ತಿರುವನಂತಪುರಂ: ಕೇರಳ ಸರ್ಕಾರ ನೀಡುವ ಹರಿವರಾಸನಮ್ ಪ್ರಶಸ್ತಿಗೆ ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಆಯ್ಕೆಯಾಗಿದ್ದಾರೆ.
ಕಳೆದ 5 ದಶಕಗಳಿಂದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಬಗ್ಗೆ ವಿವಿಧ ಭಾಷೆಗಳಲ್ಲಿ ಹಾಡಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿ ಒಲಿದುಬಂದಿದೆ.
ಕೆ.ಜಯ ಕುಮಾರ್, ಆರೋಗ್ಯ ಮತ್ತು ದೇವಸ್ವಂ ಸಚಿವ ವಿ.ಎಸ್ ಶಿವಕುಮಾರ್ ಅವರಿದ್ದ ಶಬರಿ ಮಲೆಯ ಉನ್ನತ ಸಮಿತಿಯು ಎಸ್ ಪಿಬಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.