆರ್ಥಿಕತೆ ಅಭಿವೃದ್ಧಿಗೆ ಅವರು ನೀಡಿರುವ ಶಕ್ತಿ ಅಪಾರವಾಗಿರುವಂತಹದ್ದು. ಸಣ್ಣ ಉದ್ದಿಮೆಗಾರರ ಕೈ ಗಟ್ಟಿಯಾದರೆ ದೇಶವನ್ನು ಎತ್ತರಕ್ಕೆ ಹೋಗುವುದರಲ್ಲಿ ನನಗೆ ಸಂಶಯವೇ ಇಲ್ಲ. ನಿಮ್ಮ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವವರು ಬಹಳ ಸುಲಭವಾಗಿ ಪ್ರಾರಂಭಿಸಬಹುದು. ನಿಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗಳಿಗಾಗಿ, ಸರಕು ಸಾಮಾನುಗಳಿಗಾಗಿ ಸರ್ಕಾರದಿಂದ ಸಾಲ ತೆಗೆದುಕೊಂಡು ಮುಂದುವರೆಸುವ ಅವಕಾಶವನ್ನು ಸರ್ಕಾರ ನೀಡಿದೆ. ಈ ಸೌಲಭ್ಯದಲ್ಲಿ ಯಾವುದೇ ಅಧಿಕಾರಿಗಳ ಕಿರುಕುಳವಾಗಲಿ, ತೊಂದರೆಯಾಗಲಿ ಎದುರಾಗುವುದಿಲ್ಲವಾದ್ದರಿಂದ ನಿರ್ಭಯದಿಂದ ನಿಮ್ಮ ಉದ್ದಿಮೆಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಮುಂದಿನ ಜೀವನಕ್ಕಾಗಿ ನೀವು ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಗಟ್ಟಿಮಾಡಿಕೊಳ್ಳಬೇಕು. ಇದೊಂದು ಸಾಧ್ಯವಾದರೆ ದೇಶವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT