ನರೇಂದ್ರ ಮೋದಿ ಫ್ರಾನ್ಸಿಸ್ ಹಾಲೆಂಡ್ ಜತೆಗೆ (ಕೃಪೆ : ರಾಯಿಟರ್ಸ್ ) 
ದೇಶ

ರಫೇಲ್ ವಿಮಾನಗಳಿಗೆ ಬೆಂಗಳೂರು ಬಂಧ

ಅಂತೂ ಹಾರಿ ಬರಲಿವೆ 36 ರಫೇ ಲ್ ಯುದ್ಧ ವಿಮಾನಗಳು. ಹೀಗಾಗಿ, ಭಾರತೀಯ ವಾಯುಪಡೆಗೆ...

ಪ್ಯಾರಿಸ್: ಅಂತೂ ಹಾರಿ ಬರಲಿವೆ 36 ರಫೇ ಲ್ ಯುದ್ಧ  ವಿಮಾನಗಳು. ಹೀಗಾಗಿ, ಭಾರತೀಯ ವಾಯುಪಡೆಗೆ ಅತ್ಯಂತ ತುರ್ತಾಗಿ ಬೇಕಾಗಿರುವಅತ್ಯಾಧುನಿಕ ವಿಮಾನಗಳ  ಕೊರತೆ ಶೀಘ್ರದಲ್ಲೇ ನೀಗಲಿದೆ. 2012ರಿಂದ ಚರ್ಚೆಯ ಹಂತದಲ್ಲಿದ್ದ ವಿಮಾನಗಳ ಖರೀದಿ ಪ್ರಕ್ರಿಯೆಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮುಕ್ತಾಯ ಹಾಕಿದ್ದಾರೆ. ಹಾರುವ ಹಂತದಲ್ಲಿರುವ ರು. 74.70 ಕೋಟಿ ಮೌ ಲ್ಯದ 36 ವಿಮಾನಗಳನ್ನು ತಕ್ಷಣವೇ ಖರೀದಿಸಲಾಗುತ್ತದೆ. ಉಳಿದ 108 ವಿಮಾನಗಳನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್‍ನಲ್ಲಿ ಜೋಡಣೆ ಮಾಡಲಾಗುತ್ತದೆ. ಫ್ರಾನ್ಸ್  ಅಧ್ಯಕ್ಷ  ಫ್ರಾನ್ಸಿಸ್ ಹಾಲೆಂಡ್ ಜತೆಗೆ ಶುಕ್ರವಾರ ಪ್ಯಾರಿಸ್‍ನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಈ ಮಾಹಿತಿ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ, ಪ್ರಧಾನಿ ಮೋದಿ ಪ್ರತಿಪಾದಿಸುವ ಮೇಕ್ ಇನ್ ಇಂಡಿಯಾ ಯೋ ಜನೆಯಡಿ ಒಟ್ಟು 17 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಪೈಕಿ ನಾಗರಿಕ ಪರಮಾಣು ಒಪ್ಪಂದ, ಭಾರತೀಯ ರೈಲ್ವೆ ಮೇಲ್ದರ್ಜೆಗೆ ಏರಿಸುವಿಕೆ ಸೇರಿದೆ. ಇದಲ್ಲದೆ ತಾಂತ್ರಿಕ ಕ್ಷೇತ್ರದಲ್ಲಿ ರು. 13, 200
ಕೋಟಿ ಬಂಡವಾಳ ಹೂಡಲು ಅಲ್ಲಿನ ಸರ್ಕಾರ ಉತ್ಸಾಹ ತೋರಿದೆ.  ಫ್ರಾನ್ಸ್  ಬೆಂಬಲ
ಇದರ ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಉಮೇದುವಾರಿಕೆಗೆ ಫ್ರಾನ್ಸ್  ಬೆಂಬಲ ನೀಡಿದೆ.
ಎರಡೂ ರಾಷ್ಟ್ರಗಳು ವಿದ್ಯಾಭ್ಯಾಸ, ಆರ್ಥಿಕ, ರಕ್ಷಣೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಪ್ಪಂದ ಮಾ ಡಿಕೊಂಡಿವೆ.



ಪ್ರಧಾನಿ ಹೇಳಿದ್ದು

  1.  ಮಹಾರಾಷ್ಟ್ರದ ಜೈತಾಪುರದಲ್ಲಿ ಸ್ಥಾಪಿಸಲಾಗುವ ಅಣು ಸ್ಥಾವರಕ್ಕೆ ಫ್ರಾನ್ಸ್ ನೆರವು ನೀಡಲಿದೆ. ಫ್ರಾ ನ್ಸ್ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಗೆ  ಪ್ರೋತ್ಸಾಹ
  2. ನೀಡಲಿದೆ. ಅದಕ್ಕಾಗಿ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ.
  3.  ಮೇಕ್ ಇನ್ ಇಂಡಿಯಾ  ಯೋಜನೆಗೆ ಸಹಕಾರ ನೀಡುವುದಾಗಿ ಅಧ್ಯಕ್ಷ ಹಾಲೆಂಡ್ ಭರವಸೆ ನೀಡಿದ್ದಾರೆ.
  4. ಫ್ರಾನ್ಸ್ ಮತ್ತು ಭಾರತ ವ್ಯೂಹಾತ್ಮಕ ಸಂಬಂಧದ ಕ್ಷೇತ್ರಗಳಲ್ಲಿ ಪರಸ್ಪರ ಒಪ್ಪಂದ ಮಾ ಡಿಕೊಂಡಿದ್ದೇವೆ. ಇದರಿಂದ ಇಬ್ಬರಿಗೂ ಅನುಕೂಲವಾಗಲಿದೆ.
  5. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಮಗೆ ಫ್ರಾನ್ಸ್ ನೆರವು ನೀಡಲಿದೆ. ನಾಗ್ಪುರ,
  6. ಪುದು ಚೇರಿಗಳಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಫ್ರಾನ್ಸ್ ಸರ್ಕಾರ ನೆರವು ಕೊಡಲಿದೆ.


ಹಾಲೆಂಡ್ ಹೇಳಿದ್ದು
  •  ವಿಶ್ವದಲ್ಲಿ ಶಾಂತಿಯುತ ವಾತಾವರಣ, ಪರಿಸರ ನಿರ್ಮಿಸುವ ಹೊಣೆ ನಮ್ಮ ಮೇಲೆ.
  •  ಪ್ರಧಾನಿ ಜತೆಗೆ ಬಾಂಧವ್ಯ ದೃಢಪಡಿಸುವ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ.
  • ಫ್ರಾನ್ಸ್ ಗೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ 48 ಗಂಟೆಗಳಲ್ಲಿ ವೀಸಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT