ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ (ಸಂಗ್ರಹ ಚಿತ್ರ) 
ದೇಶ

29 ಸಾವಿರ ಹೊಸ ಟವರ್ ಸ್ಥಾಪನೆ; ಸಂಪರ್ಕ ರಹಿತ ಗ್ರಾಮ 56 ಸಾವಿರ

ಕಾಲ್‍ಡ್ರಾಪ್ ಸಮಸ್ಯೆಯನ್ನು ನಿವಾರಿಸಬೇ ಕೆಂದು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರಿಂದ ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು ದೇಶಾದ್ಯಂತ 29,000 ಹೊಸ ಟವರ್‍ಗಳನ್ನು ಸ್ಥಾಪಿಸಿವೆ..

ನವದೆಹಲಿ: ಕಾಲ್‍ಡ್ರಾಪ್ ಸಮಸ್ಯೆಯನ್ನು ನಿವಾರಿಸಬೇ ಕೆಂದು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದರಿಂದ ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು ದೇಶಾದ್ಯಂತ  29,000 ಹೊಸ ಟವರ್‍ಗಳನ್ನು ಸ್ಥಾಪಿಸಿವೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಕಾಲ್‍ಡ್ರಾಪ್ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ  ನೀಡಿದ  ನಂತರ  ಕಠಿಣ ಕ್ರಮಗಳನ್ನು ಜರುಗಿಸುವ ಕುರಿತು ಕಂಪನಿಗಳಿಗೆ ಎಚ್ಚರಿಕೆ ನೀಡಲಾಯಿತು. ಇದರ ನಂತರದಲ್ಲಿ  ಕಂಪನಿಗಳು ಹೆಚ್ಚಿನ ಟವರ್‍ಗಳನ್ನು ಸ್ಥಾಪಿಸಿವೆ ಎಂದು ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಹ ದೇಶಾದ್ಯಂತ 4,500 ಟವರ್ ನಿರ್ಮಿಸಿದೆ.

ಸಂಪರ್ಕವಿಲ್ಲದ ಹಳ್ಳಿಗಳು:
ದೇಶದಲ್ಲಿ ಇನ್ನೂ 55,669 ಹಳ್ಳಿಗಳು ಮೊಬೈಲ್ ದೂರಸಂಪರ್ಕದಿಂದ ವಂಚಿತವಾಗಿವೆ ಎಂದು ರವಿಶಂಕರ್ ಪ್ರಸಾದ್ ಲೋಕಸಭೆಗೆ ತಿಳಿಸಿದ್ದಾರೆ. ನಗರದ  ಪ್ರದೇಶದಲ್ಲಿ ದೂರಸಂಪರ್ಕ ದಟ್ಟಣೆ ಶೇ.152.36ರಷ್ಟಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಶೇ.48. 79 ರಷ್ಟಿದೆ ಎಂದು ಹೇಳಿದ್ದಾರೆ. ದೇ ಶದ ಲ್ಲಿನ  5,97,608 ಗ್ರಾಮಗಳ ಪೈಕಿ 5,41,939  ಗ್ರಾಮಗಳು ಮೊಬೈಲ್ ಸೇವೆ ವ್ಯಾಪ್ತಿಗೆ ತರಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT