ನಟ ಪ್ರಕಾಶ್ ರೈ ನಟಿಸಿರುವ ಜಾಹೀರಾತಿನ ಫಲಕ 
ದೇಶ

ನಟ ಪ್ರಕಾಶ್ ರೈಗೆ 'ಟೆನ್ಷನ್' ತಂದ ಜ್ಯುವೆಲ್ಲರಿ ಜಾಹೀರಾತು

ಮದುವೆ ವಯಸ್ಸಿಗೆ ಬಂದ ಯುವತಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅವಮಾನ ಮಾಡುವ ಮತ್ತು ಅವರ ವರ್ಚಸ್ಸಿಗೆ ಧಕ್ಕೆ ತರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ...

ಚೆನ್ನೈ: ಮದುವೆ ವಯಸ್ಸಿಗೆ ಬಂದ ಯುವತಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅವಮಾನ ಮಾಡುವ ಮತ್ತು ಅವರ ವರ್ಚಸ್ಸಿಗೆ ಧಕ್ಕೆ ತರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಜನಪ್ರಿಯ ನಟ ಪ್ರಕಾಶ್ ರೈ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ನ್ಯಾಯಾಧೀಶರಾದ ಟಿ.ಎಸ್.ಸಿವಗ್ನಾನಮ್ ಮತ್ತು ಜಿ. ಚೋಕಲಿಂಗಂ ಅವರಿದ್ದ ವಿಭಾಗೀಯ ಪೀಠ, ನ್ಯಾಯಾಲಯದ ಅಧಿಕಾರಿಗಳಿಗೆ ಅರ್ಜಿದಾರ ವಿಲ್ಲಿವಕ್ಕಮ್ ನಿವಾಸಿಯಾದ ಎಸ್.ಸಫಿಯತ್ ಗೆ  ಅರ್ಜಿ ಸಂಖ್ಯೆ ನೀಡಲು ಸಹಾಯ ಮಾಡುವಂತೆ ಆದೇಶ ನೀಡಿದ್ದಾರೆ.

ಜಾಹೀರಾತು ಫಲಕಗಳಲ್ಲಿ ಹಾಕಿರುವ ಜಾಹೀರಾತನ್ನು ತೆಗೆದುಹಾಕುವಂತೆ ಅರ್ಜಿದಾರರು ಚೆನ್ನೈ ಪೊಲೀಸ್ ಆಯುಕ್ತರನ್ನು ಕೋರಿದ್ದು, ಪ್ರಕಾಶ್ ರೈ ಅವರು ನಟಿಸಿರುವ ಜಾಹೀರಾತನ್ನು ಎಲ್ಲಾ ಚಾನೆಲ್ ಗಳಿಂದಲೂ ತೆಗೆದುಹಾಕುವಂತೆ ಕೋರಿದ್ದಾರೆ. ಜಾಹೀರಾತಿನಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡದೆ ಒತ್ತಡ ಕೊಡುವವರು ಎಂಬಂತೆ ಬಿಂಬಿಸಲಾಗಿದೆ ಎಂಬುದೇ ದೂರಿಗೆ ಕಾರಣ.

ಈ ಜಾಹೀರಾತನ್ನು ಮುದ್ರಣ ಮತ್ತು ಟಿವಿ ಮಾಧ್ಯಮಗಳಿಂದ ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸಿರುವ ದೂರುದಾರರು ಪ್ರಕಾಶ್ ರೈ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ.

ಪ್ರಕಾಶ್ ರೈಯವರು ಜ್ಯುವೆಲ್ಲರಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ '' ನಿಮ್ಮ ಮಗಳ ಮದುವೆಗೆ ಅವಳ ಆಯ್ಕೆಯ ಬಂಗಾರವನ್ನು ಕಡಿಮೆ ಮಾರುಕಟ್ಟೆ ದರದಲ್ಲಿ ಪಡೆಯುವುದು ಗೊಂದಲವನ್ನುಂಟುಮಾಡಬಹುದು, ನಿಮ್ಮ ಗೊಂದಲಕ್ಕೆ ನಾವು ಜಾಗೃತೆ ತೆಗೆದುಕೊಳ್ಳುತ್ತೇವೆ. ಇದರಿಂದ ನೀವು ನಿಮ್ಮ ಮಗಳ ಮುತುವರ್ಜಿ ವಹಿಸಬಹುದು ಎಂಬುದಾಗಿ ಜಾಹೀರಾತಿನ ಸಾಲುಗಳು ಬರುತ್ತದೆ.

ಪ್ರಕಾಶ್ ರೈ ಸ್ಪಷ್ಟೀಕರಣ: ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ಅರಿತಾಗ ಸ್ಪಷ್ಟೀಕರಣ ನೀಡಿರುವ ಪ್ರಕಾಶ್ ರಾಜ್, ಇದು ಕೇವಲ ಜ್ಯುವೆಲ್ಲರಿ ಜಾಹೀರಾತಿಗೆ ಸಂಬಂಧಪಟ್ಟದ್ದು. ಹೆಣ್ಣು ಮಕ್ಕಳ ಮನಸ್ಸಿಗೆ ನೋವುಂಟು ಮಾಡಲು ಅಥವಾ ಅವರನ್ನು ಅವಮಾನ ಮಾಡುವ ಉದ್ದೇಶ ಇದರಲ್ಲಿಲ್ಲ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಜನರಿಗೆ ಹೆಣ್ಣು ಮಕ್ಕಳೆಂದರೆ ಕಷ್ಟ ಎಂಬ ಭಾವನೆಯಿರುತ್ತದೆ. ಅವರು ಮದುವೆ ವಯಸ್ಸಿಗೆ ಬಂದಾಗ ಇನ್ನೂ ಹೆಚ್ಚಾಗುತ್ತದೆ. ಮಳಿಗೆಯ ಜ್ಯುವೆಲ್ಲರಿ ಬೆಲೆಯನ್ನು ತೋರಿಸಲು, ಚಿನ್ನವನ್ನು ಖರೀದಿಸಲು ಪ್ರೋತ್ಸಾಹಿಸಲು ಮಾತ್ರ ಆ ವಾಕ್ಯವನ್ನು ಬಳಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ನನ್ನನ್ನು ಪ್ರಶ್ನಿಸಿದವರನ್ನು ನಾನು ಗೌರವಿಸುತ್ತೇನೆ. ಉದ್ದೇಶಪೂರ್ವಕವಾಗಿ ಅಲ್ಲ ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT