ಭೂಕಂಪ ಪೀಡಿತ ನೇಪಾಳಕ್ಕ ಆಹಾರ ಪೂರೈಕೆ ಮಾಡುತ್ತಿರುವ ಪಾಕಿಸ್ತಾನದ ಸೇನೆ (ಫೋಟೋ ಕೃಪೆ: ಎಎಫ್ ಪಿ) 
ದೇಶ

ನೇಪಾಳ ಸಂತ್ರಸ್ತರಿಗೆ ಗೋಮಾಂಸ ಆಹಾರ ಪೂರೈಸಿಲ್ಲ ಎಂದ ಪಾಕಿಸ್ತಾನ

ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳದ ಸಂತ್ರಸ್ತರಿಗೆ ಗೋಮಾಂಸ ಆಹಾರವನ್ನು ಪಾಕಿಸ್ತಾನ ನೀಡಿದೆ ಎಂಬ ಆರೋಪವನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ...

ಕಠ್ಮಂಡು: ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳದ ಸಂತ್ರಸ್ತರಿಗೆ ಗೋಮಾಂಸ ಆಹಾರವನ್ನು ಪಾಕಿಸ್ತಾನ ನೀಡಿದೆ ಎಂಬ ಆರೋಪವನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ.

ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತಲೇ ಕರೆಯಲ್ಪಡುವ ನೇಪಾಳದಲ್ಲಿ ಗೋಮಾಂಸ ನಿಷೇಧವಿದ್ದು, ಅಲ್ಲಿನ ಜನರು ಗೋಮಾಂಸವನ್ನು ತಿನ್ನುವುದಿಲ್ಲ. ಗೋವನ್ನು ಇಲ್ಲಿ ದೈವ ಸಂಕೇತವಾಗಿ ಕಾಣುತ್ತಾರೆ. ಪ್ರಬಲ ಭೂಕಂಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ನೇಪಾಳಿಗರಿಗೆ ಪಾಕಿಸ್ತಾನ ನೆರವು ನೀಡುವ ನೆಪದಲ್ಲಿ ಗೋಮಾಂಸದ ಆಹಾರವನ್ನು ರವಾನೆ ಮಾಡಿದೆ. ಆದರೆ ಇದನ್ನು ಕಂಡ ನೇಪಾಳಿಗರು ಆ ಆಹಾರವನ್ನು ಮುಟ್ಟಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿತ್ತು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ವಕ್ತಾರೆ ತಸ್ನೀಮ್ ಅಸ್ಲಾಂ ಅವರು, ನೇಪಾಳಕ್ಕೆ ಗೋಮಾಂಸ ಆಹಾರದ ಪೊಟ್ಟಣಗಳನ್ನು ನೀಡಿಯೇ ಇಲ್ಲ. ನೇಪಾಳಕ್ಕೆ ಪೂರೈಸಿದ ಆಹಾರದಲ್ಲಿ ಗೋಮಾಂಸದ ಯಾವುದೇ ಅಂಶಗಳಿರಲಿಲ್ಲ. ಸಂತ್ರಸ್ಥರಿಗೆ ಆಹಾರ ನೀಡಿದಾಗ ಆಹಾರ ಚೆನ್ನಾಗಿದೆ ಎಂದು ಇನ್ನು ಸ್ವಲ್ಪ ನೀಡುವಂತೆ ಅಲ್ಲಿನ ಸಂತ್ರಸ್ಥರು ಕೇಳಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರ ವಿರುದ್ಧ 'ಪ್ರಹಾರ್' ನಿರ್ಣಾಯಕ: ಕೇಂದ್ರದಿಂದ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ!

ವಿಬಿ ಜಿ ರಾಮ್ ಜಿಯಿಂದ 16.12 ಕೋಟಿ ಜನ ನಿರುದ್ಯೋಗಿಗಳು; ಮನರೇಗಾ ಮರುಜಾರಿಗೊಳಿಸುವವರೆಗೆ ಹೋರಾಟ

ಉಗ್ರರ ವಿರುದ್ಧ ಪಾಕ್ ಕಾರ್ಯಾಚರಣೆ: ಆತ್ಮಾಹುತಿ ಬಾಂಬರ್ ಸೇರಿ ಐವರು ಭಯೋತ್ಪಾದಕರ ಹತ್ಯೆ

ಸಾಕು ಬಿಟ್ಟುಕೊಡಿ... INDIA ಕೂಟದ ಮುಖ್ಯಸ್ಥರನ್ನಾಗಿ ಮಮತಾ ಬ್ಯಾನರ್ಜಿ ಆಯ್ಕೆ ಮಾಡಿ: ರಾಹುಲ್ ಗಾಂಧಿಗೆ ಮಣಿಶಂಕರ್ ಅಯ್ಯರ್ ಸಲಹೆ

Video; ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ: ಯತ್ನಾಳ್​ ವಿವಾದಾತ್ಮಕ ಹೇಳಿಕೆ

SCROLL FOR NEXT