ದೆಹಲಿಯಲ್ಲಿ ಸಭೆ ಸೇರಿದ್ದ ಜನತಾ ಪರಿವಾರದ ನಾಯಕರು (ಸಂಗ್ರಹ ಚಿತ್ರ) 
ದೇಶ

ಒಂದಾದ ಜನತಾ ಪರಿವಾರದ ಹೊಸ ಹೆಸರು 'ಸಮಾಜವಾದಿ ಜನತಾ ಪಕ್ಷ'

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮೂಗುದಾರ ಹಾಕಲು ಮುಂದಾಗಿ ಜನತಾ ಪರಿವಾರ ಕಡೆಗೂ ಒಂದಾಗಿದ್ದು, ಆರು ಪಕ್ಷಗಳ ವಿಲೀನದಿಂದ ಹುಟ್ಟಿಕೊಂಡ....

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮೂಗುದಾರ ಹಾಕಲು ಮುಂದಾಗಿ ಜನತಾ ಪರಿವಾರ ಕಡೆಗೂ ಒಂದಾಗಿದ್ದು, ಆರು ಪಕ್ಷಗಳ ವಿಲೀನದಿಂದ ಹುಟ್ಟಿಕೊಂಡ ಹೊಸ ಪಕ್ಷಕ್ಕೆ 'ಸಮಾಜವಾದಿ ಜನತಾ ಪಕ್ಷ' ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ, ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವಗೌಡ ಅವರ ಜೆಡಿಎಸ್ ಹಾಗೂ ಓಂ ಪ್ರಕಾಶ್ ಚೌತಾಲ ಅವರ ಇಂಡಿಯನ್ ನ್ಯಾಷಿನಲ್ ಲೋಕದಳ(ಐಎನ್‌ಎಲ್‌ಡಿ) ಸೇರಿದಂತೆ ಆರು ಪಕ್ಷಗಳನ್ನೊಳಗೊಂಡ ಜನತಾ ಪರಿವಾರಕ್ಕೆ ಸಮಾಜವಾದಿ ಜನತಾ ಪಕ್ಷ ಎಂದು ನಾಮಕರಣ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬುಧವಾರ ವರದಿಗಳು ತಿಳಿಸಿವೆ.

ಈ ನೂತನ ತೃತೀಯ ರಂಗಕ್ಕೆ ಮುಲಾಯಂ ಸಿಂಗ್ ಯಾದವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಮತ್ತು ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್‌ನ್ನೇ ಸಮಾಜವಾದಿ ಜನತಾ ಪಕ್ಷದ ಚಿಹ್ನೆಯನ್ನಾಗಿ ಸ್ವೀಕರಿಸಲು ಆರು ಪಕ್ಷಗಳು ನಿರ್ಧರಿಸಿವೆ.

ವರದಿಗಳ ಪ್ರಕಾರ, ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಈ ನೂತನ ರಾಜಕೀಯ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು ಲೋಕಸಭೆ ತೃತೀಯ ರಂಗವನ್ನು ಮುನ್ನಡೆಸಲಿದ್ದು, ರಾಜ್ಯಸಭೆಯಲ್ಲಿ ಶರದ್ ಯಾದವ್ ಅವರು ನೂತನ ಪಕ್ಷದ ಸಾರಥಿಯಾಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT