ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಭಾರತದ ಆರ್ಥಿಕ ಅಭಿವೃದ್ಧಿಗೆ ಸಣ್ಣ ಉದ್ಯಮವೇ ಬೆನ್ನೆಲುಬು: ಮೋದಿ

ತರಕಾರಿ ಮಾರಾಟಗಾರ, ಹಾಲುಮಾರಾಟಗಾರ, ನೇಕಾರರು, ಕುಶಲಕರ್ಮಿಗಳು ಪತ್ರಿಕೆ ಮಾರಾಟಗಾರರು ಮತ್ತು ಇತರೆ ಸಣ್ಣ ಉದ್ದಿಮೆಗಳೇ ಭಾರತದ ಆರ್ಥಿಕತೆಗೆ ಮುಖ್ಯ ಬೆನ್ನೆಲುಬಾಗಿದೆ ಎಂದು ಪ್ರಧಾನಮಂತ್ರಿ...

ನವದೆಹಲಿ: ತರಕಾರಿ ಮಾರಾಟಗಾರ, ಹಾಲುಮಾರಾಟಗಾರ, ನೇಕಾರರು, ಕುಶಲಕರ್ಮಿಗಳು ಪತ್ರಿಕೆ ಮಾರಾಟಗಾರರು ಮತ್ತು ಇತರೆ ಸಣ್ಣ ಉದ್ದಿಮೆಗಳೇ ಭಾರತದ ಆರ್ಥಿಕತೆಗೆ ಮುಖ್ಯ ಬೆನ್ನೆಲುಬಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸಣ್ಣ ಉದ್ದಿಮೆ ಕುರಿತಂತೆ ಮಾ.31ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರಬರೆದಿದ್ದರು. ಆ ಪತ್ರ ಇಂದು ಬಿಡುಗಡೆಗೊಂಡಿದ್ದು, ಪತ್ರದಲ್ಲಿ ಸಣ್ಣ ಉದ್ಯಮಕ್ಕೆ ಉತ್ತೇಜನ ನೀಡುವ ಮಾತುಗಳನ್ನು ಮೋದಿ ಹೇಳಿದ್ದು, ಸಣ್ಣ ಉದ್ದಿಮೆಗಾರರೇ ನಮ್ಮ ದೇಶದ ನಿಜವಾದ ಬೆನ್ನುಲುಬು. ಭಾರತ ಆರ್ಥಿಕತೆ ಅಭಿವೃದ್ಧಿಗೆ ಅವರು ನೀಡಿರುವ ಶಕ್ತಿ ಅಪಾರವಾಗಿರುವಂತಹದ್ದು. ಸಣ್ಣ ಉದ್ದಿಮೆಗಾರರ ಕೈ ಗಟ್ಟಿಯಾದರೆ ದೇಶವನ್ನು ಎತ್ತರಕ್ಕೆ ಹೋಗುವುದರಲ್ಲಿ ನನಗೆ ಸಂಶಯವೇ ಇಲ್ಲ. ನಿಮ್ಮ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವವರು ಬಹಳ ಸುಲಭವಾಗಿ ಪ್ರಾರಂಭಿಸಬಹುದು. ನಿಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗಳಿಗಾಗಿ, ಸರಕು ಸಾಮಾನುಗಳಿಗಾಗಿ ಸರ್ಕಾರದಿಂದ ಸಾಲ ತೆಗೆದುಕೊಂಡು ಮುಂದುವರೆಸುವ ಅವಕಾಶವನ್ನು ಸರ್ಕಾರ ನೀಡಿದೆ. ಈ ಸೌಲಭ್ಯದಲ್ಲಿ ಯಾವುದೇ ಅಧಿಕಾರಿಗಳ ಕಿರುಕುಳವಾಗಲಿ, ತೊಂದರೆಯಾಗಲಿ ಎದುರಾಗುವುದಿಲ್ಲವಾದ್ದರಿಂದ ನಿರ್ಭಯದಿಂದ ನಿಮ್ಮ ಉದ್ದಿಮೆಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಮುಂದಿನ ಜೀವನಕ್ಕಾಗಿ ನೀವು ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಗಟ್ಟಿಮಾಡಿಕೊಳ್ಳಬೇಕು. ಇದೊಂದು ಸಾಧ್ಯವಾದರೆ ದೇಶವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ, ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video