ಸಾಂದರ್ಭಿಕ ಚಿತ್ರ 
ದೇಶ

ಅಪ್ಪನ ಕೊಲೆ ಸೇಡಿಗಾಗಿ 12 ವರ್ಷ ಕಾದ ಪುತ್ರ

ಇದು ಸೇಡಿನ ಸುಳಿಗೆ ಸಿಕ್ಕ ಬಿಸಿರಕ್ತದ ಹುಡುಗನೊಬ್ಬನ ಪಾತಕದ ಕಥೆ. 12 ವರ್ಷದವನಿದ್ದಾಗ ಕಣ್ಣೆದುರೇ ನಡೆದ ತನ್ನ ತಂದೆಯ ಕೊಲೆ...

ಮೊರಾದಾಬಾದ್: ಇದು ಸೇಡಿನ ಸುಳಿಗೆ ಸಿಕ್ಕ ಬಿಸಿರಕ್ತದ ಹುಡುಗನೊಬ್ಬನ ಪಾತಕದ ಕಥೆ. 12 ವರ್ಷದವನಿದ್ದಾಗ ಕಣ್ಣೆದುರೇ ನಡೆದ ತನ್ನ ತಂದೆಯ ಕೊಲೆ ಘಟನೆಯ ಸೇಡು ಆತನ ಮನಸ್ಸೊಳಗೆ 12 ವರ್ಷಗಳ ಕಾಲ ಕುದಿಯುತ್ತಲೇ ಇತ್ತು ಹಾವಿನ ದ್ವೇಷದಂತೆ. ಕೊಲೆ ಮಾಡಿದಾತನಿಗೆ ಅಂತ್ಯ ಹಾಡುವ ದಿನಕ್ಕಾಗಿ ಕಾದಿದ್ದ. ಅಂತೂ ಆತನ ಸ್ನೇಹ ಸಂಪಾದಿಸಿ, ತನ್ನ ಮನೆಗೇ ಕರೆದು, ಕುಡಿಸಿ ಚಾಕುವಿನಿಂದ ಭೀಕರವಾಗಿ ಕತ್ತರಿಸಿ ಹಾಕುವ ಮೂಲಕ ಸೇಡು ತೀರಿಸಿಕೊಂಡ. 
ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 12 ವರ್ಷದ ತನ್ನ ಕಾಯುವಿಕೆಗಾಗಿ ಶವವನ್ನು 12 ತುಂಡುಗಳಾಗಿ ಕತ್ತರಿಸಿ, ಪಾಲಿಬ್ಯಾಗ್‍ನಲ್ಲಿ ಹಾಕಿ ನದಿ ದಡದಲ್ಲಿ ಎಸೆದುಬಂದ.
ಈ ವಿಚಿತ್ರ ಘಟನೆಯ ಪಾತ್ರದಾರಿಗಳು ತನ್ನ ತಂದೆಯ ಕೊಲೆ ಸೇಡು ತೀರಿಸಿಕೊಂಡ 24 ವರ್ಷದ ಆಲಂ ಖಾನ್ ಹಾಗೂ ತಾನೇ ಕೊಂದವನ ಮಗನ ಕೈಯಲ್ಲೇ ಕೊಲೆಯಾದ ಮೊಹಮ್ಮದ್ ರಾಯಸ್. ದೇಹದ ತುಂಡುಗಳು ನದಿ ದಡದಲ್ಲಿ ಕಂಡಾಗ ಜನ ಬೆಚ್ಚಿ ಪೊಲೀಸರಿಗೆ ವಿಷಯ ತಿಳಿಸಿದರು. 
ಆಗ ದೇಹವನ್ನು ಗುರುತಿಸಿದ ಕೊಲೆಯಾದವನ ಸಹೋದರ, ತನ್ನ ಅಣ್ಮ ಕೊನೆಯ ಬಾರಿಗೆ ಕಂಡದ್ದು ಆಲಂ ಖಾನ್ ಮನೆಯಲ್ಲಿ ಎಂದಾಗ ಸುಳಿವು ಬೆನ್ನತ್ತಿಗೆ ಪೊಲೀಸರ ಮುಂದೆ ಆಲಂ ಖಾನ್ ತಪ್ಪೊಪ್ಪಿಕೊಂಡ. ಅಲ್ಲದೆ, ಹನ್ನೆರಡು ವರ್ಷಗಳ ಆಸೆ ಈಡೇರಿದೆ. ಆ ಬಗ್ಗೆ ನನಗೆ ಖುಷಿ ಇದೆ ಎಂದಿದ್ದಾನೆ ಆಲಂ ಖಾನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರ್ ಕಾಲ್ತುಳಿತ ತನಿಖೆಗೆ SIT ರಚನೆ: ಸ್ಥಳದಿಂದ ಓಡಿ ಹೋದ ವಿಜಯ್​​ಗೆ ಮದ್ರಾಸ್ ಹೈಕೋರ್ಟ್ ತರಾಟೆ

'ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕುತ್ತೇವೆ': ಬಾಲ ಬಿಚ್ಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ದ್ವಿವೇದಿ ಎಚ್ಚರಿಕೆ! Video

ಖ್ಯಾತ ಹಿರಿಯ ಪತ್ರಕರ್ತ, ಲೇಖಕ ಟಿಜೆಎಸ್ ಜಾರ್ಜ್ ನಿಧನ

Bengaluru: ಪತ್ನಿ ಜತೆಗಿನ ಲೈಂಗಿಕ ಕ್ರಿಯೆ video ಶೇರ್! ಸ್ನೇಹಿತರೊಂದಿಗೆ ಮಲಗಲು 'ಪಾಪಿ ಪತಿ​' Syed ಒತ್ತಾಯ, ದೂರು ದಾಖಲು!

Cinema Ticket Price: ಸಿನಿಮಾ ಟಿಕೆಟ್ ದರ ಮಿತಿ ತಡೆಯಾಜ್ಞೆ ವಿಸ್ತರಿಸಿದ Karnataka HC; ಮಾರಾಟ, ಮರುಪಾವತಿಗೆ ನಿರ್ದೇಶನ!

SCROLL FOR NEXT