ರಾಜ್ಯಸಭೆ (ಸಂಗ್ರಹ ಚಿತ್ರ) 
ದೇಶ

ಸೆಲ್ಜಾ ಹೇಳಿಕೆ ಸಂಬಂಧ ಮೇಲ್ಮನೆಯಲ್ಲಿ ಗದ್ದಲ

ಮಾಜಿ ಸಚಿವೆ ಕುಮಾರಿ ಸೆಲ್ಜಾ ಅವರ ಗುಜರಾತ್ ಭೇಟಿ ಹೇಳಿಕೆ ವಿಚಾರದಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಪಿಯೂಶ್ ಗೋಯಲ್ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ..

ನವದೆಹಲಿ: ಮಾಜಿ ಸಚಿವೆ ಕುಮಾರಿ ಸೆಲ್ಜಾ ಅವರ ಗುಜರಾತ್ ಭೇಟಿ ಹೇಳಿಕೆ ವಿಚಾರದಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಪಿಯೂಶ್ ಗೋಯಲ್ ಸದನದ ದಾರಿ ತಪ್ಪಿಸುತ್ತಿದ್ದಾರೆ  ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಬುಧವಾರ ಮೂರು ಸಲ ಮುಂದೂಡಲಾಯಿತು.

ಮಂಗಳವಾರ ಅಸಹಿಷ್ಣುತೆ ಕುರಿತ ಚರ್ಚೆ ವೇಳೆ ಸೆಲ್ಜಾ ಅವರು, ``ಯಪಿಎ ಸಚಿವೆಯಾಗಿದ್ದಾಗ ನಾನು ಗುಜರಾತ್‍ನ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಆಗ ನನ್ನ ಜಾತಿ ಕೇಳಲಾಗಿತ್ತು''  ಎಂದಿದ್ದರು. ನಂತರ ದ್ವಾರಕಾ ದೇವಸ್ಥಾನದ ಸಂದರ್ಶಕರ ಪುಸ್ತಕದಲ್ಲಿ ಸೆಲ್ಜಾ ಬರೆದಿದ್ದ ಒಳ್ಳೆಯ ಅಭಿಪ್ರಾಯವನ್ನು ಸದನದಲ್ಲಿ ಓದಿದ ಅರುಣ್ ಜೇಟ್ಲಿ, ``ಸೆಲ್ಜಾ ಅವರು ಕಾಂಪ್ಲಿಮೆಂಟರಿ ಮಾತನಾಡಿದ್ದಾರೆ'' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ಅದಕ್ಕೆ ಸೆಲ್ಜಾ, ``ನಾನು  ಹೇಳಿದ್ದು ಮುಖ್ಯ ದೇವಸ್ಥಾನದ ಬಗ್ಗೆಯಲ್ಲ, ಬೇಟ್ ದ್ವಾರಕ ಕುರಿತು. ನೀವು ನನ್ನ ಹೇಳಿಕೆ ತಿರುಚುತ್ತಿದ್ದೀರಿ'' ಎಂದು ಆಕ್ಷೇಪಿಸಿದ್ದರು. ಇದೇ ವೇಳೆ ಪಿಯೂಶ್ ಗೋಯಲ್  ಅವರು, ಕಾಂಗ್ರೆಸ್ ಸದಸ್ಯರು ``ಮ್ಯಾನುಫ್ಯಾಕ್ಚರ್ಡ್ ಪ್ರಾಬ್ಲೆಮ್ಸ್ ಮತ್ತು ಮ್ಯಾನುಫ್ಯಾಕ್ಚರ್ಡ್ ಡಿಸ್ ಕ್ರಿಮಿನೇಶನ್'' ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಚುಚ್ಚಿದ್ದರು. ಬುಧವಾರ ಕಲಾಪ  ಆರಂಭವಾಗುತ್ತಿದ್ದಂತೆ ಸಚಿವರಿಬ್ಬರ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿತು. ಹೀಗಾಗಿ ಭೋಜನ ವಿರಾಮಕ್ಕೆ ಮುನ್ನ ಮೂರು ಬಾರಿ ಕಲಾಪ ಮುಂದೂಡಲಾಯಿತು.

ಮಕ್ಕಳ ಮೇಲಿನ ದೌರ್ಜನ್ಯ ಶೇ.53 ಹೆಚ್ಚಳ
ಕಳೆದ ವರ್ಷ ದೇಶಾದ್ಯಂತ ಮಕ್ಕಳ ಮೇಲಿನ ದೌರ್ಜನ್ಯ ಶೇ.53ರಷ್ಟು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಶೇ.9ರಷ್ಟು ಹೆಚ್ಚಿದೆ ಎಂದು ರಾಜ್ಯಸಭೆಗೆ  ತಿಳಿಸಲಾಯಿತು. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‍ಸಿಆರ್‍ಬಿ) ನೀಡಿದ ಅಂಕಿಅಂಶಗಳ ಪ್ರಕಾರ, ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ 89,423 ಪ್ರಕರಣಗಳು 2014ರಲ್ಲಿ ದಾಖಲಾಗಿದ್ದರೆ, 2013ರಲ್ಲಿ  ಈ ಪ್ರಮಾಣ 58,224 ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT