ದೇಶ

ನಾವಿಕರ ವಿರುದ್ಧದ ವಿಚಾರಣೆ ಅಮಾನತು

Mainashree

ನವದೆಹಲಿ: ಕೇರಳ ಕರಾವಳಿಯಲ್ಲಿನ ಮೀನುಗಾರರ ಹತ್ಯೆ ಸಂಬಂಧ ಇಟಲಿ ನಾವಿಕರ ವಿರುದ್ಧದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಮಾನತು ಮಾಡಿದೆ.

ನಾವಿಕರ ವಿರುದ್ಧದ ಪ್ರಕರಣ ಸ್ಥಗಿತಗೊಳಿಸಬೇಕು ಎಂದು ವಿಶ್ವಸಂಸ್ಥೆಯ ನ್ಯಾಯಾಧಿಕರಣ ನೀಡಿದ್ದ ಆದೇಶದನ್ವಯ ಈ ಕ್ರಮ ಕೈಗೊಂಡಿದೆ. ಭಾರತ-ಇಟಲಿ ಸರ್ಕಾರಗಳ ಮನವಿ ಮೇರೆಗೆ ವಿಚಾರಣೆ ಸ್ಥಗಿತಕ್ಕೆ ಒಪ್ಪಿದೆ.

SCROLL FOR NEXT