ಚಾರ್ ಮಿನಾರ್ 
ದೇಶ

ಚಾರ್ ಮಿನಾರ್ ನೆಲಸಮಗೊಳಿಸಲು ತೆಲಂಗಾಣ ಸರ್ಕಾರದ ಚಿಂತನೆ?

ತೆಲಂಗಾಣ ಸರ್ಕಾರ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ ಅನ್ನು ನೆಲಸಮಗೊಳಿಸಲು ಚಿಂತಿಸುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ...

ಹೈದರಾಬಾದ್: ತೆಲಂಗಾಣ ಸರ್ಕಾರ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ ಅನ್ನು ನೆಲಸಮಗೊಳಿಸಲು ಚಿಂತಿಸುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.  

16 ನೇ ಶತಮಾನದ ಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲೊಂದಾದ ಚಾರ್ ಮಿನಾರ್ ಹಳೇಯ ಹೈದರಾಬಾದ್ ಪ್ರಮುಖ ಪ್ರವಾಸಿ ಸ್ಥಳ. ಇಂಥ ಇತಿಹಾಸ ಹೊಂದಿರುನ ಚಾರ್ ಮಿನಾರ್ ಗೋಪುರವನ್ನು ತುಂಬಾ ಹಳೇಯ ಕಟ್ಟಡ ಎಂಬ ನೆಪವೊಡ್ಡಿ ಕೆಡವಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಆದರೆ ತೆಲಂಗಾಣ ಉಪಮುಖ್ಯಮಂತ್ರಿ ಮೊಹಮದ್ ಅಲಿ ಹೇಳುವ ಪ್ರಕಾರ ಹೈದರಾಬಾದ್ ನಲ್ಲಿ ಹಲವು ಪುರಾತನ ಕಟ್ಟಡ ಹಾಗೂ ಸ್ಮಾರಕಗಳಿಗೆ. ಅವುಗಳಲ್ಲಿ ಕೆಲವೊಂದು ಶಿಥಿಲಾವಸ್ಥೆ ತಲುಪಿವೆ. ಅಂಥಹ ಪಟ್ಟಿಯಲ್ಲಿ ಚಾರ್ ಮಿನಾರ್ ಕೂಡ ಸೇರಿದೆ. ಒಂದು ವೇಳೆ ಯಾವುದೋ ಸಮಯದಲ್ಲಿ ತುಂಬಾ ಹಳೇಯದಾಗಿರುವ ಚಾರ್ ಮಿನಾರ್ ಕುಸಿದು ಬಿದ್ದರೆ ಅಪಾರ ಪ್ರಮಾಣದ ಸಾವು ನೋವುಗಳಾಗುವ ಸಂಭವವಿದೆ. ಚಾರ್ ಮಿನಾರ್ ಶಿಥಿಲಾವಸ್ಥೆ ತಲುಪಿದರೆ ಮುಂದಿನ  ದಿನಗಳಲ್ಲಿ ಚಾರ್ ಮಿನಾರ್ ನೆಲಸಮ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನು ಹಳೇಯ ಹೈದರಾಬಾದ್ ನಲ್ಲಿರುವ 90 ವರ್ಷ ಹಳೇಯದಾದ ಒಸ್ಮಾನಿಯಾ ಜನರಲ್ ಆಸ್ಪತ್ರೆಯನ್ನು ನೆಲಸಮಗೊಳಿಸಿ ಮತ್ತೆ ಹೊಸದಾಗಿ  ಆಸ್ಪತ್ರೆ ನಿರ್ಮಾಣ ಮಾಡಲು ಯೋಜನೆ ರೂಪುಗೊಂಡಿದೆ. ಹೊಸ ಆಸ್ಪತ್ರೆ ಈಗಿರುವ ಆಸ್ಪತ್ರೆಯ 10 ಪಟ್ಟು ದೊಡ್ಡದಾಗಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

ಒಸ್ಮಾನಿಯಾ ಜನರಲ್ ಆಸ್ಪತ್ರೆ ಪುನರ್ ನಿರ್ಮಾಣ ಹಾಗೂ ಚಾರ್ ಮಿನಾರ್ ಧ್ವಂಸ ವಿಷಯ ಸಂಬಂಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿವೆ. ಸಾಂಸ್ಕೃತಿಕ ಪರಂಪರೆಯಾಗಿರು ಚಾರ್ ಮಿನಾರ್ ನೆಲಸಮಗೊಳಿಸಬಾರದು ಎಂದು ಆಗ್ರಹಿಸಿವೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಮಧ್ಯಾಹ್ನ 2.30ಕ್ಕೆ ರಾಜೀನಾಮೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT