ಪ್ರೇಮಿಗಳ ನಗ್ನಗೊಳಿಸಿ ಗ್ರಾಮದಲ್ಲಿ ಪರೇಡ್ ಮಾಡಿಸಿದ ಗ್ರಾಮಸ್ಥರು (ಸಾಂದರ್ಭಿಕ ಚಿತ್ರ) 
ದೇಶ

ಪ್ರೇಮಿಗಳ ತಲೆಬೋಳಿಸಿ, ನಗ್ನಗೊಳಿಸಿ ಪರೇಡ್ ಮಾಡಿಸಿದ ಗ್ರಾಮಸ್ಥರು

ಪ್ರೇಮಿಗಳೆಂದರೆ ಕ್ರೂರವಾಗಿ ನಡೆದುಕೊಳ್ಳುವುದು ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಹೊಗಿದೆ. ಇದಕ್ಕೆ ಉದಾಹರಣೆಯಾಗಿ ವಾರಣಾಸಿ ಘಟನೆಯೊಂದು ನಡೆದಿದ್ದು, ಇಲ್ಲಿನ ಗ್ರಾಮಸ್ಥರು ಪ್ರೇಮಿಗಳಿಬ್ಬರಿಗೆ ತಲೆಬೋಳಿಸಿದ್ದಲ್ಲದೇ ಅವರಿಬ್ಬರನ್ನೂ...

ಲಖನೌ: ಪ್ರೇಮಿಗಳೆಂದರೆ ಕ್ರೂರವಾಗಿ ನಡೆದುಕೊಳ್ಳುವುದು ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಹೊಗಿದೆ. ಇದಕ್ಕೆ ಉದಾಹರಣೆಯಾಗಿ ವಾರಣಾಸಿ ಘಟನೆಯೊಂದು ನಡೆದಿದ್ದು, ಇಲ್ಲಿನ ಗ್ರಾಮಸ್ಥರು ಪ್ರೇಮಿಗಳಿಬ್ಬರಿಗೆ ತಲೆಬೋಳಿಸಿದ್ದಲ್ಲದೇ ಅವರಿಬ್ಬರನ್ನೂ ನಗ್ನಗೊಳಿಸಿ ಗ್ರಾಮದ ಸುತ್ತ ಪರೇಡ್ ಮಾಡಿರುವ ಘಟನೆ ಬಾರ್ಗವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಪ್ರೇಮಿಗಳಿಬ್ಬರು ಹಲವು ವರ್ಷಗಳಿಂದ ಪ್ರೀತಿಸಿದ್ದರು. ಆದರೆ, ಇವರಿಬ್ಬರ ಮದುವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಊರು ಬಿಟ್ಟು ಹೋಗಿ ಮದುವೆಯಾದ ಪ್ರೇಮಿಗಳಿಬ್ಬರೂ ನಾಲ್ಕು ದಿನಗಳ ಹಿಂದಷ್ಟೇ ಊರಿಗೆ ಮರಳಿಬಂದಿದ್ದರು. ಈ ಇಬ್ಬರನ್ನು ಕಂಡ ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರಿಗೂ ಬಲವಂತದಿಂದ ತಲೆಬೋಳಿಸಿ, ನಗ್ನಗೊಳಿಸಿ ನಂತರ ಊರಿನ ಸುತ್ತ ಪರೇಡ್ ಮಾಡಿಸಿದ್ದಾರೆ.

ತಮ್ಮ ಮಗ ನಗ್ನವಾಗಿ ಊರಿನ ಸುತ್ತ ಓಡಾಡುತ್ತಿರುವುದನ್ನು ಕಂಡ ಯುವಕನ ತಂದೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಆದರೆ, ರಕ್ಷಣೆ ಮಾಡಲು ಮುಂದಾಗದ ಪೋಲೀಸರು ಆತನನ್ನು ಲೇವಡಿ ಮಾಡಲು ಪ್ರಾರಂಭಿಸಿದ್ದು, ತಮ್ಮ ನಾಯಕ ಮೋದಿಯವರ ಬಳಿ ಹೋಗಿ ದೂರು ನೀಡುವಂತೆ ಹೇಳಿದ್ದಾರೆ.

ಗ್ರಾಮಸ್ಥರ ಹಲ್ಲೆಗೊಳಗಾದ ಯುವಕ ಘಟನೆ ಕುರಿತಂತೆ ಮಾತನಾಡಿದ್ದು, ಗ್ರಾಮಸ್ಥರು ನಮ್ಮಿಬ್ಬರ ತಲೆ ಬೋಳಿಸಿದರಲ್ಲದೇ ನಗ್ನಗೊಳಿಸಿ ಬಲವಂತವಾಗಿ ಗ್ರಾಮದ ಸುತ್ತ ಓಡಾಡಿಸಿದರು.  ವಿವಾಹಕ್ಕೆ ಮೊದಲು ನಮ್ಮ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎರಡು ದಿನಗಳ ಹಿಂದಷ್ಟೇ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT