ಕೇಂದ್ರ ಸಚಿವೆ ಹರ್ಸೀಮ್ರತ್ ಸಿಂಗ್ ಬಾದಲ್ (ಸಂಗ್ರಹ ಚಿತ್ರ) 
ದೇಶ

ಈರುಳ್ಳಿ ಪೇಸ್ಟ್ ಬರುತ್ತಂತೆ!

ಈರುಳ್ಳಿ ದರ ಹೆಚ್ಚುತ್ತಿದೆಯೇ? ಚಿಂತೆ ಮಾಡ್ಬೇಡಿ, ಕೇಂದ್ರ ಸರ್ಕಾರ ಈರುಳ್ಳಿಯನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಕೊಡೋದಿಕ್ಕೆ ಚಿಂತನೆ ನಡೆಸ್ತಿದೆ!

ನವದೆಹಲಿ: ಈರುಳ್ಳಿ ದರ ಹೆಚ್ಚುತ್ತಿದೆಯೇ? ಚಿಂತೆ ಮಾಡ್ಬೇಡಿ, ಕೇಂದ್ರ ಸರ್ಕಾರ ಈರುಳ್ಳಿಯನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಕೊಡೋದಿಕ್ಕೆ ಚಿಂತನೆ ನಡೆಸ್ತಿದೆ!

ಹೇಗೆ, ಎತ್ತ ಎಂಬ ಚಿಂತೆ ಬೇಡ, ಹೀಗಂತ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‍ಸಿಮ್ರತ್ ಸಿಂಗ್ ಬಾದಲ್ ಹೇಳಿದ್ದಾರೆ. ಅವರಿಗೆ ಇಂಥದ್ದೊಂದು ಸೂಪರ್ ಐಡಿಯಾ ಹೊಳೆದಿದೆ. ಇವರ ಪ್ರಕಾರ, ಈರುಳ್ಳಿಗೆ ಕಡಿಮೆ ಬೆಲೆ ಇರುವಾಗ ಅದನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮಾಡಿಟ್ಟುಕೊಳ್ಳಬೇಕು, ಬೆಲೆ ಹೆಚ್ಚಾದಾಗ ಇದನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.   ಮಳೆಗಾಲದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಪರ್ಯಾಯ ಚಿಂತನೆ ಮಾಡಿ, ಅದನ್ನು ಪೇಸ್ಟ್ ಮತ್ತು ಪೌಡರ್ ಮಾಡಿಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.

ಇಂಥ ಕೆಲಸಗಳಿಗಾಗಿ ತಮ್ಮ ಸಚಿವಾಲಯ ಪುಟ್ಟ ಆಹಾರ ಪಾರ್ಕ್ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಲ್ಲಿ ಈರುಳ್ಳಿ ಉತ್ಪಾದಿಸಬಹುದು. ಒಂದು ಕಂಪನಿಗೆ 50 ಎಕರೆಗಿಂತಲೂ ಕಡಿಮೆ ಭೂಮಿ  ಸಾಕು. ಜತೆಗೆ ಸರ್ಕಾರ ರು.1 ಕೋಟಿ ಸಬ್ಸಿಡಿಯನ್ನೂ ನೀಡುತ್ತದೆ ಎಂದಿದ್ದಾರೆ.

700 ಕೆಜಿ ಈರುಳ್ಳಿ ಕದ್ದರು

ಕಳ್ಳರು ಮುಂಬೈನ ಹೊರವಲಯದ ದಾಸ್ತಾನು ಅಂಗಡಿಯೊಂದರಿಂದ ಸುಮಾರು 700 ಕೆಜಿ ಈರುಳ್ಳಿ ಕದ್ದಿದ್ದಾರೆ. ಇದು ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗೆ ನಡೆದಿದೆ ಎಂದು ಹೇಳಲಾಗಿದೆ. ಈ ಈರುಳ್ಳಿ ಬೆಲೆ ಸುಮಾರು ರು.50 ಸಾವಿರ ಇರಬೇಕು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಮತ್ತೆ ಆರು ದಿನ ED ವಶಕ್ಕೆ

SCROLL FOR NEXT